ಆ್ಯಪ್ನಗರ

ಆರು ವರ್ಷದ ಬಳಿಕ ಕುಟುಂಬದಲ್ಲಿ ಖುಷಿ ತಂದ ಟಿಕ್‌ಟಾಕ್...

ಟಿಕ್‌ಟಾಕ್‌ನಿಂದಾಗಿ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಆರು ವರ್ಷದ ಬಳಿಕ ಮನೆ ಸೇರಿದ್ದಾರೆ. ಇದಕ್ಕೆ ಕಾರಣ ಟಿಕ್‌ಟಾಕ್...

Vijaya Karnataka Web 4 Mar 2020, 4:37 pm
ಟಿಕ್‌ಟಾಕ್‌ ಎನ್ನುವುದು ಈಗೀಗ ಬಹುಜನರನ್ನು ಸೆಳೆದಿರುವ ಮಾಧ್ಯಮ. 150 ದೇಶಗಳಲ್ಲಿ ಕೋಟ್ಯಂತರ ಜನ ಟಿಕ್‌ಟಾಕ್‌ ಅನ್ನು ಬಳಸುತ್ತಾರೆ. ಸಣ್ಣ ಸಣ್ಣ ವಿಡಿಯೋ ಮಾಡಿ ಬಳಕೆದಾರರು ಎಂಜಾಯ್ ಮಾಡುತ್ತಾರೆ. ಇದರ ನಡುವೆ, ಅಪಾಯಕಾರಿ ಚಾಲೆಂಜ್‌ಗಳ ಮೂಲಕ ಟಿಕ್‌ಟಾಕ್ ಅಪಖ್ಯಾತಿಗೂ ಗುರಿಯಾಗಿದ್ದೂ ಇದೆ. ಆದರೆ, ಇದುವರೆಗೆ ವಿಡಿಯೋ ಮೂಲಕ ಮನೋರಂಜನೆ ಕೊಟ್ಟಿದ್ದ ಇದೇ ಟಿಕ್‌ಟಾಕ್ ಈಗ ಕುಟುಂಬವೊಂದರ ಖುಷಿಗೆ ಕಾರಣವಾಗಿದೆ. ಬರೋಬ್ಬರಿ ಆರು ವರ್ಷದ ಬಳಿಕ ಕುಟುಂಬವೊಂದರಲ್ಲಿ ಖುಷಿ ಮರಳಲು ಟಿಕ್‌ಟಾಕ್‌ನ ಒಂದು ವಿಡಿಯೋ ಸೇತುವೆಯಾಗಿದೆ.
Vijaya Karnataka Web Image by Argo Images from Pixabay
| Representative image | Image by Argo Images from Pixabay


Also Read : ಅಬ್ಬಬ್ಬಾ... ಹೇಗೆಲ್ಲಾ ಆಭರಣ ಕಳ್ಳತನ ಮಾಡುತ್ತಾರೆ ನೋಡಿ...!

ಇದು ನಡೆದಿರುವುದು ಆಂಧ್ರಪ್ರದೇಶದಲ್ಲಿ. ಆಂಧ್ರದ ಕರ್ನೂಲ್ ಜಿಲ್ಲೆಯ ಅನ್ನಪುರಿ ಪುಲ್ಲಯ್ಯ ಎಂಬವರು ಕಳೆದ ಆರು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇವರು ಮನೆಯನ್ನು ತ್ಯಜಿಸಿ ಕುಟುಂಬದವರ ಯಾರ ಸಂಪರ್ಕಕ್ಕೂ ಸಿಗದೆ ಒಂಟಿ ಜೀವನ ನಡೆಸುತ್ತಿದ್ದರು. ಇತ್ತ, ತಂದೆ ಮನೆ ಬಿಟ್ಟು ಹೋದ ಬಳಿಕ ಅವರ ಮಕ್ಕಳು ಅನ್ನಪುರಿ ಪುಲ್ಲಯ್ಯ ಅವರಿಗಾಗಿ ಎಲ್ಲಾ ಕಡೆ ಹುಡುಕಾಡಿದ್ದರು. ಪೊಲೀಸರಿಗೂ ದೂರು ಕೊಟ್ಟಿದ್ದರು. ತಂದೆಯನ್ನು ಹುಡುಕಿಕೊಡಪ್ಪ ದೇವರೇ ಎಂದು ಹಲವಾರು ದೇವಸ್ಥಾನಕ್ಕೂ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದರು. ಆದರೆ, ಯಾವುದೂ ಪ್ರಯೋಜನವಾಗಿರಲಿಲ್ಲ.

Also Read : ಯುವತಿಯ ಬದುಕಿನ ಖುಷಿಯನ್ನೇ ನುಂಗಿದ ಟ್ಯಾಟೂ...!

ಹೀಗಾಗಿ, ನಾಲ್ಕು ತಿಂಗಳ ಹಿಂದೆ ಪುಲ್ಲಯ್ಯರ ಪುತ್ರ ವೆಂಕಟೇಶ ನರಸಿಂಹಲು ಟಿಕ್‌ಟಾಕ್‌ನಲ್ಲಿ ವಿಡಿಯೋ ಮಾಡಿ ತನ್ನ ತಂದೆಯನ್ನು ಹುಡುಕಿಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಈ ವಿಡಿಯೋವನ್ನು ಬಹಳ ಜನ ನೋಡಿದ್ದರು. ಜೊತೆಗೆ, ಪುತ್ರನ ಈ ಕಾರ್ಯಕ್ಕೆ ಏನಾದರೂ ಸಹಾಯ ಮಾಡೋಣ ಎಂದು ಈ ವಿಡಿಯೋವನ್ನು ಇನ್ನಷ್ಟು ಹಂಚಿಕೊಂಡಿದ್ದರು. ಈ ನಡುವೆ, ಸ್ವತಃ ಪುಲ್ಲಯ್ಯ ಅವರೂ ಈ ವಿಡಿಯೋವನ್ನು ನೋಡಿದ್ದರು. ಪುತ್ರನ ಈ ವಿಡಿಯೋ ಕಂಡು ಇವರಿಗೆ ಮನಸ್ಸು ಕರಗಿತ್ತು. ಹೀಗಾಗಿ, ಮಗನ ಫೋನ್ ನಂಬರ್ ಸಂಗ್ರಹಿಸಿ ಕರೆ ಮಾಡಿದರು... ಫೋನಿನಲ್ಲಿ ತಂದೆಯ ಧ್ವನಿ ಕೇಳುತ್ತಿದ್ದಂತೆಯೇ ವೆಂಕಟೇಶ್ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

Also Read : ಮೃತದೇಹವಿದ್ದ ವಾಹನದೊಂದಿಗೆ ಕಳ್ಳ ಎಸ್ಕೇಪ್...! : ಮುಂದೇನಾಯ್ತು ಗೊತ್ತಾ...?

ಮನೆ ಬಿಟ್ಟು ಹೋಗಿದ್ದ ಅನ್ನಪುರಿ ಗುಜರಾತಿನ ಗಾಂಧಿಧಾಮ್‌ನಲ್ಲಿ ಬಟ್ಟೆ ತಯಾರಿಸುವ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಇತ್ತ, ಮಕ್ಕಳೊಂದಿಗೆ ಮಾತನಾಡಿದ ಬಳಿಕ ಅನ್ನಪುರಿ ಅವರ ಮನಸ್ಸೂ ಹಗುರವಾಗಿತ್ತು. ಜೊತೆಗೆ, ಇಬ್ಬರು ಪುತ್ರರೂ ಗುಜರಾತಿಗೆ ತೆರಳಿ ತಂದೆಯೊಂದಿಗೆ ಎರಡು ದಿನ ಕಳೆದು ಬಳಿಕ ಅವರನ್ನು ಊರಿಗೆ ಕರೆದುಕೊಂಡು ಬಂದಿದ್ದರು. ಈ ಮೂಲಕ ಕಳೆದ ಹೋಗಿದ್ದ ಸಂಭ್ರಮ ಈ ಮನೆಗೆ ಮತ್ತೆ ಮರಳಿದಂತಾಗಿದೆ. ಬೇರೆ ಬೇರೆ ಕಾರಣಕ್ಕೆ ವಿರೋಧಕ್ಕೂ ಗುರಿಯಾಗುತ್ತಿದ್ದ ಟಿಕ್‌ಟಾಕ್‌ನಿಂದ ಈ ಕುಟುಂಬಕ್ಕೆ ಮಾತ್ರ ಒಳ್ಳೆಯದೇ ಆಗಿದೆ... ಇನ್ನು ಕೂಡಾ ಈ ಖುಷಿ ಇದೇ ರೀತಿ ಇರಲಿ ಎಂಬುದು ಎಲ್ಲರ ಹಾರೈಕೆ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ