ಆ್ಯಪ್ನಗರ

ವಿವಿ ಕ್ಯಾಂಪಸ್ ರಸ್ತೆಯಲ್ಲಿ 29 ಟನ್ ಕ್ಯಾರೆಟ್‌ ಸುರಿದ ಟ್ರಕ್...! : ಜನ ಫುಲ್ ಶಾಕ್...!

ಲಂಡನ್‌ ವಿವಿ ಕ್ಯಾಂಪಸ್ ರಸ್ತೆಯಲ್ಲಿ ಸುರಿಯಲಾದ 29,000 ಕೆಜಿ ಕ್ಯಾರೆಟ್‌ನ ಫೋಟೋ, ವಿಡಿಯೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯ ಕಂಡು ಜನ ಶಾಕ್ ಆಗಿದ್ದಾರೆ.

Vijaya Karnataka Web 1 Oct 2020, 1:21 pm
ಅದು ಲಂಡನ್‌ನ ಪ್ರಮುಖ ವಿವಿಯೊಂದರ ರಸ್ತೆ. ಈ ರಸ್ತೆಯಲ್ಲಿ ಹಲವು ಟ್ರಕ್‌ಗಳಲ್ಲಿ ಕ್ಯಾರೆಟ್ ತಂದು ಸುರಿಯಲಾಗಿದೆ. ಬರೋಬ್ಬರಿ 29,000 ಕೆಜಿ ಕ್ಯಾರೆಟನ್ನು ಇಲ್ಲಿ ತಂದು ಹಾಕಲಾಗಿದೆ. ಈ ಇಪತ್ತೊಂಬತ್ತು ಟನ್ ಕ್ಯಾರೆಟ್ ಕಂಡು ಜನ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ.
Vijaya Karnataka Web Carrots
| Screengrab from video | Courtesy : @fromscratch11/Twitter


ದಕ್ಷಿಣ ಲಂಡನ್‌ನ ಗೋಲ್‌ಡ್ಸ್ಮಿತ್ಸ್‌ ಕಾಲೇಜಿನ ಹೊರಗೆ ಹೀಗೆ ಭಾರೀ ಪ್ರಮಾಣದ ಕ್ಯಾರೆಟನ್ನು ತಂದು ಸುರಿಯಲಾಗಿದೆ. ಇದು ಯಾಕೆ...? ಎಂದು ಜನರಿಗೂ ಗೊತ್ತಾಗಿರಲಿಲ್ಲ. ಹೀಗಾಗಿ, ಜನ ತಮ್ಮ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಕ್ಯಾರೆಟ್ ತಂದು ಸುರಿಯುವ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದರು. ಟ್ರಕ್ ಬಂದು ಕ್ಯಾರೆಟನ್ನು ಸುರಿಯುವ ವಿಡಿಯೋಗಳೂ ಇಲ್ಲಿದ್ದವು. ಹೀಗೆ ಫೋಟೋ, ವಿಡಿಯೋ ಶೇರ್ ಮಾಡಿಕೊಂಡಿದ್ದ ಜನ `ಗೋಲ್‌ಡ್ಸ್ಮಿತ್ಸ್‌ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಭಾರೀ ಪ್ರಮಾಣದ ಕ್ಯಾರೆಟ್‌ಗಳನ್ನು ಏಕೆ ಎಸೆಯಲಾಗಿದೆ ಎಂದು ಯಾರಿಗಾದರೂ ತಿಳಿದಿದೆಯೇ...?' ಎಂದು ಕೇಳಿದರು.


Also Read : ತೂಕಡಿಸುವ ಬಾತುಕೋಳಿ ಮರಿ : ತಮ್ಮ ಓದಿನ ಕ್ಷಣಗಳನ್ನು ನೆನಪಿಸಿಕೊಂಡ ನೆಟ್ಟಿಗರು!

ಹಲವರು ಈ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಹೀಗೆ ತಮ್ಮ ಕ್ಯಾಂಪಸ್‌ನಲ್ಲಿ ಕ್ಯಾರೆಟ್ ತಂದು ಸುರಿಯಲಾಗುತ್ತಿರುವ ದೃಶ್ಯಗಳು ವೈರಲ್ ಆಗುತ್ತಿದ್ದಂತೆಯೇ ಗೋಲ್‌ಡ್ಸ್ಮಿತ್ಸ್‌ ಕಾಲೇಜು ಇದಕ್ಕೆ ಪ್ರತಿಕ್ರಿಯೆ ನೀಡಿದೆ. ಕಾಲೇಜಿನ ವಿದ್ಯಾರ್ಥಿಗಳ ಕಲಾ ಪ್ರದರ್ಶನಕ್ಕೆ ಬೇಕಾಗಿ ಇಷ್ಟು ಪ್ರಮಾಣದ ಕ್ಯಾರೆಟ್‌ಗಳನ್ನು ತರಿಸಲಾಗಿದೆ. ಈ ಕಲಾಪ್ರದರ್ಶನ ಕಾಲೇಜಿನ ಎಂಎಫ್‌ಎ ಡಿಗ್ರಿ ಶೋ ಆಗಿದ್ದು, ಈ ಕಲಾಶಿಲ್ಪಕ್ಕೆ `ಗ್ರೌಂಡಿಂಗ್' ಎಂದು ಹೆಸರಿಡಲಾಗಿದೆ. ಕಲಾವಿದ ಮತ್ತು ಎಂಎಫ್‌ಎ ವಿದ್ಯಾರ್ಥಿ ರಾಫೆಲ್ ಪೆರೆಜ್ ಇದನ್ನು ನಿರ್ಮಿಸುತ್ತಿದ್ದಾರೆ' ಎಂದು ಕಾಲೇಜು ಸ್ಪಷ್ಟನೆ ನೀಡಿದೆ.

Also Read : ಮೀನಿಗೆ ಜೀವದಾನ ನೀಡಿದ ಶ್ವಾನ : ಮುದ್ದು ಪ್ರಾಣಿಯ ಹೃದಯವಂತಿಕೆಗೆ ಬೆರಗಾಗಲೇಬೇಕು


Also Read : ಅಸ್ಥಿಪಂಜರದೊಂದಿಗೆ ಮುದ್ದು ಕಂದನ ಸ್ನೇಹ...! : ಅಚ್ಚರಿಯ ವಿಡಿಯೋ ವೈರಲ್

ಇನ್ನು, ಕಲಾವಿದ ರಾಫೆಲ್ ಪೆರೆಜ್ ಕೂಡಾ ಮಾಹಿತಿ, `ಜನರು ಬಳಸಲಾರದಂತಹ ಕ್ಯಾರೆಟ್‌ಗಳು ಇದಾಗಿವೆ. ಯುಕೆಯಲ್ಲಿರುವ ಆಹಾರ ಉದ್ಯಮಗಳು ಬಳಸಲು ಯೋಗ್ಯವಾಗಿಲ್ಲ ಎಂದು ಬಿಟ್ಟಿರುವ ಕ್ಯಾರೆಟ್‌ಗಳಾಗಿವೆ' ಎಂದು ತಿಳಿಸಿದ್ದಾರೆ. ಗ್ರಾಮೀಣ ಮತ್ತು ನಗರದ ನಡುವಣ ಉದ್ವಿಗ್ನತೆಯನ್ನು ಪ್ರತಿನಿಧಿಸುವ ಕಲಾಕೃತಿ ಇದಾಗಿದೆ. ಯುರೋಪಿನ ರೈತರು ತಿರಸ್ಕರಿಸಲ್ಪಟ್ಟ ತಮ್ಮ ಉತ್ಪನ್ನಗಳನ್ನು ಪ್ರತಿಭಟನೆಯ ರೂಪದಲ್ಲಿ ಎಸೆಯುವುದರಿಂದ ಪ್ರೇರಣೆ ಪಡೆದು ಈ ಕಲಾಕೃತಿ ರಚಿಸಲಾಗುತ್ತಿದೆ' ಎಂದು ತಿಳಿಸಿದ್ದಾರೆ. ಜೊತೆಗೆ, ಈ ಪ್ರದರ್ಶನ ಮುಗಿದ ಬಳಿಕ ಈ ಎಲ್ಲಾ ಕ್ಯಾರೆಟ್‌ಗಳನ್ನು ಪ್ರಾಣಿಗಳ ಆರೈಕೆ ಕೇಂದ್ರಗಳಿಗೆ ದಾನವಾಗಿ ನೀಡಲಾಗುವುದು ಎಂದೂ ಇವರು ಸ್ಪಷ್ಟಪಡಿಸಿದ್ದಾರೆ. ಸದ್ಯ ಈ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿರುವ ಜೊತೆಗೆ ಇದರ ಬಗ್ಗೆ ಪರ ವಿರೋಧದ ಚರ್ಚೆ ಕೂಡಾ ನೆಟ್ಟಿಗರಲ್ಲಿ ಶುರುವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ