ಆ್ಯಪ್ನಗರ

ಮಾಜಿ ಲವರ್‌ ವಿರುದ್ಧದ ಸೇಡಿಗೆ ಈಕೆ ಮಾಡಿದ್ದೇನು ಗೊತ್ತಾ?: ಯಾರ್ ಕೊಟ್ಟರೋ ಈ ಐಡಿಯಾ!

ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ವಿರುದ್ಧ ವಿಭಿನ್ನವಾಗಿ ಸೇಡು ತೀರಿಸಿಕೊಂಡಿದ್ದಾಳೆ. ಆದರೆ, ಸೇಡು ತೀರಿಸಲು ಈಕೆ ಮಾಡಿ ಐಡಿಯಾ ವಿಚಿತ್ರವಾಗಿದೆ...

Vijaya Karnataka Web 20 May 2020, 9:38 am
`ನಿನ್ನಿಂದಾಗಿ ನಾನು ಅತ್ತಿದ್ದೇನೆ... ಈಗ ನಿನ್ನ ಸರದಿ...' ಹೀಗಂತ ನೊಂದು ಸೇಡಿನ ಶಪಥಗೈದಿದ್ದ ಆ ಯುವತಿ ಮಾಜಿ ಪ್ರಿಯಕರ ಕೂಡಾ ತನ್ನಂತೆಯೇ ಕಣ್ಣೀರು ಹಾಕಬೇಕೆಂದು ಬಯಸಿದ್ದಳು. ಆದರೆ, ಆತನ ಕಣ್ಣಲ್ಲಿ ನೀರು ತರಿಸಲು ಈಕೆ ಮಾಡಿದ್ದೇನು ಗೊತ್ತಾ...? ಒಂದು ಟನ್‌ನಷ್ಟು ಈರುಳ್ಳಿಯನ್ನು ಈತನ ಮನೆಗೆ ಕಳುಹಿಸಿದ್ದು...! ಕೇಳಿದಾಗ ವಿಚಿತ್ರ ಆಗುತ್ತದೆಯಲ್ವಾ...? ಆದರೆ, ಇದು ನಿಜ...
Vijaya Karnataka Web Image by Alexas_Fotos from Pixabay
| Representative image | Image by Alexas_Fotos from Pixabay


Also Read : ಅಪಘಾತಗಳನ್ನೇ ಕಂಡಿದ್ದ ಆ ರಸ್ತೆಯಲ್ಲಿ ಕಾಡುತ್ತಲಿದೆ ಮಕ್ಕಳ ನೋವಿನ ಛೀತ್ಕಾರದ ನೆನಪು!
ಇದು ಚೀನಾದಲ್ಲಿ ನಡೆದ ಘಟನೆ. ಹೀಗೆ ಮಾಜಿ ಪ್ರಿಯಕರನ ಮನೆಗೆ ಈರುಳ್ಳಿ ಕಳುಹಿಸಿದ್ದ ಝಾವೋ ಎಂಬ ಈ ಯುವತಿ ಅದರಲ್ಲಿ ಒಂದು ಚೀಟಿಯನ್ನು ಬರೆದಿದ್ದಳು. `ನಾನು ಅತ್ತಿದ್ದೇನೆ. ಇನ್ನು ನೀನು ಅಳು' ಎಂಬ ಸಂದೇಶವದು. ಈಕೆ ಹೀಗೆ ಬರಲು ಕಾರಣವೂ ಇದೆ. ಅದೇನೆಂದರೆ, ಇವರಿಬ್ಬರು ಪರಸ್ಪರ ದೂರವಾದಾಗ ಪ್ರಿಯಕರ ಬೇಸರದಲ್ಲಿ ಒಂದೇ ಒಂದು ಹನಿ ಕಣ್ಣೀರಿಟ್ಟಿರಲಿಲ್ಲವಂತೆ...! ಅಂತೆಯೇ, ಈ ಯುವಕ ತನ್ನ ಮನೆ ಬಾಗಿಲ ಮುಂದೆ ಟನ್‌ಗಟ್ಟಲೆ ಈರುಳ್ಳಿ ಕಂಡು ಒಂದು ಕ್ಷಣ ದಂಗಾಗಿದ್ದ. ಈತನಿಗೂ ಈ ಚೀಟಿ ನೋಡಿದಾಗಲೇ ಗೊತ್ತಾಗಿದ್ದು ಇದು ಮಾಜಿ ಪ್ರಿಯತಮೆಯ ನೋವಿನ ಮತ್ತು ಸೇಡಿನ ಗಿಫ್ಟ್‌ ಎಂದು.

Also Read : ಪತ್ನಿ ಮಾಡಿದ ಅಡುಗೆ `ಸ್ಪೈಸಿ' ಆಗ್ತಿಲ್ಲವೆಂದು ಬಾಲ್ಕನಿಯಲ್ಲಿ ನೇತಾಡಿದ ಭೂಪ!

ಈ ಯುವತಿ ಮತ್ತು ಯುವಕ ಸುಮಾರು ಒಂದು ವರ್ಷದಿಂದ ಪ್ರೀತಿಸುತ್ತಿದ್ದರಂತೆ. ಜೊತೆಯಾಗಿಯೇ ಇದ್ದರಂತೆ. ಆದರೆ, ಯುವಕ ಈಕೆಗೆ ಮೋಸ ಮಾಡಿದ್ದನಂತೆ. ಹೀಗಾಗಿ, ಇವರಿಬ್ಬರು ಪರಸ್ಪರ ದೂರವಾಗಿದ್ದರು. ಇದೇ ನೋವಲ್ಲಿ ಈಕೆ ಈ ರೀತಿ ಸೇಡು ತೀರಿಸಿಕೊಂಡಿದ್ದಾಳೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Also Read : ಶ್ವಾನಕ್ಕೆ ಡಾಕ್ಟರೇಟ್ : ಹೃದಯವಂತನಿಗೆ ಬಹುದೊಡ್ಡ ಗೌರವ ಪ್ರದಾನ

ಯುವಕನಿಗೆ ಗೊತ್ತೇ ಆಗದಂತೆ ಈ ಸಾವಿರ ಕೇಜಿ ಈರುಳ್ಳಿಯನ್ನು ಆತನ ಮನೆ ಬಾಗಿಲಿನ ಮುಂದೆ ಇಟ್ಟು ಬರಬೇಕೆಂದು ಯುವತಿ ಈ ಮೂಟೆ ಕೊಂಡೊಯ್ದಿದ್ದವರಿಗೆ ತಾಕೀತು ಮಾಡಿದ್ದಳಂತೆ. ಸದ್ಯ ಮನೆ ಬಾಗಿಲಿನಲ್ಲಿ ಈರುಳ್ಳಿ ಮೂಟೆ ಇರುವ ಫೋಟೋ, ವಿಡಿಯೋಗಳು ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಆದರೆ, ಈ ಒಂದು ಟನ್ ಈರುಳ್ಳಿಯನ್ನು ಕಂಡ ತಕ್ಷಣ ಈ ಯುವಕನ ಪ್ರತಿಕ್ರಿಯೆ ಹೇಗಿತ್ತು...? ನಿಜವಾಗಿಯೂ ಈತ ಕಣ್ಣೀರಿಟ್ಟನಾ ಗೊತ್ತಿಲ್ಲ. ಆ ಈರುಳ್ಳಿಯನ್ನು ಈತ ಏನು ಮಾಡಿದ ಎಂಬುದು ಅಸ್ಪಷ್ಟ ಅಥವಾ ಪ್ರಚಾರಕ್ಕಾಗಿ ಈ ರೀತಿ ಮಾಡಲಾಗಿದೆಯಾ ಎಂಬುದೂ ಗೊತ್ತಾಗಿಲ್ಲ. ಆದರೆ, ಈ ಘಟನೆ ಸದ್ಯ ಚೀನಾದಲ್ಲಿ ಸಖತ್ ಚರ್ಚೆಯನ್ನು ಹುಟ್ಟು ಹಾಕಿದ್ದಂತೂ ಸತ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ