ಆ್ಯಪ್ನಗರ

Emotional Video : ಮತ್ತೆ ಸೇವೆಗೆ ಮರಳಿದ ಯೋಧರು : ಕುಟುಂಬದವರನ್ನು ಬೀಳ್ಕೊಟ್ಟ ಕ್ಷಣವೇ ಭಾವನಾತ್ಮಕ

ಯೋಧರನ್ನು ಕುಟುಂಬದ ಸದಸ್ಯರು ರೈಲ್ವೇ ನಿಲ್ದಾಣದಲ್ಲಿ ಬೀಳ್ಕೊಡುವ ಭಾವನಾತ್ಮಕ ವಿಡಿಯೋವೊಂದು ವೈರಲ್ ಆಗುತ್ತಿದೆ. ರೈಲ್ವೆ ಸಚಿವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ ಎಲ್ಲರನ್ನು ಭಾವುಕರನ್ನಾಗಿಸಿದೆ.

Vijaya Karnataka Web 22 Jul 2020, 1:51 pm
ಯೋಧರು ನಮ್ಮ ದೇಶದ ಹೆಮ್ಮೆ... ಸೈನಿಕರು ಇರುವುದರಿಂದ ನಾವಿಲ್ಲಿ ದೇಶದೊಳಗೆ ಸುರಕ್ಷಿತವಾಗಿದ್ದೇವೆ... ದೇಶ ಸೇವೆಗೆಂದೇ ತಮ್ಮ ಬದುಕನ್ನು ಮುಡಿಪಾಗಿಟ್ಟ ಈ ವೀರರನ್ನು ಎಷ್ಟು ಹೊಗಳಿದರೂ ಅದು ಕಡಿಮೆಯೇ. ಮರಳುಗಾಡು, ಹಿಮ, ಬೆಟ್ಟ ಗುಡ್ಡ ಹೀಗೆ ಕಡುಕಷ್ಟದ ಪ್ರದೇಶದಲ್ಲೆಲ್ಲಾ ಯೋಧರು ನಮಗಾಗಿ ಸೇವೆ ಸಲ್ಲಿಸುತ್ತಾರೆ. ದೇಶ ಸೇವೆಯೇ ನಮ್ಮ ಪರಮ ಗುರಿ ಎಂಬ ಏಕಮಾತ್ರ ದ್ಯೇಯದಿಂದ ಮುನ್ನುಗ್ಗುವ ಅದೆಷ್ಟೋ ವೀರರು ನಮ್ಮ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ್ದಾರೆ. ಕುಟುಂಬ, ಆಪ್ತರು ಎಲ್ಲರನ್ನೂ ಬಿಟ್ಟು ಎಲ್ಲೋ ದೂರದಲ್ಲಿ ಕರ್ತವ್ಯ ನಿರ್ವಹಿಸುವ ಈ ಯೋಧರ ತ್ಯಾಗ, ಸಮರ್ಪಣಾ ಜೀವನ ಎಲ್ಲರಿಗೂ ಮಾದರಿ. ಇಂತಹ ಯೋಧರು ಕುಟುಂಬದೊಂದಿಗೆ ಒಂದಷ್ಟು ದಿನ ಕಳೆದು ಮತ್ತೆ ಕರ್ತವ್ಯಕ್ಕೆ ಮರಳುವ ಕ್ಷಣ ಅತ್ಯಂತ ಭಾವನಾತ್ಮಕ... ಇಂತಹ ದೃಶ್ಯವನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Vijaya Karnataka Web Soldiers Returning To Duty
| Screengrab from video | Courtesy : Piyush Goyal/Twitter


Also Read : ಆ ಗ್ರಾಮದಲ್ಲಿ 8 ವರ್ಷಗಳ ಬಳಿಕ ಹುಟ್ಟಿತು ಮಗು : ಇಡೀ ಊರಿಗೆ ಊರಲ್ಲೇ ಸಂಭ್ರಮ!

ಇದು ಪುಣೆ ರೈಲು ನಿಲ್ದಾಣದಲ್ಲಿ ಸೆರೆಯಾದ ದೃಶ್ಯ. ಪುಣೆಯ ಖಡ್ಕಿ ರೈಲ್ವೆ ನಿಲ್ದಾಣದಲ್ಲಿ ಯೋಧರು ಮತ್ತೆ ಕರ್ತವ್ಯಕ್ಕೆ ಮರಳುವ ಅಪೂರ್ವ ಕ್ಷಣ ಸೆರೆಯಾಗಿದೆ. ತಮ್ಮ ಕುಟುಂಬದ ಸದಸ್ಯರನ್ನು ಪ್ರೀತಿಯಿಂದ ಆಲಿಂಗಿಸಿ ಯೋಧರೆಲ್ಲಾ ದೇಶ ಸೇವೆಗೆ ಮರಳಿದ್ದಾರೆ. ರಾಷ್ಟ್ರದ ಸೇವೆ ಮತ್ತು ರಕ್ಷಣೆಗಾಗಿ ತಮ್ಮ ಕುಟುಂಬಗಳಿಂದ ದೂರವಿರುವ ಈ ಧೈರ್ಯಶಾಲಿ ಸೈನಿಕರನ್ನು ಸಚಿವರು ಶ್ಲಾಘಿಸಿದ್ದಾರೆ.

Also Read : ನೀರಿನಲ್ಲಿ ಮುಳುಗಿ ಮರಿಗಳನ್ನು ರಕ್ಷಿಸುವ ತಾಯಿ ಇಲಿ : ಇದು ಹೃದಯ ಕರಗಿಸುವ ದೃಶ್ಯ


Also Read : ಆಸ್ಪತ್ರೆಯಲ್ಲಿರುವ ಕಂದನಿಗೆ 1000 ಕಿ.ಮೀ ದೂರದಿಂದ ಎದೆಹಾಲು ಕಳುಹಿಸುತ್ತಿದ್ದಾರೆ ತಾಯಿ!

ಇದೊಂದು ಅತ್ಯಂತ ಭಾವನಾತ್ಮಕ ಕ್ಷಣ. ಈ ದೃಶ್ಯವನ್ನು ನೋಡಿದಾಗ ನಮ್ಮನ್ನು ಇನ್ನಷ್ಟು ಭಾವುಕರನ್ನಾಗಿಸುವುದು ಇಲ್ಲಿ ಬಳಸಲಾದ 1986 ರ `ಕರ್ಮ' ಚಲನಚಿತ್ರದ `ದಿಲ್‌ ದಿಯಾ ಹೇ ಜಾನ್ ಬಿ ದೇಂಗೆ ಹೇ ವತನ್ ತೇರೇ ಲಿಯೇ' ಹಾಡು. ಈ ಹಾಡನ್ನು ಕೇಳಿದಾಗ ನಮಗೇ ಗೊತ್ತಿಲ್ಲದಂತೆ ಹೃದಯ ಭಾರವಾಗುತ್ತದೆ... ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಎಲ್ಲರೂ ಈ ವೀರ ಯೋಧರಿಗೆ ಶುಭಹಾರೈಸಿದ್ದಾರೆ. ಜೊತೆಗೆ, ಇವರ ದೇಶ ಸೇವೆಗೆ ಧನ್ಯವಾದ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ