ಆ್ಯಪ್ನಗರ

ಧಗಧಗ ಉರಿದ ಗ್ಯಾಸ್ ಸಿಲಿಂಡರ್ : ಪ್ರಾಣದ ಹಂಗು ತೊರೆದು ಬೆಂಕಿ ನಂದಿಸಿದ ಕಾನ್ಸ್‌ಟೇಬಲ್

ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ತನ್ನ ಜೀವದ ಹಂಗು ತೊರೆದು ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ. ಇವರ ಈ ಸಾಹಸದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Vijaya Karnataka Web 29 Jul 2020, 5:49 pm
ಜನ ಸೇವೆಯೇ ಉಸಿರು ಎಂದು ಕರ್ತವ್ಯ ನಿರ್ವಹಿಸುತ್ತಿರುವ ಅದೆಷ್ಟೋ ಪೊಲೀಸರು ನಮ್ಮಲ್ಲಿದ್ದಾರೆ. ಒಮ್ಮೊಮ್ಮೆ ಪೊಲೀಸರು ಅಥವಾ ಇನ್ನಾವುದೇ ರಕ್ಷಣಾ ತಂಡದ ಸದಸ್ಯರು ಇಡುವ ನಿಸ್ವಾರ್ಥ ಹೆಜ್ಜೆ ಎಲ್ಲರ ಹೃದಯ ತುಂಬಿ ಬರುವಂತೆ ಮಾಡುತ್ತದೆ. ಹೀಗೆ ತಮ್ಮ ಜೀವದ ಹಂಗು ತೊರೆದು ಇವರು ತೋರುವ ಶೌರ್ಯ, ಪರಾಕ್ರಮ ಮತ್ತೊಬ್ಬರ ಬಾಳಿನಲ್ಲಿ ಬೆಳಕು ತರುತ್ತದೆ. ಇಂತಹ ಸೇವೆಯಲ್ಲೇ ಸಂತಸ ಕಾಣುವ ಅದೆಷ್ಟೋ ಸಾಹಸಿಗಳು ನಮ್ಮಲ್ಲಿದ್ದಾರೆ. ಅಂತಹ ಧೈರ್ಯಶಾಲಿ ಮತ್ತು ಹೃದಯವಂತರ ಸಾಲಿನಲ್ಲಿ ಈಗ ಇನ್ನೊಬ್ಬರು ಕಾನ್ಸ್‌ಟೇಬಲ್ ಗಮನ ಸೆಳೆದಿದ್ದಾರೆ. ಇವರು ತಮ್ಮ ಧೈರ್ಯದಿಂದ ಬಹುದೊಡ್ಡ ಅಪಾಯವನ್ನು ತಪ್ಪಿಸಿದ್ದಾರೆ.
Vijaya Karnataka Web Brave Police Constable
| Screengrab from video | Courtesy : SAMBHAL POLICE/Twitter


Also Read : Hilarious Video : ಹುಲಿಗೇ `ಮೋಸ ಮಾಡಿ' ಜೀವ ಉಳಿಸಿಕೊಂಡ ಬಾತುಕೋಳಿ : ತಮಾಷೆಯಾಗಿದೆ ಈ ವಿಡಿಯೋ

ಉತ್ತರಪ್ರದೇಶದ ಸಂಭಾಲ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಯೋಗೇಂದ್ರ ಈ ಸಾಹಸಿ. ಇವರು ಬಾಬಾ ಒಬ್ಬರು ನೆಲೆಸಿದ್ದ ಮನೆಯಲ್ಲಿ ಸಂಭವಿಸಬಹುದಾದಂತಹ ದೊಡ್ಡ ಅಗ್ನಿ ದುರಂತವನ್ನು ತಪ್ಪಿಸಿದ್ದಾರೆ. ಬಾಬಾ ಇಲ್ಲಿ ಚಹಾ ಮಾಡಿದ ತಕ್ಷಣ ಗ್ಯಾಸ್ ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡಿತ್ತು ಎಂದು ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಕಾನ್ಸ್‌ಟೇಬಲ್ ಯೋಗೇಂದ್ರ ತಮ್ಮ ಜೀವದ ಹಂಗು ತೊರೆದು ಉರಿಯುತ್ತಿದ್ದ ಗ್ಯಾಸ್ ಸಿಲಿಂಡರ್‌ ಅನ್ನು ದೊಡ್ಡ ಕೋಲಿನ ಸಹಾಯದಿಂದ ಕೆಳಗಿಳಿಸಿದ್ದರು. ಬಳಿಕ ದೊಡ್ಡ ಹೊದಿಕೆಯನ್ನು ನೀರಿನಲ್ಲಿ ಮುಳುಗಿಸಿ ಅದನ್ನು ಸಿಲಿಂಡರ್‌ಗೆ ಸುತ್ತಿದ್ದಾರೆ. ಹೀಗಾಗಿ, ತಕ್ಷಣ ಬೆಂಕಿ ನಂದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೆಲ್ಲಾ ಯೋಗೇಂದ್ರ ಸಾಹಸವನ್ನು ಕೊಂಡಾಡಿದ್ದಾರೆ.

Also Read : Adorable Video : ಚಿಣ್ಣರ ರೆಸ್ಲಿಂಗ್ ನೋಡಿದ್ದೀರಾ...?: ಕ್ಯೂಟ್ ಆಗಿದೆ ಪುಟಾಣಿಗಳ ಆಟ

ಇಲ್ಲಿದೆ ವೈರಲ್ ವಿಡಿಯೋ :

Also Read : ಬ್ರೇಕ್ ಅಪ್ ಕೋಪ: ವಿಚಿತ್ರ ರೀತಿಯಲ್ಲಿ ಸೇಡು ತೀರಿಸಿಕೊಂಡ ಮಾಜಿ ಪ್ರಿಯಕರ!

ಇನ್ನು ನೆಟ್ಟಿಗರು ಕೂಡಾ ಯೋಗೇಂದ್ರ ಅವರ ನಿಸ್ವಾರ್ಥ ಸೇವೆ ಧೈರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅದರ ಜೊತೆಗೆ, ಕಳವಳವನ್ನೂ ವ್ಯಕ್ತಪಡಿಸಿದ್ದಾರೆ. `ಪೊಲೀಸ್ ಕಾನ್ಸ್‌ಟೇಬಲ್ ತಮ್ಮ ಜೀವವನ್ನು ಪಣಕ್ಕಿಟ್ಟು ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಆದರೆ, ಅವರ ಜೀವವೂ ಅಮೂಲ್ಯ. ಪೊಲೀಸ್ ವಾಹನದಲ್ಲಿ ಅಗ್ನಿ ನಂದಿಸುವ ಸಾಧನಗಳನ್ನೂ ಅಳವಡಿಸಬೇಕು' ಕೆಲವರು ಮನವಿ ಮಾಡಿದ್ದಾರೆ. ಈ ಕಳವಳದ ಜೊತೆಯಲ್ಲಿಯೇ ಎಲ್ಲರೂ ಯೋಗೇಂದ್ರ ಅವರ ಶೌರ್ಯವನ್ನೂ ಮೆಚ್ಚಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ