ಆ್ಯಪ್ನಗರ

ಲಕ್ಷಾಂತರ ರೂ. ಮೌಲ್ಯದ ಐಷಾರಾಮಿ ಕಾರಿನಲ್ಲಿ ಕಸ ಕೊಂಡೊಯ್ಯುವ ರಾಂಚಿ ಯುವಕ!

ನೋವು, ಹತಾಶೆಯಿಂದ ಇಲ್ಲೊಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Vijaya Karnataka Web 24 Nov 2020, 4:19 pm
ಲಕ್ಷಾಂತರ ಮೌಲ್ಯದ ದುಬಾರಿ ಕಾರಿನಲ್ಲಿ ಸಾಗಬೇಕು ಎಂಬ ಕನಸು ಖಂಡಿತಾ ಎಲ್ಲರಿಗೂ ಇರುತ್ತದೆ. ಆದರೆ, ಎಲ್ಲರಿಗೂ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಮಧ್ಯಮ ವರ್ಗದವರು ಮತ್ತು ಬಡವರು ಬರೀ ಇದ್ದದರಲ್ಲೇ ತೃಪ್ತಿಪಟ್ಟುಕೊಳ್ಳುತ್ತಾರೆ. ಪರಿಸ್ಥಿತಿ ಹೀಗಿರುವಾಗ ಇದೇ ಲಕ್ಷಾಂತರ ಮೌಲ್ಯದ ಐಷಾರಾಮಿ ಕಾರಿನಲ್ಲಿ ಯಾರಾದರೂ ಕಸ ತುಂಬುವುದನ್ನು ಕೇಳಿದ್ದೀರಾ...? ಬಹುಶಃ ಇರಲಿಕ್ಕಿಲ್ಲ... ಆದರೆ, ರಾಂಚಿಯ ಯುವಕ ಈಗ ತಮ್ಮ ಐಷಾರಾಮಿ ದುಬಾರಿ ಕಾರಿನಲ್ಲಿ ರಸ್ತೆ ರಸ್ತೆಯ ಕಸ ತುಂಬಿಕೊಂಡು ಹೋಗುತ್ತಿದ್ದಾರೆ.
Vijaya Karnataka Web Image by Arek Socha from Pixabay
| Representative image | Image by Arek Socha from Pixabay


Also Read : ಇಂಥವರೂ ಇರ್ತಾರಾ...? : 1.2 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರನ್ನು ಸುಟ್ಟ ಯುಟ್ಯೂಬರ್...!

ಇದು ಜಾರ್ಖಂಡ್‌ನ ರಾಂಚಿಯಲ್ಲಿ ಸೆರೆಯಾದ ವಿಭಿನ್ನ ದೃಶ್ಯ. ಇಲ್ಲಿನ ಪ್ರಿನ್ಸ್‌ ಶ್ರೀವಾಸ್ತವ ವಿಭಿನ್ನ ರೀತಿಯ ಪ್ರತಿಭಟನೆ ಶುರು ಮಾಡಿದ್ದಾರೆ. ತಮ್ಮ ದುಬಾರಿ ಕಾರಿನಲ್ಲಿ ಇವರು ಕಸವನ್ನು ಸಾಗಿಸುತ್ತಿದ್ದಾರೆ...! ಅಚ್ಚರಿಯಾದರೂ ಇದು ಸತ್ಯ. ಶ್ರೀವಾಸ್ತವ್ ತನ್ನ ತಂದೆಗೆ ಉಡುಗೊರೆಯಾಗಿ ಹೊಸ ಐಷಾರಾಮಿ ಖರೀದಿಸಿದ್ದರು. ಆದರೆ, ಈ ಕಾರು ಖರೀದಿಸಿದ ಸ್ವಲ್ಪ ದಿನದಲ್ಲೇ ಹಲವಾರು ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಮೊದಲು ಕೆಲವೇ ದಿನಗಳ ಅಂತರದಲ್ಲಿ ಎರಡು ಟೈಯರ್‌ಗಳು ಸ್ಫೋಟಗೊಂಡಿದ್ದವು. ಇದಲ್ಲದೆ ಇನ್ನೂ ಅನೇಕ ಸಮಸ್ಯೆಗಳು ಎದುರಾಗಿದ್ದವು. ಹೀಗಾಗಿ, ಈ ಹೊಸ ಕಾರಿನ ರಿಪೇರಿಗೆಂದೇ ಇವರು ಸಾಕಷ್ಟು ಹಣ ವ್ಯಯಿಸಿದ್ದರು. ಆದರೂ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ಪರಿಹಾರವಾಗಿರಲಿಲ್ಲ.

View this post on Instagram A post shared by Prince Raj Shrivastava (@princerajshrivastava)

Also Read : ವ್ಯಕ್ತಿಯನ್ನು ರಾತ್ರೋರಾತ್ರಿ ಸಿರಿವಂತನನ್ನಾಗಿಸಿದ ಉಲ್ಕಾಶಿಲೆ...!

ಒಂದು ಕಡೆ ಕಾರಿನಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ತಾಂತ್ರಿಕ ಸಮಸ್ಯೆ, ಮತ್ತೊಂದು ಕಡೆ ಈ ಕಾರಿನ ಅಧಿಕೃತ ಸರ್ವೀಸ್ ಸೆಂಟರ್‌ನವರ ದರ್ಪ, ನಿರ್ಲಕ್ಷ್ಯದ ವರ್ತನೆ ಶ್ರೀವಾಸ್ತವ್ ಅವರನ್ನು ಚಿಂತೆಗೀಡು ಮಾಡಿತ್ತು. ಹೀಗಾಗಿ, ಇದೇ ನೋವು, ಹತಾಶೆಯಿಂದ ಶ್ರೀವಾಸ್ತವ್ ಇಂತಹದ್ದೊಂದು ಪ್ರತಿಭಟನೆ ಮಾಡುತ್ತಿದ್ದಾರೆ...! ಸದ್ಯ ಈ ವಿಡಿಯೋವನ್ನು ಇವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


Also Read : `ಏಳಮ್ಮ ಮುದ್ದು ಚಿಟ್ಟೆ' : ಕಂದನನ್ನು ಎಬ್ಬಿಸುವ ತಂದೆಯ ಅದ್ಭುತ ಟೆಕ್ನಿಕ್‌ಗೆ ಎಲ್ಲರೂ ಫಿದಾ

ಇವರು ಈ ಪೋಸ್ಟ್‌ ಹಾಕಿದ ನಂತರ ಕೆಲವರು ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಈ ಪ್ರತಿಭಟನೆಯ ಜೊತೆಗೆ ಶ್ರೀವಾಸ್ತವ್ ನ್ಯಾಯಾಲಯದ ಮೆಟ್ಟಿಲೇರುವುದಕ್ಕೂ ನಿರ್ಧರಿಸಿದ್ದಾರೆ. ಹಾಗಂತ, ಹೀಗೆ ಐಷಾರಾಮಿ ಕಾರುಗಳ ಅಧಿಕೃತ ಡೀಲರ್‌ಗಳು ಅಥವಾ ಸರ್ವೀಸ್ ಸೆಂಟರ್ ವಿರುದ್ಧ ನಡೆಯುವ ಇಂತಹ ಪ್ರತಿಭಟನೆ ಇದೇ ಮೊದಲೇನು ಅಲ್ಲ. ಇತ್ತೀಚೆಗಷ್ಟೇ ಇದೇ ರೀತಿಯ ಹತಾಶೆಯಿಂದ ರಷ್ಯಾದ ಯುಟ್ಯೂಬರ್ ತನ್ನ ಸುಮಾರು 1.2 ಕೋಟಿ ರೂ ಮೌಲ್ಯದ ಐಷಾರಾಮಿ ಕಾರಿಗೆ ಬೆಂಕಿ ಹಚ್ಚಿದ್ದರು. ಈ ವಿಡಿಯೋ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ