ಆ್ಯಪ್ನಗರ

ಮೆಂತ್ಯ ಸೊಪ್ಪೆಂದು ಗಾಂಜಾ ಸೊಪ್ಪಿನ ಪಲ್ಯ ಮಾಡಿ ಆಸ್ಪತ್ರೆ ಸೇರಿದ ಕುಟುಂಬ...!

ಗೊತ್ತಿಲ್ಲದೆ ಗಾಂಜಾ ಸೊಪ್ಪಿನ ಪಲ್ಯ ತಿಂದು ಕುಟುಂಬವೊಂದು ಆಸ್ಪತ್ರೆಗೆ ಸೇರುವಂತಾಗಿದೆ...! ಇಷ್ಟಕ್ಕೂ ಇವರ ಮನೆಗೆ ಗಾಂಜಾ ಸೊಪ್ಪು ಸೇರಿದ್ದು ಹೇಗೆ ಎಂಬುದು ವಿಚಿತ್ರ ಕತೆ...!

Vijaya Karnataka Web 1 Jul 2020, 2:42 pm
ಆ ಮನೆಯವರು ಸೊಪ್ಪಿನ ಪಲ್ಯ ಮಾಡಿ ಖುಷಿ ಖುಷಿಯಾಗಿ ತಿಂದಿದ್ದರು. ಇದಾಗಿ ಸ್ವಲ್ಪ ಹೊತ್ತಾಗಿತ್ತಷ್ಟೇ ಊಟ ಮಾಡಿದ್ದವರೆಲ್ಲಾ ಅಸ್ವಸ್ಥರಾಗಿದ್ದರು. ಆಗಲೇ ಇವರಿಗೆ ಗೊತ್ತಾಗಿದ್ದು ತಾವು ತಿಂದದ್ದು ಮೆಂತ್ಯ ಸೊಪ್ಪಿನ ಪಲ್ಯ ಅಲ್ಲ ಗಾಂಜಾ ಸೊಪ್ಪಿನ ಪಲ್ಯ ಎಂದು...!
Vijaya Karnataka Web Image by NickyPe from Pixabay
| Representative image | Image by NickyPe from Pixabay


Also Read : ಹೃದಯವಂತರು : ಒಬ್ಬರು ಬೊಗಸೆಯಲ್ಲಿ ನೀರು ಕುಡಿಸಿದರು, ಮತ್ತೊಬ್ಬರು ಮಳೆಗೆ ಕೊಡೆ ಹಿಡಿದರು

ಉತ್ತರ ಪ್ರದೇಶದ ಕನ್ನೌಜ್‌ನ ಮಿಯಗಂಜ್ ಗ್ರಾಮದಲ್ಲಿ ನಡೆದ ವಿಲಕ್ಷಣ ಘಟನೆ ಇದು. ಗೊತ್ತಿಲ್ಲದೆ ಮೆಂತ್ಯ ಸೊಪ್ಪೆಂದು ಗಾಂಜಾವನ್ನು ತಿಂದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಈಗ ಆಸ್ಪತ್ರೆಗೆ ಸೇರಿದ್ದಾರೆ. ನಿತೀಶ್ ಎಂಬವರ ಮನೆಯಲ್ಲಿ ನಡೆದ ಘಟನೆ ಇದು. ತರಕಾರಿ ವ್ಯಾಪಾರಿಯೊಬ್ಬ ನಿತೀಶ್ ಅವರಿ್ಗೆ ಮೆಂತ್ಯ ಸೊಪ್ಪೆಂದು ಈ ಸೊಪ್ಪು ಕೊಟ್ಟಿದ್ದ. ನಿತೀಶ್ ಅವರಿಗೆ ಇದು ಬೇರೆ ಸೊಪ್ಪೆಂದು ಗೊತ್ತಾಗಲಿಲ್ಲ. ಹೀಗಾಗಿ, ಸೀದಾ ಈ ಸೊಪ್ಪುಗಳನ್ನು ಕೊಂಡೊಯ್ದು ಅತ್ತಿಗೆ ಪಿಂಕಿ ಅವರಿಗೆ ಕೊಟ್ಟಿದ್ದರು ನಿತೀಶ್.

Also Read : ಮನೆಯೊಳಗಿನಿಂದಲೇ 30 ಅಡಿ ಆಳದ ಬಾವಿಗೆ ಬಿದ್ದ ವ್ಯಕ್ತಿ...! : ಕನಸಲ್ಲ ಇದು ನಿಜ!

ಸಂಜೆ 4 ಗಂಟೆ ಸುಮಾರಿಗೆ ಅತ್ತಿಗೆ ಪಿಂಕಿ ಅಲೂಗಡ್ಡೆಯೊಂದಿಗೆ ಈ ಸೊಪ್ಪನ್ನು ಸೇರಿಸಿ ಸಬ್ಜಿ ಮಾಡಿದ್ದರು. ಇದನ್ನೇ ಕುಟುಂಬದ ಆರು ಜನರು ತಿಂದಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಇವರೆಲ್ಲಾ ಅಸ್ವಸ್ಥರಾಗಿದ್ದರು. ಹೀಗಾಗಿ, ನೆರೆಹೊರೆಯವರ ಸಹಾಯ ಕೇಳಿದ ಕುಟುಂಬ ಬೇಗ ವೈದ್ಯರನ್ನು ಕರೆಯುವಂತೆ ಮನವಿ ಮಾಡಿಕೊಂಡಿದ್ದರು. ನೆರೆಹೊರೆಯವರು ವೈದ್ಯರನ್ನು ಕರೆಯುತ್ತಿದ್ದಂತೆಯೇ ಇಡೀ ಕುಟುಂಬ ಪ್ರಜ್ಞಾಹೀನವಾಗಿತ್ತು. ಇದರಿಂದ ಭಯದಿಂದ ಜನ ಪೊಲೀಸರಿಗೆ ತಿಳಿಸಿದ ನೆರೆಹೊರೆಯವರು ಅಸ್ವಸ್ಥ ಕುಟುಂಬಸ್ಥರನ್ನು ಆಸ್ಪತ್ರೆಗೆ ದಾಖಲಿಸಿದ್ದರು.

Also Read : ನಾಸಾದ ಆ ಒಂದು ಫೋಟೋ ನೋಡಿ ಮಸಾಲೆ ದೋಸೆಯನ್ನು ನೆನಪಿಸಿಕೊಂಡ ನೆಟ್ಟಿಗರು...!

ಇತ್ತ, ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಅಡುಗೆ ಕೋಣೆಯಲ್ಲಿ `ಗಾಂಜಾ ಸಬ್ಜಿ' ಸಿಕ್ಕಿತ್ತು. ಜೊತೆಗೆ, ಬಳಸದೆ ಇದ್ದ ಸ್ವಲ್ಪ ಸೊಪ್ಪು ಕೂಡಾ ಅಲ್ಲೇ ಇತ್ತು. ಹೀಗಾಗಿ, ಇಡೀ ಕುಟುಂಬ ಈ ಅಡುಗೆ ತಿಂದೇ ಅಸ್ವಸ್ಥವಾಗಿದೆ ಎಂದು ತಿಳಿದುಕೊಳ್ಳಲು ಪೊಲೀಸರಿಗೆ ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಸಿದ ಪೊಲೀಸರು ತರಕಾರಿ ವ್ಯಾಪಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಈಗ ತಾನು `ತಮಾಷೆ'ಗೆ ನಿತೀಶ್‌ಗೆ ಮೆಂತ್ಯ ಸೊಪ್ಪೆಂದು ಈ ಸೊಪ್ಪು ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಗೊತ್ತಾಗಿದೆ. ಸದ್ಯ ಈ ಪ್ರಕರಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜನ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ