ಆ್ಯಪ್ನಗರ

ನೀರಿನಲ್ಲೂ ಧಗಧಗಿಸುವ ಅಗ್ನಿ...! : ಅಚ್ಚರಿ ಮೂಡಿಸಿದೆ ಬೆಂಕಿಯುಗುಳುವ ನಲ್ಲಿ...!

ನಲ್ಲಿ ನೀರಿನಲ್ಲಿ ಬೆಂಕಿ ಧಗಧಗಿಸುವ ಭಯಾನಕ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯ ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದಾರೆ...!

Vijaya Karnataka Web 26 Nov 2020, 9:32 am
ಬೆಂಕಿ ನೀರಿಗೆ ಹೆದರುತ್ತದೆ... ಧಗಧಗಿಸುವ ಬೆಂಕಿಯನ್ನು ನಂದಿಸಲು ತಕ್ಷಣಕ್ಕೆ ಬೇಕಾಗಿದ್ದು ನೀರೇ... ಇದು ಪ್ರಕೃತಿ ನಿಯಮ. ಆದರೆ, ನೀರಿನಲ್ಲಿಯೇ ಬೆಂಕಿ ಉರಿದರೆ...? ಖಂಡಿತಾ ಅಚ್ಚರಿ, ಭಯ, ಕುತೂಹಲ ಮೂಡುತ್ತದೆ... ಇದು ಕೂಡಾ ಅಂತಹದ್ದೇ ಒಂದು ಭಯಾನಕ ದೃಶ್ಯ...!
Vijaya Karnataka Web Image by Hans Braxmeier from Pixabay
| Representative image | Image by Hans Braxmeier from Pixabay


ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವೊಂದು ದೃಶ್ಯಗಳು ಒಂದು ಕ್ಷಣ ನಮ್ಮನ್ನು ಅಚ್ಚರಿಗೆ ತಳ್ಳುತ್ತವೆ. ನಂಬಲು ಸಾಧ್ಯವೇ ಇಲ್ಲದಂತಹ ಇಂತಹ ಕೆಲ ಘಟನೆಗಳು ಬಹುಕಾಲ ನಮ್ಮನ್ನು ಕಾಡಲಾರಂಭಿಸುತ್ತವೆ. ಇದು ಕೂಡಾ ಅದೇ ರೀತಿಯ ಭಯಾನಕ ಘಟನೆ. ಈ ದೃಶ್ಯ ಸೆರೆಯಾಗಿದ್ದು ಈಶಾನ್ಯ ಚೀನಾದ ಲಿಯಾನಿಂಗ್ ಪ್ರಾಂತ್ಯದ ಪಂಜಿನ್ ನಗರದಲ್ಲಿ. ಇಲ್ಲೊಂದು ಕಡೆ ನಲ್ಲಿ ಕೂಡಾ ಬೆಂಕಿಯುಗುಳುತ್ತದೆ. ನೀರು ಬಿದ್ದೊಡನೆ ಈ ಬೆಂಕಿ ಇನ್ನಷ್ಟು ಧಗಧಗಿಸುತ್ತದೆ...!

Also Read : ಮಾಲಿಕರಿಗೆ ತನ್ನ ಬಗ್ಗೆ `ಚಾಡಿ' ಹೇಳಿದ್ದಕ್ಕೆ ಜೊತೆಗಾರ ಶ್ವಾನದ ಮೇಲೆ ಕೋಪ! : ಬಲು ತಮಾಷೆಯ ದೃಶ್ಯವಿದು

ಸ್ಥಳೀಯ ಮಹಿಳೆ ವೆನ್ ಎಂಬವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, `ಮೂರರಿಂದ ನಾಲ್ಕು ವರ್ಷಗಳಿಂದ' ತನ್ನ ಕುಟುಂಬ ಈ ನಲ್ಲಿ ಬೆಂಕಿಯುಗುಳುವ ಸಮಸ್ಯೆಯಿಂದ ನಲುಗಿ ಹೋಗಿದೆ ಎಂದು ಹೇಳಿಕೊಂಡಿದ್ದಾರೆ. ಕೊಳಾಯಿ ತೆರೆದಾಗ ಹರಿಯುವ ನೀರಿಗೆ ವ್ಯಕ್ತಿಯೊಬ್ಬರು ಲೈಟರ್ ಹಿಡಿಯುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ಲೈಟರ್ ಹಿಡಿದ ತಕ್ಷಣ ನೀರಿಗೆ ಬೆಂಕಿ ಹತ್ತಿಕೊಳ್ಳುತ್ತದೆ...! ಈ ದೃಶ್ಯವನ್ನು ನೋಡುವಾಗಲೇ ಭಯವಾಗುತ್ತದೆ.


Also Read : ಹಿಮದಲ್ಲಿ ಶ್ವಾನದ ಮರಿಯ ಖುಷಿ ಆಟ : ಮನ ಸೆಳೆಯುತ್ತದೆ ಮುದ್ದಾದ ದೃಶ್ಯ

ಈ ಬಗ್ಗೆ ವೆನ್ ತಂದೆ ನೀರು ಸರಬರಾಜು ಕಂಪನಿಗೆ ದೂರು ನೀಡಿದ್ದರಂತೆ. ಆದರೆ, ಕಂಪನಿಯೂ ಯಾವುದೇ ಸಹಾಯ ಮಾಡಿಲ್ಲ, ಬದಲಾಗಿ ಇದು `ನಮ್ಮ ಕೈಯಲ್ಲಿ ಇಲ್ಲ' ಎಂದು ಹೇಳಿ ಇಲ್ಲಿನ ಸಿಬ್ಬಂದಿ ಕೈತೊಳೆದುಕೊಂಡಿದ್ದರಂತೆ. ಬರೀ ವೆನ್ ಅವರ ಕುಟುಂಬವೊಂದೇ ಈ ರೀತಿಯ ಸಮಸ್ಯೆ ಎದುರಿಸುತ್ತಿಲ್ಲ. ಇಲ್ಲಿನ ಸುಮಾರು 100ಕ್ಕೂ ಅಧಿಕ ಕುಟುಂಬಗಳು ಇದೇ ರೀತಿಯ ಸಮಸ್ಯೆಯೊಂದಿಗೆ ವಾಸಿಸುತ್ತಿವೆ ಎಂಬುದು ವೆನ್ ಆರೋಪ.

Also Read : ಅಬ್ಬಬ್ಬಾ! ಬೆನ್ನಟ್ಟಿಕೊಂಡು ಬಂದು ದಾಳಿ ಮಾಡಿದ ಹುಲಿ! : ಭಯಾನಕ ದೃಶ್ಯವಿದು

ಸದ್ಯ ಇದೇ ವಿಡಿಯೋ ಹಲವು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಎಲ್ಲರೂ ಈ ದೃಶ್ಯ ಕಂಡು ಆತಂಕಗೊಂಡಿದ್ದಾರೆ. ಯಾವಾಗ ಈ ದೃಶ್ಯ ವೈರಲ್ ಆಯಿತೋ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಜೊತೆಗೆ, `ಈ ರೀತಿಯ ಸಮಸ್ಯೆ ಎದುರಿಸುತ್ತಿರುವ ಪ್ರದೇಶಕ್ಕೆ ತಾತ್ಕಾಲಿಕವಾಗಿ ನೀರು ಸರಬರಾಜು ಸ್ಥಗಿತಗೊಳಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ' ಎಂದು ತಿಳಿಸಿದ್ದರು. ಇದಾದ ಬಳಿಕ ಮರುದಿನ ಮತ್ತೆ ತಜ್ಞರ ಪರಿಶೀಲನೆಯ ಬಳಿಕ `ಅಲ್ಪ ಪ್ರಮಾಣದ ನೈಸರ್ಗಿಕ ಅನಿಲ ಅಂತರ್ಜಲಕ್ಕೆ ಸೋರಿಕೆಯಾಗುವುದರಿಂದ ನೀರು ಉರಿಯುತ್ತಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಜನರಿನ್ನೂ ಆತಂಕದಿಂದ ಬದುಕುತ್ತಿದ್ದಾರೆ. ಇನ್ನು, ಈ ದೃಶ್ಯ ಕಂಡ ನೆಟ್ಟಿಗರು ಕೂಡಾ ಶಾಕ್‌ಗೊಳಗಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ