ಆ್ಯಪ್ನಗರ

ಅಬ್ಬಬ್ಬಾ... ಈ 12 ವರ್ಷದ ಬಾಲಕ ಕರಡಿಯಿಂದ ತಪ್ಪಿಸಿಕೊಂಡ ದೃಶ್ಯವೇ ರೋಚಕ!

12 ವರ್ಷದ ಬಾಲಕನೊಬ್ಬ ಕರಡಿಯಿಂದ ಜಾಣತನದಿಂದ ತಪ್ಪಿಸಿಕೊಳ್ಳುವ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ನೆಟ್ಟಿಗರೂ ಅಚ್ಚರಿಪಟ್ಟಿದ್ದಾರೆ.

Vijaya Karnataka Web 27 May 2020, 9:00 am
ಅದೊಂದು ಮರಗಿಡ, ಪೊದೆಗಳಿಂದ ಆವೃತ್ತವಾದ ಪ್ರದೇಶ... ಈ ಬೆಟ್ಟದ ಹಾದಿಯಲ್ಲಿ 12 ವರ್ಷದ ಬಾಲಕ ಹೆಜ್ಜೆ ಇಡುತ್ತಿದ್ದಾನೆ. ಆದರೆ, ಈ ಪೋರನ ಹಿಂದೆಯೇ ಕರಡಿಯೂ ಹೆಜ್ಜೆ ಇಡುತ್ತಿದೆ...! ಈ ವಿಷಯ ಗೊತ್ತಾದ ಬಳಿಕ ಬಾಲಕನ ಹೃದಯ ಬಡಿತವೇ ನಿಂತಂತಾಗಿತ್ತು. ಆದರೂ ಈ ಬಾಲಕ ಅಲ್ಲಿಂದ ಜಾಣತನದಿಂದ ಪಾರಾಗಿದ್ದಾನೆ...
Vijaya Karnataka Web boy
| Screengrab from video | Courtesy : Twitter/@loriscalliari


ಇದು ಉತ್ತರ ಇಟಲಿಯ ಸ್ಪೋರ್ಮಿನೋರ್ ಸಮೀಪದ ಗ್ರಾಮವೊಂದರಲ್ಲಿ ನಡೆದ ಘಟನೆ. 12 ವರ್ಷದ ಅಲೆಸ್ಸಾಂಡ್ರೊ ಫ್ರಾಂಜೋಯ್ ಈ ಸಾಹಸಿ ಬಾಲಕ. ಈತ ಹೆದರದೆ ಕರಡಿಯನ್ನು ಎದುರಿಸುವುದಕ್ಕೂ ಒಂದು ಕಾರಣವಿದೆ. ಅದೇನೆಂದರೆ, ಕರಡಿಗಳು ಅನಿರೀಕ್ಷಿತವಾಗಿ ಎದುರಾದಾಗ ಅವುಗಳಿಂದ ಹೇಗೆ ಪಾರಾಗುವುದು ಎಂಬುದನ್ನು ಈ ಬಾಲಕ ಇತ್ತೀಚೆಗಷ್ಟೇ ಕಲಿತ್ತಿದ್ದ. ಆದರೆ, ತಾನು ಕಲಿತ ತಂತ್ರಗಳು ಇಷ್ಟು ಬೇಗ ತನಗೆ `ಪ್ರಯೋಗ'ಕ್ಕೆ ಸಿಗುತ್ತದೆ ಎಂದು ಬಹುಶಃ ಈ ಬಾಲಕ ಅಂದುಕೊಂಡಿರಲು ಸಾಧ್ಯವೇ ಇಲ್ಲ. ಹೀಗಾಗಿಯೇ, ಇಂತಹ ಒತ್ತಡದ ಸಂದರ್ಭದಲ್ಲೂ ನಗುಮುಖದಲ್ಲೇ ಅತ್ಯಂತ ಚಾಣಾಕ್ಷತನದಿಂದಲೇ ಈ ಪೋರ ಪಾರಾಗಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

Also Read : ಅತ್ಯಾಚಾರ ಮತ್ತು ಕೊಲೆ ಕೇಸ್‌ನ ಪ್ರಮುಖ ಸಾಕ್ಷಿಯಾಗಲಿದೆಯಾ ಈ ಗಿಳಿ...?

ಟ್ವಿಟ್ಟರ್ ಬಳಕೆದಾರರಾದ ಲೋರಿಸ್ ಕ್ಯಾಲಿಯಾರಿ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಲೆಸ್ಸಾಂಡ್ರೊ ನಡೆದುಕೊಂಡು ಬರುವಾಗ ಪೊದೆಯಲ್ಲಿ ಬೃಹತ್ ಕರಡಿಯೊಂದು ಇಣುಕುವ ದೃಶ್ಯವಿದೆ. ತನ್ನ ಹಿಂದೆ ಕರಡಿ ಇದೆ ಎಂದು ಗೊತ್ತಾದರೂ ಈ ಬಾಲಕ ಅಲೆಸ್ಸಾಂಡ್ರೊ ಅಲ್ಲಿಂದ ಒಮ್ಮಿಂದಲೇ ಓಡದೆ ಶಾಂತಚಿತ್ತತೆಯಿಂದ ಮೆಲ್ಲ ಮೆಲ್ಲನೆ ಹೆಜ್ಜೆ ಇಟ್ಟು ಬಂದಿದ್ದಾನೆ. ಇತ್ತ, ಕರಡಿ ಕೂಡಾ ಅದೇ ಬಾಲಕನನ್ನು ಕೊಂಚ ದೂರ ಹಿಂಬಾಲಿಸಿಕೊಂಡು ಬಂದಿದೆ. ಹೀಗೆಯೇ ಒಂದಷ್ಟು ನಿಮಿಷಗಳ ಕಾಲ ನಡೆದಿತ್ತು. ಆದರೆ, ಬಾಲಕನ ಅದೃಷ್ಟ ಚೆನ್ನಾಗಿತ್ತು. ಸ್ವಲ್ಪ ದೂರ ಹಿಂಬಾಲಿಸಿಕೊಂಡು ಬಂದ ಈ ಕರಡಿ ಮತ್ತೆ ಬೇರೆ ದಿಕ್ಕಿನತ್ತ ಸಾಗಿತು. ಹೀಗಾಗಿ, ಯಾವುದೇ ತೊಂದರೆ ಇಲ್ಲದೆ ಅಲೆಸ್ಸಾಂಡ್ರೊ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿದ್ದಾನೆ.

Also Read : ನಾಗರಹಾವು ಹಿಡಿದು ಓಡಿದ ಅಜ್ಜಿ...! : ಇದು ಭಯಾನಕ ವಿಡಿಯೋ...!

ಕರಡಿ ಅಲೆಸ್ಸಾಂಡ್ರೊನನ್ನು ಹಿಂಬಾಲಿಸುವ ವೇಳೆ ಈತನ ತಾಯಿ `ಹಿಂದೆ ತಿರುಗಬೇಡ. ಭಯಗೊಳ್ಳಬೇಡ' ಎಂದು ಹೇಳುತ್ತಲೇ ಇದ್ದರು. `ಕರಡಿಗೆ ತಾನು ಅಪಾಯದಲ್ಲಿದ್ದೇನೆ ಎಂದು ಭಾವಿಸದಂತೆ ಮಾಡುವುದು ಆಗಿನ ತುರ್ತು ಅಗತ್ಯವಾಗಿತ್ತು. ನಾವು ಅದರ ಶತ್ರುಗಳಲ್ಲ ಎಂಬುದು ಅದರ ಅರಿವಿಗೆ ಬರಬೇಕಿತ್ತು. ಇದಕ್ಕಾಗಿಯೇ ನಾನು ಕರಡಿಯನ್ನು ಹಿಂತಿರುಗಿ ನೋಡಲಿಲ್ಲ' ಎಂದು ಅಲೆಸ್ಸಾಂಡ್ರೊ ಹೇಳಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Also Read : ಸ್ಪೈಡರ್ ಮ್ಯಾನ್ ಆಗಬೇಕೆಂದು ಈ ಮೂವರು ಮಾಡಿದ್ದೇನು ಗೊತ್ತಾ? : ಕೇಳಿದ್ರೆ ಶಾಕ್ ಆಗ್ತೀರ!

ಸದ್ಯ ಅತ್ಯಂತ ಶಾಂತವಾಗಿ. ಭಯಗೊಳ್ಳದೆ ಬಾಲಕ ಅಲೆಸ್ಸಾಂಡ್ರೊ ಕರಡಿಯಿಂದ ಪಾರಾಗಿದ್ದು ಎಲ್ಲರಿಗೂ ಇಷ್ಟವಾಗಿದೆ. ಹೀಗಾಗಿ, ಈ ವಿಡಿಯೋ ಈಗ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಎಲ್ಲರೂ ಅಲೆಸ್ಸಾಂಡ್ರೊ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಕೊಂಡಾಡಿದ್ದಾರೆ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ