ಅದು ನವವಧುವರರಿದ್ದ ಕಾರು. ಈ ನವದಂಪತಿ ಜತೆ ಆ ಕಾರಿನಲ್ಲಿ ಇನ್ನೂ ಮೂವರಿದ್ದರು. ವರನ ಗ್ರಾಮದತ್ತ ಇವರೆಲ್ಲಾ ಸಾಗುತ್ತಿದ್ದರು. ಆದರೆ, ದಾರಿ ಮಧ್ಯೆ ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು. ಅದೇನೆಂದರೆ ಈ ಕಾರು ಉಕ್ಕಿ ಹರಿಯುತ್ತಿದ್ದ ನದಿಗೆ ಬಿದ್ದಿತ್ತು...!
Also Read : ಒಂದು ಮನೆಯಿಂದ ಇನ್ನೊಂದು ಮನೆಯೊಳಗೆ ನುಗ್ಗಿತ್ತು ಹುಲಿ...!
ಜಾರ್ಖಂಡ್ನ ಪಾಲಾಮು ಜಿಲ್ಲೆಯಲ್ಲಿ ನಡೆದ ಘಟನೆ ಇದು. ಮಲಯ ನದಿಗೆ ಈ ಕಾರು ಬಿದ್ದ ಪರಿಣಾಮ ಅಲ್ಲೊಂದು ಭಯಾನಕ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ, ಕಾರು ಸುಮಾರು ಅರ್ಧ ಕಿಲೋಮೀಟರ್ನಷ್ಟು ತೇಲುತ್ತಾ ಮುಂದೆ ಸಾಗಿತ್ತು. ಈ ವೇಳೆ, ದೇವರಂತೆ ಬಂದವರು ಸ್ಥಳೀಯರು. ತಮ್ಮ ಜೀವದ ಹಂಗು ತೊರೆದು ಸ್ಥಳೀಯ ಯುವಕರು ಕಾರಿನಲ್ಲಿದ್ದವರ ರಕ್ಷಣೆಗೆ ಮುಂದಾಗಿದ್ದರು. ಸದ್ಯ ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
Also Read : ಹಸಿವಿನಿಂದ ಬಸ್ನೊಳಗೇ ಜೀವ ಬಿಟ್ಟಿದ್ದ ಯುವಕ! : ಮತ್ತೆ ಕಾಡುತ್ತಿದೆ ಕರಾಳ ನೆನಪು...!
ವರನ ಗ್ರಾಮದೆಡೆಗೆ ಇವರೆಲ್ಲಾ ಖುಷಿ ಖುಷಿಯಾಗಿ ಸಾಗುತ್ತಿದ್ದರು. ಈ ವೇಳೆ ಕಾರು ಸೇತುವೆಯಿಂದ ಕೆಳಗೆ ಬಿದ್ದಿತ್ತು. ಅಲ್ಲದೆ, ನದಿಯು ಉಕ್ಕಿ ಹರಿಯುತ್ತಿದ್ದರಿಂದ ಪ್ರವಾಹದೊಂದಿಗೆ ಕಾರು ಕೂಡಾ ತೇಲುತ್ತಾ ಸಾಗಿತ್ತು. ಇದನ್ನು ಕಂಡಿದ್ದ ಸ್ಥಳೀಯರು ತಕ್ಷಣ ಪ್ರವಾಹದಲ್ಲಿ ಈಜಿ ಕಾರಿನ ಕಿಟಕಿ ಗಾಜು ಒಡೆದು ಒಳಗಿದ್ದವರನ್ನು ರಕ್ಷಿಸಿದ್ದಾರೆ. ಈ ಮೂಲಕ ಅಷ್ಟು ಹೊತ್ತು ಜೀವಭಯದಲ್ಲಿದ್ದ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
Also Read : 10 ಬಿಯರ್ ಕುಡಿದು 18 ಗಂಟೆ ಮೂತ್ರ ವಿಸರ್ಜಿಸದ ವ್ಯಕ್ತಿ! : ಮುಂದೇನಾಯ್ತು ಗೊತ್ತಾ?
ಸದ್ಯ ಈ ವಿಡಿಯೋ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ, ಎಲ್ಲರೂ ತಕ್ಷಣ ಸ್ಪಂದಿಸಿದ ಸ್ಥಳೀಯ ಜನರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
Also Read : ಒಂದು ಮನೆಯಿಂದ ಇನ್ನೊಂದು ಮನೆಯೊಳಗೆ ನುಗ್ಗಿತ್ತು ಹುಲಿ...!
ಜಾರ್ಖಂಡ್ನ ಪಾಲಾಮು ಜಿಲ್ಲೆಯಲ್ಲಿ ನಡೆದ ಘಟನೆ ಇದು. ಮಲಯ ನದಿಗೆ ಈ ಕಾರು ಬಿದ್ದ ಪರಿಣಾಮ ಅಲ್ಲೊಂದು ಭಯಾನಕ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ, ಕಾರು ಸುಮಾರು ಅರ್ಧ ಕಿಲೋಮೀಟರ್ನಷ್ಟು ತೇಲುತ್ತಾ ಮುಂದೆ ಸಾಗಿತ್ತು. ಈ ವೇಳೆ, ದೇವರಂತೆ ಬಂದವರು ಸ್ಥಳೀಯರು. ತಮ್ಮ ಜೀವದ ಹಂಗು ತೊರೆದು ಸ್ಥಳೀಯ ಯುವಕರು ಕಾರಿನಲ್ಲಿದ್ದವರ ರಕ್ಷಣೆಗೆ ಮುಂದಾಗಿದ್ದರು. ಸದ್ಯ ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
Also Read : ಹಸಿವಿನಿಂದ ಬಸ್ನೊಳಗೇ ಜೀವ ಬಿಟ್ಟಿದ್ದ ಯುವಕ! : ಮತ್ತೆ ಕಾಡುತ್ತಿದೆ ಕರಾಳ ನೆನಪು...!
ವರನ ಗ್ರಾಮದೆಡೆಗೆ ಇವರೆಲ್ಲಾ ಖುಷಿ ಖುಷಿಯಾಗಿ ಸಾಗುತ್ತಿದ್ದರು. ಈ ವೇಳೆ ಕಾರು ಸೇತುವೆಯಿಂದ ಕೆಳಗೆ ಬಿದ್ದಿತ್ತು. ಅಲ್ಲದೆ, ನದಿಯು ಉಕ್ಕಿ ಹರಿಯುತ್ತಿದ್ದರಿಂದ ಪ್ರವಾಹದೊಂದಿಗೆ ಕಾರು ಕೂಡಾ ತೇಲುತ್ತಾ ಸಾಗಿತ್ತು. ಇದನ್ನು ಕಂಡಿದ್ದ ಸ್ಥಳೀಯರು ತಕ್ಷಣ ಪ್ರವಾಹದಲ್ಲಿ ಈಜಿ ಕಾರಿನ ಕಿಟಕಿ ಗಾಜು ಒಡೆದು ಒಳಗಿದ್ದವರನ್ನು ರಕ್ಷಿಸಿದ್ದಾರೆ. ಈ ಮೂಲಕ ಅಷ್ಟು ಹೊತ್ತು ಜೀವಭಯದಲ್ಲಿದ್ದ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
Also Read : 10 ಬಿಯರ್ ಕುಡಿದು 18 ಗಂಟೆ ಮೂತ್ರ ವಿಸರ್ಜಿಸದ ವ್ಯಕ್ತಿ! : ಮುಂದೇನಾಯ್ತು ಗೊತ್ತಾ?
ಸದ್ಯ ಈ ವಿಡಿಯೋ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ, ಎಲ್ಲರೂ ತಕ್ಷಣ ಸ್ಪಂದಿಸಿದ ಸ್ಥಳೀಯ ಜನರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.