ಆ್ಯಪ್ನಗರ

ಮರಿಯನ್ನು ಹುಡುಕಲು ಎರಡು ಕಾಲಿನಲ್ಲಿ ನಿಂತ ಚಿರತೆ: ಇದಲ್ಲವೇ ತಾಯಿ ಮಮತೆ

ಇದು ತಾಯಿ ಚಿರತೆಯೊಂದರ ಅದ್ಭುತ ದೃಶ್ಯ... ಈ ದೃಶ್ಯ ಎಲ್ಲರ ಹೃದಯ ತುಂಬಿಸುವಂತಿದೆ... ತಾಯಿ ಮಮತೆಗೂ ಈ ಚಿರತೆ ಸಾಕ್ಷಿಯಾಗಿದೆ...

Vijaya Karnataka Web 8 Jun 2020, 9:07 am
ಚಿರತೆಯಾದರೇನು...? ಅವಳೂ ಒಬ್ಬಳು ತಾಯಿ... ಬೇರೆ ಪ್ರಾಣಿಗಳ ಪಾಲಿಗೆ ಅವಳು ಕ್ರೂರಿಯಾಗಿರಬಹುದು. ಆದರೆ, ತನ್ನ ಕಂದಮ್ಮನಿಗೆ ಅವಳು ದೇವತೆ... ಇವಳಿಗೂ ಅಷ್ಟೇ, ಮರಿಯೇ ಸರ್ವಸ್ವ... ಕಣ್ಣರೆಪ್ಪೆಯಲ್ಲಿಟ್ಟು ಮರಿಯನ್ನು ಕಾಯುತ್ತಿದ್ದವಳು ಅವಳು... ಆದರೆ, ಇದೇ ಕಂದಮ್ಮ ತನ್ನ ಕಣ್ಣ ದೃಷ್ಟಿಯ ವ್ಯಾಪ್ತಿಯಲ್ಲಿ ಕಾಣದೇ ಇದ್ದಾಗ ಅವಳು ಅಕ್ಷರಶಃ ನೊಂದು ಹೋಗಿದ್ದಳು. ಅವಳ ಎದೆಬಡಿತವೂ ಹೆಚ್ಚಾಗಿತ್ತು... ಹೀಗಾಗಿ, ಕಂದಮ್ಮನನ್ನು ಹುಡುಕುತ್ತಾ ಹೊರಟೇ ಬಿಟ್ಟಳಿದ್ದಳು... ಆಗಾಗ ಎರಡು ಕಾಲಿನಲ್ಲಿ ನಿಂತು ಸುತ್ತಲೂ ದೃಷ್ಟಿ ಹಾಯಿಸುತ್ತಿದ್ದಳು...!
Vijaya Karnataka Web mother
| Screengrab from video | Courtesy : Susanta Nanda IFS/Twitter


Also Read : ಟಗರಿನ ಕೊಂಬಿನಲ್ಲಿ ನೇತಾಡುವುದೆಂದರೆ ಈ ಕೋತಿಗೆ ಬಲು ಇಷ್ಟ!

ಇದೊಂದು ಹೃದಯಸ್ಪರ್ಶಿ ದೃಶ್ಯ. ತಾಯಿ ಮಮತೆಗೆ ಸಾಕ್ಷಿ ಇದು... ಒಣಹುಲ್ಲಿನ ನಡುವೆ ತನ್ನ ಮರಿ ಕಾಣದೇ ಇದ್ದಾಗ ಚಿರತೆಯೊಂದು ಎರಡು ಕಾಲಿನಲ್ಲಿ ನಿಂತು ಮರಿಯನ್ನು ಹುಡುಕಿದೆ. ಈ ವಿಡಿಯೋವನ್ನು ನೋಡಿದಾಗ ನಿಜಕ್ಕೂ ಹೃದಯ ಕರಗುತ್ತದೆ... ಪುಟಾಣಿ ಚಿರತೆ ಕಾಣದೇ ಇದ್ದಾಗ ಇವಳು ಅಕ್ಷರಶಃ ಹೆದರಿ ಹೋಗಿದ್ದಳು... ಬಹುಶಃ ಆಟ ಆಡುತ್ತಿದ್ದ ಮರಿ ಈ ಹುಲ್ಲಿನ ನಡುವೆ ಎಲ್ಲೋ ಅಡಗಿ ಕುಳಿತಿರಬಹುದು. ಆದರೆ, ಅಮ್ಮನಿಗೆ ಹೆದರಿಕೆ... ಕಂದಮ್ಮನಿಗೆ ಏನಾಯಿತೋ ಎಂಬ ಆತಂಕದಲ್ಲಿ ಅವಳು ನೊಂದು ಹೋಗಿದ್ದಳು...

Also Read : ಟ್ರಾವೆಲ್ ಪ್ಲಾನ್ ಕ್ಯಾನ್ಸಲ್ : ಮನೆಯಲ್ಲೇ ಸೃಷ್ಟಿಯಾಯಿತು ಏರ್‌ಪೋರ್ಟ್!

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಈ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಖತ್ ಆಗಿಯೇ ವೈರಲ್ ಆಗುತ್ತಿದೆ. ಅಲ್ಲದೆ, ಈ ವಿಡಿಯೋ ಕಂಡ ಎಲ್ಲರೂ ಈ ತಾಯಿ ಪ್ರೀತಿಯನ್ನು ಕೊಂಡಾಡಿದ್ದಾರೆ. ಅಲ್ಲದೆ, ಚಿರತೆಯ ಪರಿಸ್ಥಿತಿಯನ್ನು ಕಂಡು ಮರುಗಿದ್ದಾರೆ. ಇದು ಎಲ್ಲಿಯ ದೃಶ್ಯ. ಯಾವಾಗ ಸೆರೆಯಾದ ದೃಶ್ಯ, ಆಮೇಲೆ ಮರಿ ಸಿಕ್ಕಿತಾ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಈ ತಾಯಿಯನ್ನು ಕಂಡಾಗ ಮಾತ್ರ ಹೃದಯ ತುಂಬಿ ಬರುತ್ತದೆ.

Also Read : ನದಿಯಲ್ಲಿ ಮುಳುಗುತ್ತಿದ್ದ ಗರ್ಭಿಣಿ ಜಿಂಕೆಯನ್ನು ರಕ್ಷಿಸಿದ ಭಾರತೀಯ ಯೋಧರು

ಇದಕ್ಕೂ ಮೊದಲು ಸುಸಂತ ನಂದ ಬೇರೊಂದು ಚಿರತೆ ತನ್ನ ಮರಿಗಳೊಂದಿಗೆ ಆಡುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ತುಂಟಾಟದ ವಿಡಿಯೋ ಕೂಡಾ ಸಾಕಷ್ಟು ವೈರಲ್ ಆಗಿತ್ತು...

ಸದ್ಯ ಈ ಎರಡು ವಿಡಿಯೋಗಳು ನೆಟ್ಟಿಗರ ಗಮನ ಸೆಳೆದಿದೆ. ಈ ತಾಯಂದಿರ ಮಮತೆಯೂ ಮನಸ್ಸು ಕರಗಿಸುವಂತಿದೆ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ