ವನ್ಯಜೀವಿಗಳ ಸ್ವಚ್ಛಂದ ಬದುಕಿನ ಚಟುವಟಿಕೆಗಳಲ್ಲಿ ಜನ ಮಧ್ಯಪ್ರವೇಶಿಸಬಹುದಾ...? ಬೇಟೆಯಾಡುತ್ತಿದ್ದ ಮತ್ತೊಂದು ಜೀವಿಯ ಬಾಯಿಯಿಂದ ಇನ್ನೊಂದು ಪ್ರಾಣಿಯನ್ನು ರಕ್ಷಿಸಬಹುದಾ...? ಇಂತಹದ್ದೊಂದು ಪ್ರಶ್ನೆಗೆ ಕಾರಣವಾಗಿದ್ದು ಅದೊಂದು ವಿಡಿಯೋ.
Also Read : ಬೀಚ್ನಲ್ಲಿ ಪಾರ್ಕ್ ಮಾಡಿದ್ದ ಕಾರನ್ನು ಎಳೆದೊಯ್ದ ಅಲೆಗಳು...!
ಅದು ಉದ್ಯಾನವೊಂದರ ರಸ್ತೆ . ಇಲ್ಲಿ ಹೆಬ್ಬಾವೊಂದು ಜಿಂಕೆಯನ್ನು ಬೇಟೆಯಾಡಿ ಅದನ್ನು ಗುಳುಂ ಮಾಡುವ ಸಿದ್ಧತೆಯಲ್ಲಿತ್ತು. ಆದರೆ, ಭಾರೀ ಭೋಜನದ ಕನಸು ಕಾಣುತ್ತಿದ್ದ ಹೆಬ್ಬಾವಿನ ಆಸೆಗೆ ವ್ಯಕ್ತಿಯೊಬ್ಬರು ತಣ್ಣೀರೆರಚಿದ್ದರು. ಅಂದರೆ, ಕೋಲಿನಿಂದ ಹೆಬ್ಬಾವಿಗೆ ಹೊಡೆಯುವ ಮೂಲಕ ಆ ವ್ಯಕ್ತಿ ಜಿಂಕೆಯನ್ನು ರಕ್ಷಿಸಿದ್ದಾರೆ. ಕೋಲು ತನ್ನ ದೇಹಕ್ಕೆ ತಾಗುತ್ತಿದ್ದಂತೆಯೇ ಜಿಂಕೆಯ ಮೇಲಿದ್ದ ಹೆಬ್ಬಾವಿನ ಹಿಡಿತ ಕೊಂಚ ಸಡಿಲವಾಗಿತ್ತು. ಹೀಗಾಗಿ, ಬಿಗಿ ಹಿಡಿತ ಸಡಿಲವಾಗುತ್ತಿದ್ದಂತೆಯೇ ಜಿಂಕೆ ಅಲ್ಲಿಂದ `ಬದುಕಿದೆಯಾ ಬಡಜೀವ' ಎಂಬಂತೆ ಎದ್ನೋ ಬಿದ್ನೋ ಎಂದು ಓಡಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
Also Read : ವ್ಹೀಲ್ಚೇರ್ ತಳ್ಳಿಕೊಂಡು ಹೋಗುವ ಮುದ್ದು ಶ್ವಾನ : ಈ ಸ್ನೇಹವೇ ಅಪೂರ್ವ
ಯಾವಾಗ ಈ ವಿಡಿಯೋ ಟ್ವಿಟ್ಟರ್ನಲ್ಲಿ ಅಪ್ಲೋಡ್ ಆಯಿತೋ ಅಲ್ಲಿಂದ ಸರಿ ತಪ್ಪಿನ ಚರ್ಚೆ ಶುರುವಾಗಿದೆ. ಈ ವಿಡಿಯೋ ಅಪ್ಲೋಡ್ ಮಾಡಿದ್ದ ವಿನಿತ್ ವಸಿಷ್ಠ್ ಅವರು ಕೂಡಾ `ಈ ವ್ಯಕ್ತಿ ಮಾಡಿದ್ದು ಸರಿ, ತಪ್ಪಾ...?' ಎಂದು ಕೇಳಿದ್ದರು. ಹೀಗಾಗಿ, ಈ ಬಗ್ಗೆ ಒಂದಷ್ಟು ಸುದೀರ್ಘ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಕೆಲವರು ಜನ ಇದು ಸರಿ ಎಂದರೆ, ಇನ್ನೊಂದಷ್ಟು ಜನ ವನ್ಯಲೋಕದ ಚಟುವಟಿಕೆಗಳಲ್ಲಿ ಜನ ಮಧ್ಯಪ್ರವೇಶಿಸಬಾರದು ಎಂದು ವಾದ ಮಂಡಿಸಿದ್ದಾರೆ.
Also Read : ಎಸ್ಕಲೇಟರ್ ಹ್ಯಾಂಡ್ರೈಲ್ನಲ್ಲಿ ಪಾರಿವಾಳದ `ಜಾರುಬಂಡಿ' ಆಟ...!
ಮತ್ತೊಂದು ಜೀವಿಯನ್ನು ಕೊಂದು ಬದುಕುವುದು ವನ್ಯಲೋಕದ ಕ್ರಮ. ಇದು ಇಲ್ಲಿನ ಆಹಾರ ಚಕ್ರವೂ ಹೌದು. ಹೀಗಾಗಿ, ಹೆಬ್ಬಾವಿನ ಆಹಾರವನ್ನು ತಪ್ಪಿಸಿದ್ದು ಸರಿನಾ...? ಎಂದು ಒಂದಷ್ಟು ಜನ ಪ್ರಶ್ನಿಸಿದ್ದಾರೆ.
ಖಂಡಿತಾ ಇದು ಜಟಿಲ ಪ್ರಶ್ನೆ... ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ... ಹೀಗಾಗಿ, ಪರ ವಿರೋಧದ ಚರ್ಚೆಯ ನಡುವೆಯೇ ಈ ವಿಡಿಯೋ ವೈರಲ್ ಆಗುತ್ತಿದೆ...
Also Read : ಬೀಚ್ನಲ್ಲಿ ಪಾರ್ಕ್ ಮಾಡಿದ್ದ ಕಾರನ್ನು ಎಳೆದೊಯ್ದ ಅಲೆಗಳು...!
ಅದು ಉದ್ಯಾನವೊಂದರ ರಸ್ತೆ . ಇಲ್ಲಿ ಹೆಬ್ಬಾವೊಂದು ಜಿಂಕೆಯನ್ನು ಬೇಟೆಯಾಡಿ ಅದನ್ನು ಗುಳುಂ ಮಾಡುವ ಸಿದ್ಧತೆಯಲ್ಲಿತ್ತು. ಆದರೆ, ಭಾರೀ ಭೋಜನದ ಕನಸು ಕಾಣುತ್ತಿದ್ದ ಹೆಬ್ಬಾವಿನ ಆಸೆಗೆ ವ್ಯಕ್ತಿಯೊಬ್ಬರು ತಣ್ಣೀರೆರಚಿದ್ದರು. ಅಂದರೆ, ಕೋಲಿನಿಂದ ಹೆಬ್ಬಾವಿಗೆ ಹೊಡೆಯುವ ಮೂಲಕ ಆ ವ್ಯಕ್ತಿ ಜಿಂಕೆಯನ್ನು ರಕ್ಷಿಸಿದ್ದಾರೆ. ಕೋಲು ತನ್ನ ದೇಹಕ್ಕೆ ತಾಗುತ್ತಿದ್ದಂತೆಯೇ ಜಿಂಕೆಯ ಮೇಲಿದ್ದ ಹೆಬ್ಬಾವಿನ ಹಿಡಿತ ಕೊಂಚ ಸಡಿಲವಾಗಿತ್ತು. ಹೀಗಾಗಿ, ಬಿಗಿ ಹಿಡಿತ ಸಡಿಲವಾಗುತ್ತಿದ್ದಂತೆಯೇ ಜಿಂಕೆ ಅಲ್ಲಿಂದ `ಬದುಕಿದೆಯಾ ಬಡಜೀವ' ಎಂಬಂತೆ ಎದ್ನೋ ಬಿದ್ನೋ ಎಂದು ಓಡಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
Also Read : ವ್ಹೀಲ್ಚೇರ್ ತಳ್ಳಿಕೊಂಡು ಹೋಗುವ ಮುದ್ದು ಶ್ವಾನ : ಈ ಸ್ನೇಹವೇ ಅಪೂರ್ವ
ಯಾವಾಗ ಈ ವಿಡಿಯೋ ಟ್ವಿಟ್ಟರ್ನಲ್ಲಿ ಅಪ್ಲೋಡ್ ಆಯಿತೋ ಅಲ್ಲಿಂದ ಸರಿ ತಪ್ಪಿನ ಚರ್ಚೆ ಶುರುವಾಗಿದೆ. ಈ ವಿಡಿಯೋ ಅಪ್ಲೋಡ್ ಮಾಡಿದ್ದ ವಿನಿತ್ ವಸಿಷ್ಠ್ ಅವರು ಕೂಡಾ `ಈ ವ್ಯಕ್ತಿ ಮಾಡಿದ್ದು ಸರಿ, ತಪ್ಪಾ...?' ಎಂದು ಕೇಳಿದ್ದರು. ಹೀಗಾಗಿ, ಈ ಬಗ್ಗೆ ಒಂದಷ್ಟು ಸುದೀರ್ಘ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಕೆಲವರು ಜನ ಇದು ಸರಿ ಎಂದರೆ, ಇನ್ನೊಂದಷ್ಟು ಜನ ವನ್ಯಲೋಕದ ಚಟುವಟಿಕೆಗಳಲ್ಲಿ ಜನ ಮಧ್ಯಪ್ರವೇಶಿಸಬಾರದು ಎಂದು ವಾದ ಮಂಡಿಸಿದ್ದಾರೆ.
Also Read : ಎಸ್ಕಲೇಟರ್ ಹ್ಯಾಂಡ್ರೈಲ್ನಲ್ಲಿ ಪಾರಿವಾಳದ `ಜಾರುಬಂಡಿ' ಆಟ...!
ಮತ್ತೊಂದು ಜೀವಿಯನ್ನು ಕೊಂದು ಬದುಕುವುದು ವನ್ಯಲೋಕದ ಕ್ರಮ. ಇದು ಇಲ್ಲಿನ ಆಹಾರ ಚಕ್ರವೂ ಹೌದು. ಹೀಗಾಗಿ, ಹೆಬ್ಬಾವಿನ ಆಹಾರವನ್ನು ತಪ್ಪಿಸಿದ್ದು ಸರಿನಾ...? ಎಂದು ಒಂದಷ್ಟು ಜನ ಪ್ರಶ್ನಿಸಿದ್ದಾರೆ.
ಖಂಡಿತಾ ಇದು ಜಟಿಲ ಪ್ರಶ್ನೆ... ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ... ಹೀಗಾಗಿ, ಪರ ವಿರೋಧದ ಚರ್ಚೆಯ ನಡುವೆಯೇ ಈ ವಿಡಿಯೋ ವೈರಲ್ ಆಗುತ್ತಿದೆ...