ಆ್ಯಪ್ನಗರ

24 ವರ್ಷದ ಗೆಳತಿಯನ್ನು ಕೊಂದು ಕೈ ತುಂಡು ಮಾಡಿ ನದಿಗೆಸೆದ ಪ್ರೊಫೆಸರ್...!

ಸೇಂಟ್ ಪೀಟರ್ಸ್‌ಬಗ್ ವಿಶ್ವವಿದ್ಯಾನಿಲಯದ ಇತಿಹಾಸ ಪ್ರೊಫೆಸರ್ ವಿರುದ್ಧ ತನ್ನ ಗೆಳತಿಯನ್ನೇ ಕೊಂದ ಆರೋಪವೀಗ ಕೇಳಿ ಬಂದಿದೆ. ಪ್ರೊಫೆಸರ್ ಬ್ಯಾಗಿನಲ್ಲಿ ಸಿಕ್ಕ ಮನುಷ್ಯರ ತೋಳಿನ ತುಂಡಿನ ಜಾಡು ಹಿಡಿದ ಪೊಲೀಸರ ಎದುರು ಬಿಚ್ಚಿಕೊಂಡಿತ್ತು ಭಯಾನಕ ಕೊಲೆ ರಹಸ್ಯ...!

Vijaya Karnataka Web 12 Nov 2019, 2:52 pm
ಸೇಂಟ್ ಪೀಟರ್ಸ್‌ಬಗ್ : ಅದು ಮೊಯಿಕಾ ನದಿ. ಅಲ್ಲಿಗೆ ಬಂದಿದ್ದ ಸೇಂಟ್ ಪೀಟರ್ಸ್‌ಬಗ್‌ನ ವಿಶ್ವವಿದ್ಯಾನಿಲಯದ ಇತಿಹಾಸದ ಪ್ರೊಫೆಸರ್ ಒಲೆಗ್ ಸೊಕೊಲೊವ್ (63) ಜಾರಿ ನದಿಗೆ ಬಿದ್ದಿದ್ದರು. ತಕ್ಷಣ ಅಲ್ಲೇ ಇದ್ದ ಪೊಲೀಸರು ಇವರನ್ನು ರಕ್ಷಿಸಿದ್ದರು... ಆದರೆ, ಪ್ರೊಫೆಸರನ್ನು ರಕ್ಷಿಸಿದ ಬಳಿಕ ಸ್ವತಃ ಪೊಲೀಸರೇ ದಂಗಾಗಿದ್ದರು. ಯಾಕೆಂದರೆ, ಆ ಪ್ರೊಫೆಸರ್ ಬ್ಯಾಗಿನಲ್ಲಿ ತುಂಡು ಮಾಡಿದ ಮನುಷ್ಯನ ತೋಳುಗಳಿದ್ದವು...! ಜೊತೆಗೆ, ಒಂದು ಪಿಸ್ತೂಲ್ ಕೂಡಾ ಇತ್ತು...!
Vijaya Karnataka Web Russian professor
ಪ್ರೊಫೆಸರ್ ಒಲೆಗ್ ಸೊಕೊಲೊವ್ (Image Credit : Leonid Ragozin/twitter)


Also Read : ಕೊಳೆತ ಶವಗಳೊಂದಿಗೆ 2 ತಿಂಗಳು ಮನೆಯೊಳಗೆ ವಾಸವಾಗಿದ್ದಳು ಮಹಿಳೆ...!

ಗೆಳತಿಯನ್ನು ಕೊಂದಿದ್ದ ಪ್ರೊಫೆಸರ್...!
ಅಸಲಿಗೆ ಒಲೆಗ್ ಸೊಕೊಲೊವ್ ತನ್ನ 24 ವರ್ಷದ ಗೆಳೆತಿಯನ್ನು ಕೊಂದು ದೇಹವನ್ನು ತುಂಡು ಮಾಡಿ ಕೈಗಳನ್ನು ನದಿಗೆ ಎಸೆಯಲು ಬಂದಿದ್ದರು...! ಒಲೆಗ್ ಸೊಕೊಲೊವ್ ಕೊಂದಿದ್ದು ಸೇಂಟ್ ಪೀಟರ್‌ಬರ್ಗ್ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯನ್ನು. ಈ ವಿದ್ಯಾರ್ಥಿನಿ ಮೂರು ವರ್ಷದಿಂದ ಪ್ರೊಫೆಸರ್ ಜೊತೆಗೇ ಇದ್ದರು. ಪ್ರೊಫೆಸರ್ ಮಾಡಿದ್ದ ಹಲವು ಅಧ್ಯಯನ, ಸಂಶೋಧನೆಗಳಿಗೆ ಈಕೆಯೂ ನೆರವಾಗಿದ್ದರು. ಆದರೆ, ಮೊನ್ನೆ ಅದೆನೋ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿ ಪ್ರೊಫೆಸರ್ ಆಕೆಯನ್ನು ಶೂಟ್ ಮಾಡಿ ಕೊಂದಿದ್ದರು. ಬಳಿಕ ದೇಹವನ್ನು ತುಂಡು ಮಾಡಿ ಯಾರಿಗೂ ಗೊತ್ತಾಗದಂತೆ ವಿಲೇವಾರಿ ಮಾಡುವ ಸಂಚು ಪ್ರೊಫೆಸರ್‌ನದ್ದಾಗಿತ್ತು. ಅಷ್ಟರಲ್ಲಿ ಈ ಪ್ರೊಫೆಸರ್ ಪ್ಲ್ಯಾನ್‌ಗಳೆಲ್ಲಾ ಉಲ್ಟಾ ಆಗಿತ್ತು...!


Also Read : ವ್ಯಕ್ತಿಯೊಬ್ಬನ ಕಿವಿಯೊಳಗಿತ್ತು ಜಿರಳೆಗಳ ಕುಟುಂಬ...!

ಸದ್ಯ ಪೊಲೀಸರು ಯುವತಿ ಮನೆಯಲ್ಲಿ ಆಕೆಯ ದೇಹವನ್ನು ಪತ್ತೆ ಹಚ್ಚಿದ್ದಾರೆ. ಜೊತೆಗೆ, ದೇಹವನ್ನು ತುಂಡು ಮಾಡಲು ಬಳಸಿದ್ದ ಆಯುಧಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಆತ್ಮಹತ್ಯೆಗೆ ನಿರ್ಧಾರ...!
ಯುವತಿಯ ದೇಹವನ್ನು ವಿಲೇವಾರಿ ಮಾಡಿದ ಬಳಿಕ ಒಲೆಗ್ ಸೊಕೊಲೊವ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ಲಾನ್‌ ರೂಪಿಸಿದ್ದಾಗಿಯೂ ಪೊಲೀಸರು ತಿಳಿಸಿದ್ದಾರೆ. ಇನ್ನು, ವಿವಿಯ ವಿದ್ಯಾರ್ಥಿನಿಯರು ಹೇಳುವ ಪ್ರಕಾರ ಪ್ರೊಫೆಸರ್ ನಡವಳಿಕೆ ಸರಿ ಇರಲಿಲ್ಲವಂತೆ. ವಿಲಕ್ಷಣ ನಡವಳಿಕೆ ಹೊಂದಿದ್ದ ಈ ಪ್ರೊಫೆಸರ್ ಬಗ್ಗೆ ವಿವಿಯ ವಿದ್ಯಾರ್ಥಿನಿಯೊಬ್ಬರು ಈ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದರಂತೆ. ಇನ್ನೊಬ್ಬರು ವಿದ್ಯಾರ್ಥಿನಿ ಕೊಟ್ಟ ದೂರಿಗೆ ವಿವಿ ಆಡಳಿತ ಮಂಡಳಿ ಯಾವುದೇ ರೀತಿಯಲ್ಲಿ ಸ್ಪಂದಿಸಿರಲಿಲ್ಲವಂತೆ.

Also Read : ಈ ಕೋಟೆಯೊಳಗೆ ರಾತ್ರಿ ಹೋದವರು ಯಾರೂ ವಾಪಸ್ ಬಂದಿಲ್ಲವಂತೆ...!

ಬಹುಶಃ ದೂರು ಬಂದಾಗಲೇ ಕ್ರಮ ಕೈಗೊಂಡಿದ್ದರೆ ಇವತ್ತು ಈ ಯುವತಿ ಬದುಕುತ್ತಿದ್ದರೋ ಏನೋ... ಏನೋ ಮಾಡಲು ಹೋಗಿ ಪ್ರೊಫೆಸರ್ ಕಂಬಿ ಹಿಂದೆ ಬಂಧಿಯಾದರೆ, ಅಮಾಯಕ ಯುವತಿ ವಿನಾಕಾರಣ ಜೀವ ಬಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ