ಆ್ಯಪ್ನಗರ

ಇದು ಏಲಿಯನ್ಸಾ? : ಒಂದು ವಿಡಿಯೋ ಹುಟ್ಟುಹಾಕಿದೆ ಚರ್ಚೆ! : ಅಸಲಿ ಕತೆ ಬೇರೆಯದ್ದೇ ಇದೆ!

ಅನ್ಯಗ್ರಹ ಜೀವಿಗಳ ಚರ್ಚೆ ನಮ್ಮಲ್ಲಿ ಆಗೊಮ್ಮೆ ಈಗೊಮ್ಮೆ ನಡೆಯುತ್ತಲೇ ಇರುತ್ತದೆ. ಹಲವು ಅಂತೆ ಕಂತೆಗಳ ನಡುವೆ ಏಲಿಯನ್ಸ್‌ಗಳ ಸುದ್ದಿಗೆ ರೆಕ್ಕೆ ಪುಕ್ಕ ಬರುತ್ತವೆ. ಈಗ ಆಗುತ್ತಿರುವುದು ಕೂಡಾ ಅದೇ...!

Vijaya Karnataka Web 16 Nov 2019, 5:03 pm
ಅನ್ಯಗ್ರಹದಲ್ಲಿ ಜೀವಿಗಳಿದ್ದಾರಾ...? ಹೀಗೊಂದು ಚರ್ಚೆ ನಡೆಯುತ್ತಲೇ ಇದೆ. ಇದರ ನಡುವೆ, ಅನ್ಯಗ್ರಹ ಜೀವಿಗಳನ್ನು ಜನರು ನೋಡಿದ್ದಾರಂತೆ ಎಂಬ ಅಂತೆ ಕಂತೆಗಳ ಸುದ್ದಿಗಳು ಆಗೊಮ್ಮೆ ಈಗೊಮ್ಮೆ ನಮ್ಮ ಕಿವಿಗೆ ಬಂದು ಬೀಳುತ್ತವೆ. ದೆವ್ವ, ಏಲಿಯನ್ಸ್‌ಗಳ ವಿಚಾರದಲ್ಲಿ ಕೆಲವೊಮ್ಮೆ ಇಂಟರ್ನೆಟ್‌ನಲ್ಲೂ ಚರ್ಚೆ ನಡೆಯುತ್ತಲೇ ಇರುತ್ತವೆ. ಸದ್ಯ ಇಂತಹದ್ದೇ ಮತ್ತೊಂದು ಸುದ್ದಿಗೆ ಜೀವ ಸಿಕ್ಕಿದೆ. ಒಂದು ವಿಡಿಯೋದಲ್ಲಿ ಸೆರೆಯಾದ `ಆಕೃತಿ'ಯನ್ನು ಕಂಡು ಇದು ಏಲಿಯನ್ಸಾ...? ದೆವ್ವನಾ...? ಎಂದು ಒಂದಷ್ಟು ಜನ ಪ್ರಶ್ನಿಸುತ್ತಿದ್ದಾರೆ.
Vijaya Karnataka Web barn owls
ವೈರಲ್ ಆಗುತ್ತಿರುವ ವಿಡಿಯೋ | Image Courtesy: Daniel Holland/twitter


Also Read : ಕಾಳ್ಗಿಚ್ಚಿನ ರುದ್ರನರ್ತನ : ಮೂಕ ಪ್ರಾಣಿಗಳ ರೋದನ... : ಇದು ಕರುಳು ಹಿಂಡುವ ದೃಶ್ಯ

ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸೀಲಿಂಗ್ ರಂಧ್ರದೊಳಗೆ ಎರಡು `ವಿಚಿತ್ರ' ಆಕೃತಿ ಕುಳಿತಿರುವಂತೆ ಕಾಣುತ್ತವೆ. ಹೀಗಾಗಿ, ಇದು ಏಲಿಯನ್ಸ್‌ಗಳಾ ಎಂದು ಕೆಲವರು ಪ್ರಶ್ನಿಸಲು ಆರಂಭಿಸಿದ್ದಾರೆ. ಇದಕ್ಕೆ ಉತ್ತರವಾಗಿ ಟ್ವಿಟ್ಟರ್ ಬಳಕೆದಾರ ಡೇನಿಯಲ್ ಹಾಲೆಂಡ್ ಎಂಬವರು ಈ ವಿಡಿಯೋವನ್ನು ಶೇರ್ ಮಾಡಿ ಇದು ಏಲಿಯನ್ಸ್ ಅಲ್ಲ, ಗೂಬೆ ಮರಿಗಳು ಎಂದು ಸ್ಪಷ್ಟಪಡಿಸಿದ್ದಾರೆ.

Also Read : ಸರ್ಫಿಂಗ್ ವೇಳೆ ಕಾಣಿಸಿಕೊಂಡ ತಿಮಿಂಗಿಲ...!

ಈ ಪಾಪದ ಎರಡು ಜೀವಗಳನ್ನು ಸೂಕ್ಷ್ಮವಾಗಿ ನೋಡಿದಾಗ ಇದು ಏಲಿಯನ್ಸ್‌ ಅಥವಾ ದೆವ್ವಗಳು ಅಲ್ಲ ಪುಟಾಣಿ ಗೂಬೆಗಳು ಎಂದು ಸ್ವಷ್ಟವಾಗಿ ಗೊತ್ತಾಗುತ್ತದೆ. ಆದರೆ, ಈ ಚರ್ಚೆಯ ನಡುವೆಯೇ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದುವರೆಗೆ ಸುಮಾರು 90 ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ. ಜೊತೆಗೆ, ಒಂದಷ್ಟು ಜನ ಬಗೆಬಗೆ ಕಮೆಂಟ್ ಕೂಡಾ ಮಾಡಿದ್ದಾರೆ.

Also Read : Door to Hell : 45 ವರ್ಷದಿಂದ ಭಯಾನಕ ಬೆಂಕಿಯುಗುಳುತ್ತಿದೆ ಭೂಮಿ...! : ಕಾರಣ ಏನು ಗೊತ್ತಾ...?

ಹಾಗಂತ, ಇದು ಈಗಿನ ವಿಡಿಯೋ ಅಲ್ಲ. 2017ರಲ್ಲೂ ಇದೇ ವಿಡಿಯೋ ವೈರಲ್ ಆಗಿತ್ತು. ಆಂಧ್ರಪ್ರದೇಶದ ವಿಶಾಖಪಟ್ಟಣಂನ ನಿರ್ಮಾಣ ಹಂತದ ಕಟ್ಟಡದಲ್ಲಿ ಕ್ಯಾಮೆರಾಕ್ಕೆ ಕಾಣಸಿಕ್ಕ ದೃಶ್ಯವಿದು. ಹುಟ್ಟಿದ ಕೆಲದಿನಗಳಲ್ಲಿ ಸೆರೆಯಾದ ಗೂಬೆ ಮರಿಗಳು ಇವುಗಳು. ಮೈಯಲ್ಲಿ ಗರಿಗಳು ಬೆಳೆಯದೇ ಇದ್ದ ಕಾರಣ ಈ ಗೂಬೆ ಮರಿಗಳು ವಿಚಿತ್ರವಾಗಿ ಕಂಡಿದ್ದವು. ಪಶುವೈದ್ಯರಾದ ಡಾ ನರಸಿಂಹ ರೆಡ್ಡಿ ಅವರು ಹೇಳುವಂತೆ, `ತಾಯಿ ಆಹಾರ ತೆಗೆದುಕೊಂಡು ಮರಳಿ ಬರುವ ಹೊತ್ತಲ್ಲಿ ಈ ಮರಿಗಳು ಹೀಗೆ ನಿಂತುಕೊಳ್ಳುತ್ತವೆ ಅಥವಾ ಇದು ನಿರ್ಮಾಣ ಹಂತದ ಕಟ್ಟಡ ಆಗಿದ್ದರಿಂದ ಗೂಬೆಗಳಿಗೆ ಚರ್ಮದ ಇನ್ಫೆಕ್ಷನ್ ಆದ ಪರಿಣಾಮ ಅವುಗಳ ಗರಿಗಳು ಉದುರಿ ಹೋಗಿರುವ ಸಾಧ್ಯತೆಯೂ ಇದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ