ಆ್ಯಪ್ನಗರ

ಹಸು ದಾಳಿಯಿಂದ ಗಾಯಗೊಂಡಿದ್ದ ವೃದ್ಧ ದಂಪತಿಯ ಏರ್‌ಲಿಫ್ಟ್‌...!

ಹಸುವೊಂದು ದಾಳಿ ಮಾಡಿದ ಪರಿಣಾಮ ಗಾಯಗೊಂಡಿದ್ದ ವೃದ್ಧ ದಂಪತಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ತ್ವರಿತವಾಗಿ ಸ್ಪಂದಿಸಿದ ಪೊಲೀಸರ ಬಗೆಗೂ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Vijaya Karnataka Web 11 Aug 2020, 7:04 pm
ಹಸು ದಾಳಿಯಿಂದ ನೆಲಕ್ಕುರುಳಿ ಗಾಯಗೊಂಡಿದ್ದ ವೃದ್ಧ ದಂಪತಿಯನ್ನು ರಕ್ಷಿಸಲಾಗಿದೆ. ಹೆಲಿಕಾಪ್ಟರ್ ಮೂಲಕ ಬಂದ ಅಧಿಕಾರಿಗಳು ಇವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದು ನಡೆದಿರುವುದು ಕ್ಯಾಲಿಫೋರ್ನಿಯಾದಲ್ಲಿ. ಸದ್ಯ ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Vijaya Karnataka Web Cow Attack
| Screengrab from video | Courtesy : CHP - Golden Gate Division Air Operations/Facebook


ಕ್ಯಾಲಿಫೋರ್ನಿಯಾದ ಲಿಂಚ್ ಕ್ಯಾನ್ಯನ್ ಪ್ರಾದೇಶಿಕ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಈ ಉದ್ಯಾನವನಕ್ಕೆ ವೃದ್ಧ ದಂಪತಿ ಬಂದಿದ್ದರು. ಈ ವೇಳೆ, ಈ ಅಪರಿಚಿತ ದಂಪತಿಗಳನ್ನು ಹಸು ಬೆನ್ನಟ್ಟಿಕೊಂಡು ಬಂದು ದಾಳಿ ಮಾಡಿದೆ. ಹೆದರಿ ಓಡಿ ಬಂದಿದ್ದ ದಂಪತಿ ನೆಲಕ್ಕುರುಳಿ ಗಾಯಗೊಂಡಿದ್ದರು. ಹೀಗಾಗಿ, ಇವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ತಕ್ಷಣ ಈ ದಂಪತಿ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕರೆ ಸ್ವೀಕರಿಸಿದ ಅರೆಕ್ಷಣದಲ್ಲಿ ಹೆಲಿಕಾಪ್ಟರ್‌ನಲ್ಲಿ ಬಂದ ಪೊಲೀಸ್ ಅಧಿಕಾರಿಗಳು ಈ ದಂಪತಿಗೆ ವೈದ್ಯಕೀಯ ನೆರವಿನ ಅಗತ್ಯ ಇದೆ ಎಂದು ಮನಗಂಡಿದ್ದರು.

Also Read : `ಶಾಲೆ ಮತ್ತೆ ಶುರುವಾಗುವುದು ಬೇಡ' : ಮುಗ್ಧ ಪುಟಾಣಿ ಅಳುವ ಮುದ್ದಾದ ವಿಡಿಯೋ ವೈರಲ್

ಪೊಲೀಸರ ಹೆಲಿಕಾಪ್ಟರ್ ಸ್ಥಳಕ್ಕೆ ಬಂದಾಗಲೂ ಹಸು ಅಲ್ಲೇ ಇತ್ತು. ಅದು ಆಕ್ರಮಣಕಾರಿಯಾಗಿ ಮುಂದೆ ಹಾಯಲು ಯತ್ನಿಸುತ್ತಿತ್ತು. ಹೀಗಾಗಿ, ಚಾಪರ್‌ನ ಸೈರನ್‌ ಬಳಸಿ ಹಸುವನ್ನು ಬೆದರಿಸುವ ಪ್ರಯತ್ನ ಮಾಡಿದ್ದ ಅಧಿಕಾರಿಗಳು ಇದರಲ್ಲಿ ಯಶಸ್ವಿಯಾಗಿದ್ದರು. ಇದಾದ ಬಳಿಕ ಈ ವೃದ್ಧ ದಂಪತಿಯನ್ನು ರಕ್ಷಿಸಲಾಗಿದೆ. ಬಳಿಕ ಇವರಿಬ್ಬರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read : ವ್ಯಕ್ತಿಯ ಕಾಲು ಬಡಿದು ಆಹಾರ ಕೇಳುವ ಸೀಲ್ : ಮುಗ್ಧ ವಿಡಿಯೋದ ಬಗ್ಗೆ ಪರ ವಿರೋಧ ಚರ್ಚೆ!


Also Read : ವ್ಹಾವ್... ಬಾತುಕೋಳಿ ಮರಿ ಮತ್ತು ಶ್ವಾನದ ಸ್ನೇಹ : ಮನಸೆಳೆಯದೇ ಇರದು ಈ ಬಾಂಧವ್ಯ

ಸದ್ಯ ಈ ರಕ್ಷಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಜೊತೆಗೆ, ಕರೆ ಸ್ವೀಕರಿಸಿದ ತಕ್ಷಣ ಪೊಲೀಸರು ಸ್ಪಂದಿಸಿರುವುದಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಸುವಿನೊಂದಿಗೆ ಕರು ಕೂಡಾ ಇರುವುದನ್ನು ದೃಶ್ಯದಲ್ಲಿ ಕಾಣಬಹುದು. ತನ್ನತ್ತ ಬಂದ ವೃದ್ಧರಿಂದ ತನ್ನ ಕರುವಿಗೆ ಯಾವುದೇ ತೊಂದರೆಯಾಗಬಾರದು ಎಂಬ ರಕ್ಷಣೆಯ ದೃಷ್ಟಿಯಿಂದ ಹಸು ಇಷ್ಟು ಆಕ್ರಮಣಕಾರಿಯಾಗಿ ದಾಳಿ ಮಾಡಿರುವ ಸಾಧ್ಯತೆ ಇದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ