ಆ್ಯಪ್ನಗರ

ಹಿಮದಲ್ಲಿ ವಾಹನ ಪಾರ್ಕ್‌ ಮಾಡುವುದೇ ಕಷ್ಟ : ಪ್ರವಾಸದ ಯೋಜನೆ ವೇಳೆ ಹವಾಮಾನದ ಬಗೆಗೂ ಇರಲಿ ಗಮನ

ಹಿಮದಲ್ಲಿ ವಾಹನ ಪಾರ್ಕ್ ಮಾಡುವುದು ಅಪಾಯಕಾರಿ ಎಂದು ಐಪಿಎಸ್ ಅಧಿಕಾರಿ ಪಂಕಜ್ ನೈನ್ ಜನರಿಗೆ ಕಿವಿಮಾತು ಹೇಳಿದ್ದಾರೆ. ಟ್ವಿಟ್ಟರ್‌ನಲ್ಲಿ ಇವರು ಹಂಚಿಕೊಂಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.

Vijaya Karnataka Web 8 Jan 2021, 2:58 pm
ಈಗಂತೂ ಹಲವು ಕಡೆಗಳಲ್ಲಿ ಹಿಮಪಾತವಾಗುತ್ತಿದೆ. ಜಮ್ಮು ಕಾಶ್ಮೀರ ಸೇರಿದಂತೆ ಹಲವು ಭಾಗಗಳಲ್ಲಿ ಹಿಮದ ನೆಲ ಹಾಸೇ ಕಾಣುತ್ತಿದೆ. ತಕ್ಷಣಕ್ಕೆ ನೋಡಿದಾಗ ಇದು ಮನಸ್ಸಿಗೆ ಮುದ ನೀಡಿದರೂ, ಕೆಲವು ಕಡೆಗಳಲ್ಲಿ ಈ ಹಿಮಪಾತದ ಭೀಕರತೆ ಜನರ ನೆಮ್ಮದಿಗೇ ಕೊಳ್ಳಿ ಇಟ್ಟಿದೆ. ಒಂದಷ್ಟು ಕಡೆಗಳಲ್ಲಿ ವಾಹನ ಸಂಚಾರವೆಲ್ಲಾ ಸ್ಥಗಿತಗೊಂಡಿದೆ. ಹಿಮಪಾತದಿಂದ ಮನೆಯಿಂದಾಚೆ ಬರಲಾಗದಂತಹ ಸ್ಥಿತಿ ಕೆಲವು ಕಡೆ ಇದೆ. ಈ ಹಿಮದ ಸಮಯದಲ್ಲಿ ಇಳಿಜಾರುಗಳಲ್ಲಿ ವಾಹನ ಚಲಾಯಿಸುವುದು ಮತ್ತು ವಾಹನ ಪಾರ್ಕ್‌ ಮಾಡುವುದು ಕೂಡಾ ಬಲು ಅಪಾಯಕಾರಿ. ಅದಕ್ಕೆ ಸಾಕ್ಷಿ ಈ ವಿಡಿಯೋ.
Vijaya Karnataka Web Image by Anviere from Pixabay
| Representative image | Image by Anviere from Pixabay


Also Read : ಸೀರೆಯುಟ್ಟು ಯುವತಿಯ ಫ್ರಂಟ್ ಫ್ಲಿಪ್ : ಸ್ಟಂಟ್ ಮೂಲಕ ನೆಟ್ಟಿಗರ ಮನಗೆದ್ದ ಜಿಮ್ನಾಸ್ಟ್

ಐಪಿಎಸ್ ಅಧಿಕಾರಿ ಪಂಕಜ್ ನೈನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದರೆ. ಇದರಲ್ಲಿ ಪಾರ್ಕ್‌ ಮಾಡಿದ್ದ ಎರಡು ವಾಹನಗಳು ಹಿಮದಲ್ಲಿ ಜಾರಿಗೊಂಡು ಬಂದು ಇನ್ನೊಂದು ವಾಹನಕ್ಕೆ ಗುದ್ದುವ ದೃಶ್ಯವಿದೆ. `ಹಿಮದ ಸಮಯದಲ್ಲಿ ಇಳಿಜಾರುಗಳಲ್ಲಿ ವಾಹನ ಚಲಾಯಿಸುವುದು ಮತ್ತು ವಾಹನ ಪಾರ್ಕ್ ಮಾಡುವುದು ಅಪಾಯಕಾರಿ. ದಯವಿಟ್ಟು ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ನಿಮ್ಮ ರಜಾ ಕಾಲದ ಯೋಜನೆಗಳನ್ನು ರೂಪಿಸಿ. ಯಾವುದೇ ಗಿರಿಧಾಮಗಳಿಗೆ ಭೇಟಿ ನೀಡಿದಾಗ ನಿಮ್ಮ ವಾಹನಗಳನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿ' ಎಂದು ಪಂಕಜ್ ನೈನ್ ತಮ್ಮ ಕ್ಯಾಪ್ಶನ್‌ನಲ್ಲಿ ಜನರಿಗೆ ಕಿವಿಮಾತು ಹೇಳಿದ್ದಾರೆ.

Also Read : ಭಾರೀ ಹಿಮಪಾತದ ನಡುವೆ ಗರ್ಭಿಣಿಯನ್ನು ಹೊತ್ತು 2 ಕಿಮೀ ಸಾಗಿದ ಯೋಧರು : ಹೃದಯಸ್ಪರ್ಶಿ ವಿಡಿಯೋ ವೈರಲ್


Also Read : 66 ವರ್ಷಗಳ ಬಳಿಕ ಕೈಸೇರಿತ್ತು ಬಾಲ್ಯದಲ್ಲಿ ಸ್ನೇಹಿತ ಬರೆದಿದ್ದ ಪತ್ರ...!

ಈ ಶಾಕಿಂಗ್ ವಿಡಿಯೋವನ್ನು ಎಲ್ಲರೂ ಭಯದಲ್ಲಿ ನೋಡಿದ್ದಾರೆ. ಈ ದೃಶ್ಯ ಎಲ್ಲಿನದ್ದು ಮತ್ತು ಯಾವಾಗ ಸೆರೆಯಾಗಿದ್ದು ಎಂದು ಸ್ಪಷ್ಟವಾಗಿಲ್ಲ. ಆದರೆ, ಇದು ಎಲ್ಲರಿಗೂ ಅಗತ್ಯ ಮತ್ತು ಉತ್ತಮ ಮಾಹಿತಿಯಾಗಿದೆ. ಭಾರೀ ಹಿಮಪಾತದ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವಂತೆ ಈ ಪೊಲೀಸ್ ಅಧಿಕಾರಿ ಎಲ್ಲರಿಗೂ ಮನವಿ ಮಾಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ