ಆ್ಯಪ್ನಗರ

2000 ರೂಪಾಯಿಗೆ 50 ಮೊಟ್ಟೆ ತಿನ್ನುವ ಚಾಲೆಂಜ್ ಸ್ವೀಕರಿಸಿದ... 41 ಮೊಟ್ಟೆ ತಿನ್ನುವಾಗಲೇ ನಡೆಯಿತು ದುರಂತ...!

ಅವರಿಬ್ಬರು ಸ್ನೇಹಿತರು. ಆದರೆ, ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು 2000 ರೂಪಾಯಿಗೆ ಪಂದ್ಯ ಕಟ್ಟಿದರು. ಅದು 50 ಮೊಟ್ಟೆ ತಿನ್ನುವ ಚಾಲೆಂಜ್...!

Vijaya Karnataka Web 5 Nov 2019, 12:04 pm
ಜಾನ್‌ಪುರ (ಉತ್ತರ ಪ್ರದೇಶ) : ಮೊಟ್ಟೆ ತಿಂದು ವ್ಯಕ್ತಿಯೊಬ್ಬರು ಜೀವ ಬಿಟ್ಟಿದ್ದಾರೆ...! ಹಾಗಂತ, ಇವರು ತಿಂದದ್ದು ಒಂದು ಮೊಟ್ಟೆಯಲ್ಲ... ಬರೋಬ್ಬರಿ 41. ಬದುಕಿದ್ದರೆ ಇವರು 50 ಮೊಟ್ಟೆ ತಿನ್ನಬೇಕಾಗಿತ್ತು...! ಆದರೆ, ಈ ಮೊಟ್ಟೆ ದುರಂತದ ಹಿಂದೆ ದೊಡ್ಡ ಕತೆ ಇದೆ...!
Vijaya Karnataka Web Bizarre Incident
ಸಾಂದರ್ಭಿಕ ಚಿತ್ರ (Image Credit : getty images)


ಸ್ನೇಹಿತನೊಂದಿಗೆ ಮೊಟ್ಟೆ ತಿನ್ನುವ ಚಾಲೆಂಜ್...!

ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ. ಮೊಟ್ಟೆ ತಿಂದು ಮೃತಪಟ್ಟವರ ಹೆಸರು ಸುಭಾಷ್ ಯಾದವ್ (42). ಸುಭಾಷ್ ಮತ್ತು ಅವರ ಸ್ನೇಹಿತ ಬಿಬಿಗಂಜ್ ಮಾರುಕಟ್ಟೆ ಪ್ರದೇಶಕ್ಕೆ ಮೊಟ್ಟೆ ತಿನ್ನಲು ಬಂದಿದ್ದರು. ಈ ವೇಳೆ, ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಒಂದು ಪಂದ್ಯ ಏರ್ಪಟ್ಟಿತ್ತು. ಅದು 2000 ರೂಪಾಯಿಗೆ 50 ಮೊಟ್ಟೆ ತಿನ್ನುವ ಚಾಲೆಂಜ್. ಹೀಗಾಗಿ, ಮೊದಲು ಸವಾಲು ಸ್ವೀಕರಿಸಿದ್ದ ಸುಭಾಷ್ ಮೊಟ್ಟೆ ತಿನ್ನಲು ಆರಂಭಿಸಿದ್ದರು. ಉತ್ಸಾಹದಿಂದಲೇ 41 ಮೊಟ್ಟೆ ತಿಂದು ಮುಗಿಸಿದ್ದರು. ಆದರೆ, 42ನೇ ಮೊಟ್ಟೆ ತಿನ್ನುವಾಗ ಅದೇನಾಯ್ತೋ ಕುಸಿದು ಬಿದ್ದು ಸುಭಾಷ್ ಪ್ರಜ್ಞೆ ಕಳೆದುಕೊಂಡಿದ್ದರು.

Also Read : ಜ್ಯೂನಿಯರ್ ವಿರಾಟ್ ಕೊಹ್ಲಿಯ ಟಿಕ್‌ಟಾಕ್ ವಿಡಿಯೋ ನೋಡಿದ್ದೀರಾ..?

ತಕ್ಷಣ ಅಲ್ಲೇ ಇದ್ದವರು ಸಹಾಯಕ್ಕೆ ಬಂದು ಸಮೀಪದ ಜಿಲ್ಲಾಸ್ಪತ್ರೆಗೆ ಸುಭಾಷ್ ಅವರನ್ನು ದಾಖಲಿಸಿದ್ದರು. ಇಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಅಂತೆಯೇ ಸುಭಾಷ್ ಅವರನ್ನು ಸಂಜಯ್ ಗಾಂಧಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಒಂದು ಗಂಟೆಯ ಬಳಿಕ ಇವರು ಪ್ರಾಣಬಿಟ್ಟಿದ್ದರು.

Also Read : ಕಿಸೆಯಲ್ಲಿ ಇದ್ದದ್ದು ಬರೀ 3 ರೂ., ಬಸ್ ಸ್ಟ್ಯಾಂಡಿನಲ್ಲಿ ಸಿಕ್ಕಿತ್ತು 40,000 ರೂ...! : ಅವರು ಸ್ವೀಕರಿಸಿದ್ದು ಬರೀ 7 ರೂ...!

ಅತಿಯಾಗಿ ತಿಂದಿದ್ದರಿಂದಲೇ ಸುಭಾಷ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಕುಟುಂಬದ ಸದಸ್ಯರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Also Read : `ನಾನು ಸಿಂಹಿಣಿ. ನನಗಿದು ಪುನರ್ಜನ್ಮ...!' : ಹೀಗೆನ್ನುತ್ತಿರುವವರು ಯಾರು ಗೊತ್ತಾ...?

ಎಂತಹ ದುರಂತ ಅಲ್ವಾ...? ಬರೀ ಮೊಟ್ಟೆ ಇಲ್ಲೊಬ್ಬರ ಜೀವ ತೆಗೆದಿದೆ. ಈ ಚಾಲೆಂಜ್ ಸ್ವೀಕರಿಸದೇ ಇದ್ದಿದ್ದರೆ ಇವತ್ತು ಇವರ ಜೀವ ಉಳಿಯುತ್ತಿತ್ತೇನೋ ಅಲ್ವಾ...?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ