ಆ್ಯಪ್ನಗರ

ಬಟ್ಟೆಯಂಗಡಿಯೊಳಗೆ ನಿತ್ಯ ದನಕ್ಕೆ ಪೂಜೆ ಸಲ್ಲಿಸುವ ಗ್ರಾಹಕರು...! : ಇಲ್ಲಿದೆ ಅಚ್ಚರಿಯ ವಿಡಿಯೋ

ಬೀದಿ ದನವೊಂದು ಪ್ರತಿದಿನ ಬಟ್ಟೆಯಂಗಡಿಯೊಳಗೆ ಬಂದು ಮಲಗಿ ಒಂದಷ್ಟು ಹೊತ್ತು ವಿಶ್ರಾಂತಿ ಪಡೆದು ಹೋಗುವ ದೃಶ್ಯ ಈಗ ವೈರಲ್ ಆಗಿದೆ. ಜೊತೆಗೆ, ಈ ಅಂಗಡಿಗೆ ಬರುವ ಗ್ರಾಹಕರೂ ಈ ದನವನ್ನು ದೇವರಂತೆ ಕಂಡು ಪೂಜೆ ಸಲ್ಲಿಸುತ್ತಿದ್ದಾರೆ.

Vijaya Karnataka Web 7 Nov 2019, 4:52 pm
ಮೈದುಕೂರ್ (ಆಂಧ್ರಪ್ರದೇಶ) : ಆಂಧ್ರಪ್ರದೇಶದ ಕಡಪ ಜಿಲ್ಲೆಯ ಮೈದುಕೂರು ಎಂಬಲ್ಲಿ ದನವೊಂದು ಅಚ್ಚರಿಗೆ ಕಾರಣವಾಗಿದೆ. ಇಲ್ಲಿನ ಬಟ್ಟೆ ಅಂಗಡಿಗೆ ನಿತ್ಯ ಬರುವ ಈ ದನ ಅಂಗಡಿಯೊಳಗೇ ಬಂದು ಮೂರರಿಂದ ನಾಲ್ಕು ಗಂಟೆಗಳ ಕಾಲ ಮಲಗುತ್ತದೆ. ಕಳೆದ ಆರು ತಿಂಗಳಿನಿಂದ ಇದು ಈ ದನದ ನಿತ್ಯದ ದಿನಚರಿಯಾಗಿದೆ.
Vijaya Karnataka Web Sairam cloth store
ಬಟ್ಟೆಯಂಗಡಿಯೊಳಗೆ ಮಲಗಿರುವ ದನ (Screengrab from video


Also Read : ಈ ದೇಶದಲ್ಲಿ ಏಳಕ್ಕಿಂತ ಜಾಸ್ತಿ ಹೆರುವ ತಾಯಿಗೆ ಕೊಡ್ತಾರೆ ಗೋಲ್ಡ್‌ ಮೆಡಲ್...!

ಪ್ರತಿದಿನ ನಿಗದಿತ ಸಮಯಕ್ಕೆ ಬರುವ ಈ ದನ ಬಟ್ಟೆ ಅಂಗಡಿಯ ನೆಲಕ್ಕೆ ಹಾಕಿರುವ ಹಾಸಿಗೆಯಲ್ಲಿ ಫ್ಯಾನಿನ ಕೆಳಗೆ ಹಾಯಾಗಿ ಮಲಗಿ ನಂತರ ತನ್ನ ಪಾಡಿಗೆ ಎದ್ದು ಹೋಗುತ್ತದೆ. ಈ ದನವನ್ನು ದೇವರಂತೆ ಕಾಣುವ ಈ ಬಟ್ಟೆ ಅಂಗಡಿಯವರು ಎಂದೂ ಇದಕ್ಕೆ ತೊಂದರೆ ಕೊಟ್ಟಿಲ್ಲ. ದನವೂ ಯಾವತ್ತೂ ಅಂಗಡಿಯಲ್ಲಿ ಯಾರಿಗೂ ತೊಂದರೆ ಕೊಡದೆ ತನ್ನ ಪಾಡಿಗೆ ಬಂದು ತನ್ನ ಪಾಡಿಗೆ ಹೋಗುತ್ತಿದೆ. ಆರಂಭದಲ್ಲಿ ಇದು ಅಂಗಡಿಯವರಿಗೆ ವಿಚಿತ್ರದಂತೆ ಕಂಡಿದ್ದರೂ ಈಗ ಅಂಗಡಿಯವರು ಮತ್ತು ಇಲ್ಲಿನ ಸುತ್ತಮುತ್ತಲಿನವರಿಗೆ ಇದೊಂದು ಸಾಮಾನ್ಯ ಸಂಗತಿಯಂತಾಗಿ ಹೋಗಿದೆ.

Also Read :ಪುಟಾಣಿ ಮಗುವನ್ನು ಮಲಗಿಸಲು ಈ ವ್ಯಕ್ತಿ ಮಾಡಿದ್ದ ಐಡಿಯಾ ಸೂಪರ್...!

ಶ್ರೀಸಾಯಿರಾಮ್ ಕ್ಲೋತ್ ಸ್ಟೋರ್‌ ಎಂಬ ಈ ಬಟ್ಟೆ ಅಂಗಡಿಗೆ ಕಳೆದ ಬೇಸಿಗೆಯಲ್ಲಿ ಮೊದಲ ಬಾರಿಗೆ ಈ ದನ ಎಂಟ್ರಿ ಕೊಟ್ಟಿತ್ತು. ಸೆಖೆಯ ಕಾರಣ ಅಂಗಡಿಯೊಳಗೆ ಬಂದಿದ್ದ ದನ ಫ್ಯಾನಿನ ಕೆಳಗೆ ಕುಳಿತಿತ್ತು. ಈ ವೇಳೆ, ಅಂಗಡಿ ಸಿಬ್ಬಂದಿ ಮತ್ತು ಗ್ರಾಹಕರು ಭಯಭೀತರಾಗಿದ್ದರು. ಅಂಗಡಿ ಮಾಲಿಕರು ದನವನ್ನು ಎಷ್ಟು ಹೊರಗೆ ಕಳುಹಿಸಲು ನೋಡಿದರೂ ಅದು ಹೋಗಲು ತಯಾರಿರಲಿಲ್ಲ. ಕೊನೆಗೆ ಒಂದಷ್ಟು ಹೊತ್ತು ಇಲ್ಲೇ ಮಲಗಿ ಬಳಿಕ ಇದು ಎದ್ದು ಹೋಗಿತ್ತು. ಇದಾದ ಬಳಿಕ ಪ್ರತಿದಿನ ಈ ದನ ಇಲ್ಲಿಗೆ ಭೇಟಿ ನೀಡುತ್ತಿದೆ. ಅಂಗಡಿಯ ರಜಾ ದಿನ ಹೊರತು ಪಡಿಸಿ ನಿತ್ಯ ಯಾವತ್ತಾದರೂ ಒಂದಷ್ಟು ಹೊತ್ತು ಈ ದನ ಇಲ್ಲಿ ಕಾಣಸಿಗುತ್ತದೆ.


`ಈ ದನ ಯಾವತ್ತೂ ಯಾರಿಗೂ ತೊಂದರೆ ಮಾಡಿಲ್ಲ. ನಿತ್ಯ ಬಂದು ಫ್ಯಾನಿನ ಕೆಳಗೆ ಮಲಗುತ್ತದೆ. ಒಂದೊಮ್ಮೆ ಫ್ಯಾನ್ ಬಂದ್ ಮಾಡಿದರೆ ಎದ್ದು ಹೊರಗೆ ಹೋಗುತ್ತದೆ. ಆದರೆ, ಗ್ರಾಹಕರಿಗೆ ಇದುವರೆಗೆ ಈ ದನದಿಂದ ಯಾವುದೇ ತೊಂದರೆಯಾಗಿಲ್ಲ. ಅಂಗಡಿಯೊಳಗೆ ಬಂದು ಸೆಗಣಿ, ಮೂತ್ರ ವಿಸರ್ಜಿಸಿದ ಉದಾಹರಣೆಯೂ ಇಲ್ಲ. ಅಂಗಡಿಯೊಳಗಿನ ಸ್ವಚ್ಛತೆಗೆ ಈ ದನದಿಂದ ಯಾವತ್ತೂ ಭಂಗ ಬಂದಿಲ್ಲ' ಎಂದು ಹೇಳುತ್ತಾರೆ ಈ ಅಂಗಡಿ ಮಾಲಿಕ ಪೊಲಿಮೆರ ಒಬಯ್ಯ.

Also Read : ದುರ್ಗೆ, ಕಾಳಿಗೂ ಹಾಕಿದ್ದಾರೆ ಫೇಸ್ ಮಾಸ್ಕ್‌...! ಕಾರಣ ಕೇಳಿದರೆ ದಂಗಾಗ್ತೀರಿ...!

ಆರಂಭದಲ್ಲಿ ಅಂಗಡಿಯೊಳಗೆ ದನ ಕಂಡು ಜನ ಕೂಡಾ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಆದರೆ, ಈಗ ದನ ಇದೆ ಎಂಬ ಕಾರಣಕ್ಕೇ ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಇದನ್ನು `ಕೌ ಶಾಪ್' ಅಥವಾ ದನದ ಅಂಗಡಿ ಎಂದೇ ಕರೆಯಲಾಗುತ್ತದೆ. ಬರುವಾಗಲೇ ಬಾಳೆಹಣ್ಣು, ಅರಿಶಿನ, ಕುಂಕುಮವನ್ನು ತರುವ ಒಂದಷ್ಟು ಗ್ರಾಹಕರು, ತಮ್ಮೆಲ್ಲಾ ಖರೀದಿ ಮುಗಿದ ಮೇಲೆ ದನಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.

ಸದ್ಯ ಈ ಟೆಕ್ಸ್‌ಟೈಲ್ಸ್‌ ದನದ ಕಾರಣಕ್ಕೇ ಎಲ್ಲರ ಕುತೂಹಲ ಕೆರಳಿಸಿದೆ. ಸೆಖೆಯಿಂದ ತಪ್ಪಿಸಿಕೊಳ್ಳಲು ಒಂದು ದಿನ ಅಂಗಡಿಯೊಳಗೆ ಬಂದಿದ್ದ ದನ ಈಗ ಪ್ರತಿದಿನದ ಅತಿಥಿಯಾಗಿ ಹೋಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ