ಆ್ಯಪ್ನಗರ

ಈ ಹೋರಿಯ ಸೆಗಣಿಗಿದೆ `ಚಿನ್ನ'ದ ಬೆಲೆ...! : ಯಾಕೆ ಗೊತ್ತಾ...?

ಚಿನ್ನದ ಬೆಲೆ ಗಗನಕ್ಕೇರಿ ಸಾಮಾನ್ಯರಿಗೆ ಮುಟ್ಟಲಾಗುತ್ತಿಲ್ಲ. ಅಂತಹದ್ರಲ್ಲಿ ಇಲ್ಲೊಂದು ಹೋರಿಯ ಸೆಗಣಿಗೆ ಚಿನ್ನದ ಮಹತ್ವದ ಬಂದಿದೆ. ಈ ಹೋರಿ ಸೆಗಣಿ ಹಾಕಲಿ ಎಂದು ಮಾಲಿಕರು ಸಿಕ್ಕಿದ್ದನ್ನೆಲ್ಲಾ ತಿನ್ನಿಸುತ್ತಿದ್ದಾರೆ...!

Vijaya Karnataka Web 23 Oct 2019, 1:11 pm
ಹಿಸ್ಸಾರ್ : ಹರಿಯಾಣದ ಹಿಸ್ಸಾರ್‌ನ ಸಿರ್ಸಾ ಜಿಲ್ಲೆಯ ಕಲನ್ವಾಲಿ ಪಟ್ಟಣದಲ್ಲಿ ಒಂದು ಕುಟುಂಬ ಬಿಡಾಡಿ ಹೋರಿಯೊಂದು ಸೆಗಣಿ ಹಾಕುವುದನ್ನೇ ಕಾಯುತ್ತಾ ಕುಳಿತಿದೆ...! ಯಾಕೆ ಗೊತ್ತಾ...? ಈ ಹೋರಿ ಬರೋಬ್ಬರಿ ನಾಲ್ಕು ತೊಲ ಬಂಗಾರವನ್ನು ನುಂಗಿ ಬಿಟ್ಟಿದೆ...! ಹೀಗಾಗಿ, ಹೋರಿಯ ಹೊಟ್ಟೆಯಲ್ಲಿದ್ದ ಬಂಗಾರ ಹೊರಬರಲಿ ದೇವರೇ ಎಂದು ಮನೆಯವರು ಪ್ರಾರ್ಥಿಸುತ್ತಿದ್ದಾರೆ.
Vijaya Karnataka Web gold jewellery
ಬಂಗಾರ ನುಂಗಿದ್ದ ಹೋರಿ


Also Read : ಇದು ಅಂತಿಂಥ ಎಲೆಯಲ್ಲ...! ಇದರಲ್ಲಿ ನಮ್ಮ ಭವಿಷ್ಯವೇ ಇದೆ...!

ಕಲನ್ವಾಲಿ ಪಟ್ಟಣದ ವಾರ್ಡ್ ನಂ 6ರಲ್ಲಿ ಜನಕರಾಜ್ ಎಂಬ ಉದ್ಯಮಿಯ ಕುಟುಂಬಸ್ಥರು ದಿನಾ ಪಾತ್ರೆಯೊಂದರಲ್ಲಿ ಅಳಿದುಳಿದ ತರಕಾರಿಯನ್ನು ಇಟ್ಟು ಮನೆಯ ಹೊರಗೆ ಎಸೆಯುತ್ತಿದ್ದರು. ಮೊನ್ನೆ ಜನಕ್ ಅವರ ಪತ್ನಿ ಮತ್ತು ಸೊಸೆ ಯಾವುದೋ ಒಂದು ಕೆಲಸದ ಕಾರಣಕ್ಕೆ ತಮ್ಮ ಬಂಗಾರವನ್ನು ತೆಗೆದು ಇದೇ ತರಕಾರಿ ತ್ಯಾಜ್ಯ ಇಡುವ ಪಾತ್ರೆಯಲ್ಲಿ ಇಟ್ಟಿದ್ದರು ಮತ್ತು ಮತ್ತೆ ಅದನ್ನು ಅಲ್ಲಿಂದ ತೆಗೆಯಲು ಮರೆತಿದ್ದರು. ಈ ವಿಷಯ ಗೊತ್ತಿಲ್ಲದ ಮನೆಯ ಮತ್ತೋರ್ವ ಸದಸ್ಯೆ ತರಕಾರಿ ತ್ಯಾಜ್ಯಗಳನ್ನು ಮನೆಯ ಹೊರಗೆ ಕೊಂಡೊಯ್ದು ಎಸೆದಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಬಿಡಾಡಿ ಹೋರಿ ಈ ತರಕಾರಿ, ಎಲೆಗಳನ್ನು ತಿನ್ನುವುದರ ಜೊತೆ ಈ ಬಂಗಾರವನ್ನೂ ನುಂಗಿ ಬಿಟ್ಟಿದೆ.

Also Read : ಇದ್ದಕ್ಕಿದ್ದಂತೆ ಮರಕ್ಕೆ ಬಿತ್ತು ಬೆಂಕಿ...! : ಇಲ್ಲಿದೆ ವಿಡಿಯೋ...!

ಮರುದಿನ ಬಂಗಾರ ಕಾಣುತ್ತಿಲ್ಲವೆಂದು ಹುಡುಕುತ್ತಿದ್ದಾಗ ಒಂದು ಉಂಗುರ ಬಾಗಿಲಿನ ಪಕ್ಕ ಸಿಕ್ಕಿತ್ತು. ಮನೆಯವರಿಗೆ ಅನುಮಾನ ಬಂದು ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದರು. ಆಗ ದನ ತರಕಾರಿ ತಿನ್ನುವ ದೃಶ್ಯ ಕಂಡು ಬಂದಿತ್ತು. ಇದನ್ನು ನೋಡಿದ ಮೇಲೆ ಮನೆಯವರಿಗೆ ಎಲ್ಲಾ ನೆನಪಾಗಿ ಹೋರಿಯನ್ನು ಹುಡುಕಲು ಹೊರಟ್ಟಿದ್ದರು. ಸುಮಾರು ಐದು ಗಂಟೆಗಳ ಕಾಲ ಹುಡುಕಿದಾಗ ಹೋರಿಯೇನೋ ಸಿಕ್ಕಿತ್ತು. ಆದರೆ, ಬಂಗಾರವನ್ನು ಹೊರತೆಗೆಯುವುದು ಹೇಗೆ ಎಂಬ ಟೆನ್ಷನ್ ಶುರುವಾಗಿತ್ತು. ಸದ್ಯ ಈ ಮನೆಯವರು ಹೋರಿಗೆ ಚೆನ್ನಾಗಿ ಹುಲ್ಲು, ಆಹಾರ ನೀಡುತ್ತಿದ್ದಾರೆ. ಸೆಗಣಿ ಹಾಕುವಾಗಲಾದರೂ ಬಂಗಾರ ಹೊರಬರಲಿ ಎಂಬ ಆಸೆ ಇವರದ್ದು.

Also Read : ಈಕೆಯ ವೇಗದೆದುರು ಸ್ಪೈಡರ್ ಮ್ಯಾನ್ ಫುಲ್ ಶೇಕ್...!

ಆದರೆ, ಪಶುವೈದ್ಯ ತಜ್ಞರು ಹೇಳುವ ಪ್ರಕಾರ, ಜಾನುವಾರುಗಳ ಹೊಟ್ಟೆಯಲ್ಲಿ ನಾಲ್ಕು ಭಾಗಗಳಿರುತ್ತವೆ. ಹೀಗಾಗಿ, ವಿಸರ್ಜನೆ ವೇಳೆ ಈ ಬಂಗಾರಗಳು ಬರುವುದು ಅಷ್ಟು ಸುಲಭವಲ್ಲ ಎಂದು ಹೇಳಿದ್ದಾರೆ. ಇದು ಈ ಮನೆಯವರನ್ನು ಇನ್ನಷ್ಟು ಚಿಂತೆಗೀಡು ಮಾಡಿದೆ. ಆದರೂ, ಬಂಗಾರ ಮರಳಿ ಸಿಗಬಹುದೇನೋ ಎಂಬ ಸಣ್ಣ ಆಸೆಯಿಂದ ಹೋರಿಗೆ ಚೆನ್ನಾಗಿ ತಿನ್ನಿಸುತ್ತಿದ್ದಾರೆ. ಇನ್ನೊಂದೆಡೆ, ಇಷ್ಟು ದಿನ ಅಲ್ಲಿ ಇಲ್ಲಿ ಸುತ್ತಾಡಿ ಆಹಾರ ಹುಡುಕುತ್ತಿದ್ದ ಈ ಹೋರಿ ರಾಜಾತಿಥ್ಯದಿಂದ ಖುಷಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ