ಆ್ಯಪ್ನಗರ

Viral Video : ಅರ್ಚಕರನ್ನು ಎಳೆದೊಯ್ದು ಪೂಜೆ ಮಾಡಿಸಿದ ಜನ...!

ಅರ್ಚಕರೊಬ್ಬರನ್ನು ಜನ ಎಳೆದುಕೊಂಡು ಹೋಗಿ ಸರಸ್ವತಿ ಪೂಜೆ ಮಾಡಿಸಿದ ವಿಡಿಯೋವೊಂದು ಸದ್ಯ ವೈರಲ್ ಆಗುತ್ತಿದೆ. ಈ ಗಲಾಟೆ ವಿಡಿಯೋ ಕಂಡ ಜನ ಬಗೆಬಗೆ ಕಮೆಂಟ್ಸ್‌ ಹಾಕುತ್ತಿದ್ದಾರೆ.

Vijaya Karnataka Web 31 Jan 2020, 11:43 am
ಅರ್ಚಕರು ನಾನು ಬರಲ್ಲ ಎನ್ನುತ್ತಿದ್ದಾರೆ... ಜನ ಬಿಡುತ್ತಿಲ್ಲ, `ಬನ್ನಿ ನೀವೇ ಪೂಜೆ ಮಾಡಬೇಕು' ಎನ್ನುತ್ತಿದ್ದಾರೆ... ಈ ಗಲಾಟೆ ಬಳಿಕ ಅರ್ಚಕರನ್ನು ಎಳೆದೊಯ್ದು ಪೂಜೆ ಮಾಡಿಸುವ ಮಟ್ಟಕ್ಕೆ ಹೋಗಿತ್ತು...!
Vijaya Karnataka Web pojja
| Screengrab from video |


Also Read : Incredible Dance : ಹಕ್ಕಿಯ ಇಂತಹ ಮಿಲನದ ನಾಟ್ಯದ ದೃಶ್ಯ ನೀವು ನೋಡಿರಲಿಕ್ಕಿಲ್ಲ...!

ಮೊನ್ನೆ ಬಸಂತ್ ಪಂಚಮಿ ಅಥವಾ ಸರಸ್ವತಿ ಪೂಜೆಯನ್ನು ಹಲವೆಡೆ ಭಾರೀ ಶೃದ್ಧಾಭಕ್ತಿಯಿಂದ ನೆರವೇರಿಸಲಾಗಿತ್ತು. ಪಶ್ಚಿಮ ಬಂಗಾಳದಲ್ಲೂ ಬಸಂತ್ ಪಂಚಮಿಯನ್ನು ಶೃದ್ಧೆಯಿಂದ ಆಚರಿಸಲಾಗುತ್ತದೆ. ಅಂದು ಎಲ್ಲರೂ ಸರಸ್ವತಿ ದೇವಿಗೆ ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆಯುತ್ತಾರೆ. ಹೀಗಾಗಿ, ತಾವು ಆಯೋಜಿಸುವ ಪೂಜೆ ಕ್ರಮ ಬದ್ಧವಾಗಿ, ಶಾಸ್ತ್ರೋಕ್ತವಾಗಿ ಇರಬೇಕೆಂದು ಜನ ಬಯಸುತ್ತಾರೆ. ಇದರಿಂದ ಈ ಸಂದರ್ಭದಲ್ಲಿ ಅರ್ಚಕರಿಗೆ ತುಂಬಾ ಬೇಡಿಕೆ ಇರುತ್ತದೆ. ಪರಿಣಾಮ, ಅರ್ಚಕರಿಗೂ ಎಲ್ಲರ ಮನೆಗೂ ಹೋಗಿ ಪೂಜೆ ಮಾಡಲು ಸಾಧ್ಯವಾಗುವುದಿಲ್ಲ. ಇದು ಕೆಲವೊಮ್ಮೆ ವಿಚಿತ್ರ ಸನ್ನಿವೇಶಕ್ಕೆ ಕಾರಣವಾಗುತ್ತದೆ.

Also Read : ಅದೇ ಜಾಗ, ಅದೇ ರೀತಿಯ ಬಟ್ಟೆ.. 28 ವರ್ಷ ಹಿಂದಿನ ಕಾಲೇಜು ಪ್ರೀತಿಯ ಫೋಟೋ ರೀಕ್ರಿಯೇಟ್ ಮಾಡಿದ ದಂಪತಿ


ಮೊನ್ನೆ ಪಶ್ಚಿಮ ಬಂಗಾಳದಲ್ಲೂ ಆಗಿದ್ದೂ ಇದೆ. ಅರ್ಚಕರು ಪೂಜೆ ಮುಗಿಸಿ ಹೋಗುವಾಗ ನಮ್ಮಲ್ಲೂ ಬಂದು ಪೂಜೆ ಮಾಡುವಂತೆ ಜನ ಕೇಳಿಕೊಂಡಿದ್ದಾರೆ. ಆದರೆ, ಅರ್ಚಕರು ಒಪ್ಪಲಿಲ್ಲ. ಹೀಗೆ ಒಂದಷ್ಟು ಹೊತ್ತು ಅರ್ಚಕರನ್ನು ಪೂಜೆಗೆ ಒಪ್ಪಿಸುವ ಪ್ರಯತ್ನದ ಬಳಿಕ ಮಹಿಳೆಯರು, ಮಕ್ಕಳೆಲ್ಲಾ ಸೇರಿ ಇವರನ್ನು ಎಳೆದುಕೊಂಡು ಹೋಗಿ ಪೂಜೆ ಮಾಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

Also Read : Viral Video : ಅಬ್ಬಬ್ಬಾ... ಅದೆಷ್ಟು ದೂರ ಹಾರುತ್ತಾನೆ ಈ ಯುವಕ...!

ಇದಾದ ಬಳಿಕ ಸಾಂಗವಾಗಿ ಪೂಜೆ ನಡೆದಿದೆ. ಈ ಫೋಟೋವನ್ನೂ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ.


ಅರ್ಚಕರಿಲ್ಲದೆ ಪೂಜೆ ನಡೆಯುತ್ತದೆಯೆಂದು ನಿರಾಸೆಯಿಂದ ಮಹಿಳೆಯರು ಹೀಗೆ ಮಾಡಿರೋ ಅಥವಾ ಬೇರೆ ಕಡೆ ಪೂಜೆ ಒಪ್ಪಿಕೊಂಡ ಕಾರಣಕ್ಕೆ ಅರ್ಚಕರು ಇಲ್ಲಿ ಪೂಜೆಗೆ ನಿರಾಕರಿಸಿದರೋ ಗೊತ್ತಿಲ್ಲ. ಆದರೆ, ಸದ್ಯ ಈ ವಿಡಿಯೋ ವೈರಲ್ ಆಗುತ್ತಿರುವುದಂತೂ ಸತ್ಯ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ