ಆ್ಯಪ್ನಗರ

ಮೂರು ಆನೆಗಳ ಜೀವ ಉಳಿಸಿದ ಲೋಕೋ ಪೈಲಟ್ : ರೈಲು ಚಾಲಕರ ಕಾರ್ಯಕ್ಕೆ ನೆಟ್ಟಿಗರ ಶ್ಲಾಘನೆ

ಇದೊಂದು ಹೃದಯಸ್ಪರ್ಶಿ ದೃಶ್ಯ. ಲೋಕೋ ಪೈಲಟ್‌ಗಳ ಈ ಕಾರ್ಯಕ್ಕೆ ಸ್ವತಃ ರೈಲ್ವೇ ಸಚಿವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Vijaya Karnataka Web 11 Nov 2020, 1:30 pm
ಆ ಲೋಕೋ ಪೈಲಟ್‌ಗೆ ಮೂರು ಅಮೂಲ್ಯ ಜೀವ ಉಳಿಸಿದ ಧನ್ಯತಾಭಾವ... ಮನಸ್ಸಿನಲ್ಲಿ ಬೆಟ್ಟದಷ್ಟು ಸಮಾಧಾನ... ನೆಟ್ಟಿಗರಿಂದಲೂ ಹರಿದು ಬಂದು ಮೆಚ್ಚುಗೆಗಳ ಮಹಾಪೂರ... ಇದು ರೈಲು ಚಾಲಕರ ಹೃದಯವಂತಿಕೆಗೆ ಸಾಕ್ಷಿ...
Vijaya Karnataka Web elephant
| Screengrab from video | Courtesy : @PiyushGoyal/Twitter


ಆನೆಗಳು ಕೂಡಾ ನಮ್ಮ ದೇಶದ ಸಂಪತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆನೆಗಳು ರೈಲಿನಡಿಗೆ ಬಿದ್ದು ಜೀವ ಕಳೆದುಕೊಂಡಿದ್ದವು. ಈ ದೃಶ್ಯಗಳನ್ನು ನೋಡಿದಾಗಲೇ ಹೃದಯ ಭಾರವಾಗುತ್ತಿತ್ತು. ಛಿದ್ರ ಛಿದ್ರವಾಗಿ ಬಿದ್ದಂತಹ ಆನೆಗಳ ದೇಹವನ್ನು ಕಂಡಾಗ ಎಲ್ಲರ ಮನಸ್ಸು ಕದಡಿದ ಕೊಳದಂತಾಗುತ್ತಿತ್ತು. ಸಾಮಾಜಿಕ ಮಾಧ್ಯಮಗಳಲ್ಲೂ ಈ ಬಗ್ಗೆ ಜನ ಬೇಸರ ವ್ಯಕ್ತಪಡಿಸಿದ್ದರು. ಆದರೆ, ಇಷ್ಟು ದಿನ ಈ ರೀತಿಯ ನೋವಿನ ದೃಶ್ಯವನ್ನು ಕಂಡಿದ್ದ ಕಣ್ಣುಗಳಿಗೆ ಈಗ ಖುಷಿಕೊಡುವ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ಮೂರು ಆನೆಗಳ ಅಮೂಲ್ಯ ಜೀವವನ್ನು ರಕ್ಷಿಸಿದ ಅಪೂರ್ವ ದೃಶ್ಯ.

Also Read : ಮುಳುಗುತ್ತಿದ್ದ ಕೋತಿಯನ್ನು ರಕ್ಷಿಸಿದ ಹೃದಯವಂತರು : ಮಾದರಿ ಕಾರ್ಯಕ್ಕೆ ನೆಟ್ಟಿಗರ ಶ್ಲಾಘನೆ

ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ತಮ್ಮ @PiyushGoyal ಖಾತೆಯಲ್ಲಿ ಟ್ವಿಟ್ಟರ್ ಅಪೂರ್ವ ದೃಶ್ಯವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಇದು ಪಶ್ಚಿಮ ಬಂಗಾಳದ ಸಿವೋಕ್-ಗುಲ್ಮಾ ವಿಭಾಗದಲ್ಲಿ ಸೆರೆಯಾದ ದೃಶ್ಯ. ಈ ಹಳಿ ಪಕ್ಕದಲ್ಲಿ ಮೂರು ಆನೆಗಳು ಸಾಗುತ್ತಿದ್ದವು. ಇದನ್ನು ಕಂಡ ತಕ್ಷಣ ಲೋಕೋ ಪೈಲಟ್ ರೈಲನ್ನು ತಕ್ಷಣ ನಿಲ್ಲಿಸಿದ್ದಾರೆ. ಈ ಆನೆಗಳು ಹಳಿ ದಾಟುವ ತನಕ ಕಾದ ಚಾಲಕರು ಮತ್ತೆ ಮುಂದೆ ಸಾಗಿದ್ದಾರೆ. ಈ ಮೂಲಕ ಒಂದು ಮರಿಯಾನೆ ಮತ್ತು ಎರಡು ದೊಡ್ಡ ಆನೆಗಳ ಜೀವ ಉಳಿದಿದೆ.


Also Read : ಒಂದೇ ನದಿಯಲ್ಲಿ 5 ಬಣ್ಣ! ದೃಶ್ಯಕಾವ್ಯದಂತಿದೆ ಪ್ರಕೃತಿಯ ಈ ಸೊಬಗು! ಕಣ್ಮನ ಸೆಳೆಯುವ ಸೌಂದರ್ಯವಿದು

ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಈ ಹೃದಯವಂತರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕೆಲವರು ಈ ರೀತಿಯ ಸಮಸ್ಯೆಗೆ ಕೆಲ ಪರಿಹಾರಗಳನ್ನೂ ಸೂಚಿಸಿದ್ದಾರೆ.


Also Read : ಕಿಡ್ನಿ ರವಾನೆ : ಲ್ಯಾಂಬೋರ್ಗಿನಿಯಲ್ಲಿ ಬರೀ 2 ಗಂಟೆಯಲ್ಲಿ 500 ಕಿ.ಮೀ ದೂರದ ಆಸ್ಪತ್ರೆ ತಲುಪಿದ ಪೊಲೀಸ್!

ನಿಜಕ್ಕೂ ಇದು ಅಪೂರ್ವ ವಿಡಿಯೋ. ಪ್ರಾಣಿಗಳು ಕೂಡಾ ನಮ್ಮ ಆಸ್ತಿ. ಈ ಭೂಮಿ ಮೇಲೆ ಪ್ರಾಣಿಗಳೂ ಬದುಕುವ ಸಮಾನ ಹಕ್ಕನ್ನು ಹೊಂದಿವೆ. ಇದೇ ಕಾರಣಕ್ಕೆ ಈ ವಿಡಿಯೋ ಈಗ ಎಲ್ಲರ ಮನಸೆಳೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ