ಆ್ಯಪ್ನಗರ

ಮೀನುಗಾರನ ಅದೃಷ್ಟ ಬದಲಾಯಿಸಿತು ತಿಮಿಂಗಿಲ ವಿಸರ್ಜಿಸಿದ್ದ ವಸ್ತು : ಇದರ ಮೌಲ್ಯ 24 ಕೋಟಿ ರೂ!

ಮೀನುಗಾರರೊಬ್ಬರು ಈಗ ಕೋಟ್ಯಧಿಪತಿಗಳಾಗಿದ್ದಾರೆ. ಕಡಲತೀರದಲ್ಲಿ ಅನಿರೀಕ್ಷಿತವಾಗಿ ಸಿಕ್ಕ ವಸ್ತು ಇವರ ಬದುಕನ್ನು ಬದಲಾಯಿಸಿದೆ.

Vijaya Karnataka Web 12 Dec 2020, 11:15 am
ಅದೃಷ್ಟ ಯಾವಾಗ ಯಾವ ರೂಪದಲ್ಲಿ ಯಾರಿಗೆ ಒಲಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅನಿರೀಕ್ಷಿತವಾಗಿ ಸಿಗುವ ಕೆಲ ವಸ್ತುಗಳು ಬಡವರ ಬದುಕನ್ನೇ ಬದಲಾಯಿಸಿ ಬಿಡುತ್ತದೆ. ಬಡತನದ ಬವಣೆಯಲ್ಲಿ ಬೇಯುತ್ತಿದ್ದವರು ರಾತ್ರೋರಾತ್ರಿ ಸಿರಿವಂತರಾದ ಅದೆಷ್ಟೋ ಉದಾಹರಣೆಗಳಿವೆ. ಇದು ಕೂಡಾ ಅಂತಹದ್ದೇ ಒಂದು ಬಡ ಮೀನುಗಾರರ ಕತೆ. ಈ ಮೀನುಗಾರರೊಬ್ಬರು ಈಗ ರಾತ್ರೋರಾತ್ರಿ ಸಿರಿವಂತರಾಗಿದ್ದಾರೆ. ಕಡಲತೀರದಲ್ಲಿ ಸಿಕ್ಕ ವಸ್ತುವೊಂದು ಇವರನ್ನು ಕೋಟ್ಯಧಿಪತಿಯನ್ನಾಗಿಸಿದೆ.
Vijaya Karnataka Web Image by Bernhard Stärck from Pixabay
| Representative image | Image by Bernhard Stärck from Pixabay


ಇದು ಥೈಲ್ಯಾಂಡಿನ ಮೀನುಗಾರರ ಕತೆ. ಥೈಲ್ಯಾಂಡ್ ಕಡಲತೀರದಲ್ಲಿ ಕಲ್ಲಿನಂತಹ ಉಂಡೆಯೊಂದು ಸಿಕ್ಕಿತ್ತು. ವಿಚಿತ್ರವಾಗಿದ್ದ ಈ ಕಲ್ಲಿನ ರೂಪದ ಉಂಡೆಯನ್ನು ಇವರು ಮನೆಗೆ ಕೊಂಡೊಯ್ದಿದ್ದರು. ಆಗಲೇ ಗೊತ್ತಾಗಿದ್ದು ಇದು ಕಲ್ಲಲ್ಲ ತಿಮಿಂಗಿಲದ ವಾಂತಿ ಎಂಬ ಸತ್ಯ! ಈ ತಿಮಿಂಗಿಲ ವಿಸರ್ಜಿಸಿದ ವಸ್ತುವಿನ ಮೌಲ್ಯ 3.2 ಮಿಲಿಯನ್ ಯುಎಸ್ ಡಾಲರ್. ಅಂದರೆ ಭಾರತದ ಸುಮಾರು 24 ಕೋಟಿ ರೂ...!

Also Read : ಎರಡು ಕಾಲುಗಳು ಇಲ್ಲದಿದ್ದರೂ ಖುಷಿಯ ಬದುಕು : ಛಲ, ಜೀವನೋತ್ಸಾಹಕ್ಕೆ ಈ ಯುವತಿ ಸ್ಫೂರ್ತಿ

ತಿಮಿಂಗಿಲದ ಕರುಳಿನಲ್ಲಿ ಸ್ರವಿಸುವ ಮೇಣದಂಥ ವಸ್ತು ಇದು. ಇದನ್ನು ಸುಗಂಧ ದ್ರವ್ಯದ ತಯಾರಿಕೆಯಲ್ಲಿ ಬಳಸಲಾಗುತ್ತದೆ. ತಿಮಿಂಗಿಲದ ಈ ವಾಂತಿಯನ್ನು ವಿಶ್ವದ ಅತ್ಯಂತ ದುಬಾರಿ ಮತ್ತು ಐಷಾರಾಮಿ ಸುಗಂಧ ದ್ರವ್ಯ ತಯಾರಿಕೆಯಲ್ಲಿ ಅಗತ್ಯವಾಗಿ ಬಳಸಲಾಗುತ್ತದೆ.

Also Read : ಹಕ್ಕಿಗೆ ಗೂಡು ಕಟ್ಟಲು ನೆರವಾಗುವ ವ್ಯಕ್ತಿ...! : ಈ ಸ್ನೇಹವೇ ಬಲು ಸುಂದರ...!

ಥೈಲ್ಯಾಂಡಿನ ನಾರಿಸ್ ಸುವನ್ನಸಾಂಗ್ ಈ ಅದೃಷ್ಟಶಾಲಿ ಮೀನುಗಾರ. ಇವರು ತಿಂಗಳಿಗೆ ಸುಮಾರು 670 ಯುಎಸ್ ಡಾಲರ್ ಎಂದರೆ ಭಾರತದ ಸುಮಾರು 49,404 ರೂಪಾಯಿ ಸಂಪಾದಿಸುತ್ತಿದ್ದರು. ಹೀಗಾಗಿ, 220 ಪೌಂಡ್ಸ್‌ ತೂಕದ ಈ ಅಂಬರ್ಗ್ರೀಸ್ ಎಂದರೆ ತಿಮಿಂಗಿಲದ ವಾಂತಿ ಸಿಗುವ ತನಕ ಇವರಿಗೆ ಜೀವನ ನಡೆಸುವುದೇ ಕಷ್ಟವಾಗಿತ್ತು. ಆದರೆ, ಈಗ ಈ ಕಷ್ಟಗಳೆಲ್ಲಾ ದೂರವಾಗಿದೆ. ಈ ವಿಶಿಷ್ಟ ವಸ್ತು ಸಿಕ್ಕಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಈ ಅಂಬರ್ಗ್ರಿಸ್‌ನ ಗುಣಮಟ್ಟ ಪರೀಕ್ಷೆಯಾಗುವ ಮೊದಲೇ ವ್ಯಕ್ತಿಯೊಬ್ಬರು 3.20 ಲಕ್ಷ ಯುಎಸ್ ಡಾಲರ್ ಎಂದರೆ ಸುಮಾರು 2.35 ಕೋಟಿ ರೂಪಾಯಿಗೆ ಇದನ್ನು ಕೊಂಡುಕೊಳ್ಳುವ ಪ್ರಸ್ತಾಪವನ್ನಿಟ್ಟಿದ್ದರು. ಆದರೆ, ಇದರ ಪರೀಕ್ಷೆ ಮುಗಿದ ಬಳಿಕ ಈ ವಸ್ತುವಿನ ಬೆಲೆ 24 ಕೋಟಿ ರೂಪಾಯಿಗೆ ಏರಲಿದೆ ಎಂದು ಪ್ರಖ್ಯಾತ ಮಾಧ್ಯಮವೊಂದು ವರದಿ ಮಾಡಿದೆ.

Also Read : 21 ಊಟದ ಆರ್ಡರ್, ಹೋಗಿ ನೋಡಿದರೆ ವಿಳಾಸವೇ ನಕಲಿ! : ಅಮಾಯಕರೊಂದಿಗೆ ಬೇಕೆಂದೇ ಚೆಲ್ಲಾಟ!

60 ವರ್ಷದ ನಾರಿಸ್ ಸುವನ್ನಸಾಂಗ್ ದಕ್ಷಿಣ ಥೈಲ್ಯಾಂಡ್‌ನ ನಖೋನ್ ಸಿ ತಮ್ಮರತ್‌ನಲ್ಲಿ ಕಡಲತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಕಲ್ಲಿನಂತಹ ವಸ್ತುವನ್ನು ಕಂಡಿದ್ದರು. ತಕ್ಷಣ ತನ್ನ ಸೋದರ ಸಂಬಂಧಿಯ ಸಹಾಯದಿಂದ ಇವರು ಇದನ್ನು ಮನೆಗೆ ಕೊಂಡೊಯ್ದು ಪರೀಕ್ಷಿಸಿದ್ದರು. ಈ ವಸ್ತುವಿನ ಮೇಲ್ಮೈಯನ್ನು ಲೈಟರ್‌ನಿಂದ ಸುಟ್ಟು ಪರೀಕ್ಷೆಗೊಳಪಡಿಸಿದ್ದರು. ಈ ವೇಳೆ ಬೇರೊಂದು ರೀತಿಯ ಸುವಾಸನೆ ಆವರಿಸಿತ್ತು. ಆಗ ತಾವು ಮನೆಗೆ ತಂದ ವಸ್ತು ಯಾವುದು ಎಂಬುದು ಇವರಿಗೆ ದೃಢಪಟ್ಟಿತ್ತು. ಸದ್ಯ ಇವರಿಗೆ ತನ್ನ ಈ ಅಮೂಲ್ಯ ವಸ್ತುವನ್ನು ಮನೆಗೆ ನುಗ್ಗಿ ಯಾರಾದರೂ ಕದ್ದೊಯ್ಯುತ್ತಾರೆ ಎಂಬ ಭಯ ಕೂಡಾ ಇದೆ. ಹೀಗಾಗಿ, ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡುವುದಾಗಿಯೂ ಇವರು ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ