ಆ್ಯಪ್ನಗರ

ವಿಮಾನದೊಳಗೆ ನುಗ್ಗಿದ್ದರು ಭಯೋತ್ಪಾದಕರು...! : ಮುಂದೇನಾಯ್ತು ಗೊತ್ತಾ...?

ವಿಮಾನದ ಇಬ್ಬರು ಸಿಬ್ಬಂದಿ ಆತಂಕದಿಂದ ಕುಳಿತಿದ್ದಾರೆ. ಒಬ್ಬ ಗನ್ ಹಿಡಿದುಕೊಂಡು ಅಬ್ಬರಿಸುತ್ತಿದ್ದಾನೆ. ಚರ್ಚೆಗೆ ಕಾರಣವಾಗಿದೆ ವೈರಲ್ ವಿಡಿಯೋ.

Vijaya Karnataka Web 22 Oct 2019, 1:00 pm
ಯಾವುದೋ ದೇಶದಲ್ಲಿ ವಿಮಾನ ಅಪಹರಣವಾಯಿತು ಎಂದು ಟಿವಿಯಲ್ಲಿ ನ್ಯೂಸ್ ನೋಡಿದರೆ ಸಾಕು ಎಲ್ಲರಲ್ಲೂ ಭಯ, ಆತಂಕ ಎದುರಾಗುತ್ತದೆ. ತಕ್ಷಣ ಎಲ್ಲರೂ ಭಯೋತ್ಪಾದಕರ ವಿರುದ್ಧ ಹಿಡಿಶಾಪ ಹಾಕುತ್ತಾರೆ. ಅಂತಹದ್ರಲ್ಲಿ ಸದ್ಯ ಇಂಟರ್ನೆಟ್‌ನಲ್ಲಿ `ವಿಮಾನ ಅಪಹರಣ'ದ ವಿಡಿಯೋವೊಂದು ಹರಿದಾಡುತ್ತಿದೆ. ಹಲವರು ಬೇರೆ ಬೇರೆ ಕಡೆಗಳ ಹೆಸರು ಹಾಕಿ ವಿಡಿಯೋವನ್ನು ಪೋಸ್ಟ್ ಮಾಡುತ್ತಿರುವುದರಿಂದ ಎಲ್ಲರಲ್ಲೂ ಈ ವಿಡಿಯೋ ಎಲ್ಲಿನದ್ದು ಎಂಬ ಗೊಂದಲ, ಆತಂಕ ಮೂಡಿಸಿತ್ತು.
Vijaya Karnataka Web Plane hijack drill
ವೈರಲ್ ವಿಡಿಯೋದ ದೃಶ್ಯ


Also Read : ಅಯ್ಯೋ...! ಬ್ರಿಡ್ಜ್‌ ಕೆಳಗೆ ಸಿಕ್ಕಾಕಿಕೊಂಡ ವಿಮಾನ...!

ಶಸ್ತ್ರಧಾರಿಗಳು ವಿಮಾನದೊಳಗೆ ಬಂದು ಅಬ್ಬರಿಸುತ್ತಿದ್ದು, ವಿಮಾನ ಸಿಬ್ಬಂದಿ ಕೂಡಾ ಆತಂಕದಿಂದ ಕುಳಿತ ಸನ್ನಿವೇಶ ಈ ವಿಡಿಯೋದಲ್ಲಿದೆ. ಹೀಗಾಗಿ, ಸಹಜವಾಗಿಯೇ ಈ ವಿಡಿಯೋ ಆತಂಕಕ್ಕೆ ಕಾರಣವಾಗಿತ್ತು.

ಕೊನೆಗೂ ಬಯಲಾಯಿತು ರಹಸ್ಯ...!

ಎಲ್ಲರೂ ಇದು ವಿಮಾನ ಅಪಹರಣ ಯತ್ನ ಎಂದೇ ಭೀತಿಗೊಂಡಿದ್ದರು. ಆದರೆ, ಕೊನೆಗೆ ಗೊತ್ತಾಗಿದ್ದು ಇದು ಪ್ಲೈನ್ ಹೈಜಾಕ್ ಅಲ್ಲ ಎಂಬ ಸತ್ಯ. ಅಸಲಿಗೆ ಇದು ಮೆಕ್ಸಿಕನ್ ಕಂಪನಿಯೊಂದು ಇಂಟರ್ಜೆಟ್ ತರಬೇತಿ ಅವಧಿಯಲ್ಲಿ ಸೆರೆ ಹಿಡಿದ ಅಣಕು ಪ್ರದರ್ಶನದ ದೃಶ್ಯ...!

Also Read : ಇದ್ದಕ್ಕಿದ್ದಂತೆ ಮರಕ್ಕೆ ಬಿತ್ತು ಬೆಂಕಿ...! : ಇಲ್ಲಿದೆ ವಿಡಿಯೋ...!

ಭಯೋತ್ಪಾದರಂತೆ ಬಂದ ಶಸ್ತ್ರಧಾರಿಗಳು ಗನ್ ಹಿಡಿದು ವಿಮಾನದಲ್ಲಿದ್ದ ಇತರರನ್ನು ಬೆದರಿಸುವ ದೃಶ್ಯ ಇಲ್ಲಿದೆ. ಈ ನಡುವೆ, ಇದು ಅಣಕು ಪ್ರದರ್ಶನ ಎಂದು ಗೊತ್ತಿಲ್ಲದೆ ಹಲವರು ಮೆಕ್ಸಿಕೋದಲ್ಲಿ ವಿಮಾನ ಅಪಹರಣವಾಗಿದೆ ಎಂದೇ ಟ್ವಿಟ್ಟರಿನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದರು.

Also Read : ಇದಪ್ಪಾ ಭಯ ಎಂದರೆ...! : ನಿಮಗೇನನಿಸುತ್ತದೆ...?

ಅಕ್ಟೋಬರ್ 18ರಿಂದ ಈ ವಿಡಿಯೋ ಟ್ವಿಟ್ಟರಿನಲ್ಲಿ ಸಖತ್ ಆಗಿಯೇ ಹರಿದಾಡುತ್ತಿದೆ. ಅದೆಷ್ಟೋ ಜನ ಈ ವಿಡಿಯೋವನ್ನು ನೋಡಿದ್ದು, ಬಗೆಬಗೆ ಕಮೆಂಟ್ಸ್ ಹಾಕುತ್ತಿದ್ದಾರೆ. ಇದು ಅಣಕು ಪ್ರದರ್ಶನವೆಂದು ಗೊತ್ತಿಲ್ಲದೆ ಅದೆಷ್ಟೋ ಜನ ವಿಮಾನದಲ್ಲಿದ್ದ ಪ್ರಯಾಣಿಕರ ಸುರಕ್ಷತೆಗೆ ಪ್ರಾರ್ಥಿಸಿದ್ದರು. ಕೆಲವರು ಈ ವಿಡಿಯೋದ ಬಗ್ಗೆ ಆಗಲೇ ಅನುಮಾನ ವ್ಯಕ್ತಪಡಿಸಿದ್ದರು.


ಕಳೆದ ತಿಂಗಳೂ ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು ಎಂದೂ ಹೇಳಲಾಗುತ್ತಿದೆ. ಹೀಗೆ, ಚರ್ಚೆ, ಪ್ರಾರ್ಥನೆ ನಡೆದ ಬಳಿಕ ನೆಟ್ಟಿಗರಿಗೆ ಇದು ಅಣಕು ಪ್ರದರ್ಶನವೆಂಬ ಸತ್ಯ ಗೊತ್ತಾಗಿತ್ತು. ಈ ಸತ್ಯ ಗೊತ್ತಾಗುತ್ತಿದ್ದಂತೆಯೇ ಎಲ್ಲರೂ ಆಕ್ರೋಶಗೊಂಡಿದ್ದರು. ಇಂತಹ ಸೂಕ್ಷ್ಮ ಸನ್ನಿವೇಶವಿರುವ ವಿಡಿಯೋವನ್ನು ಇಂಟರ್ನೆಟ್‌ನಲ್ಲಿ ಅಪ್ಲೋಡ್ ಮಾಡುವಾಗ ಎಚ್ಚರಿಕೆ ಇರಬೇಕು ಎಂದೂ ನೆಟ್ಟಿಗರು ಕಿವಿಮಾತು ಹೇಳಿದ್ದಾರೆ.

ಇದು ಅಣಕು ಪ್ರದರ್ಶನ ಎಂಬ ಸತ್ಯ ಗೊತ್ತಾಗುತ್ತಿದ್ದಂತೆಯೇ ಎಲ್ಲರೂ ಕೋಪಗೊಂಡಿದ್ದರೂ ಮನಸ್ಸಿನ ಒಂದು ಮೂಲೆಯಲ್ಲಿ ಸಮಾಧಾನ ಮನೆ ಮಾಡಿತ್ತು. ವಿಮಾನ ಅಪಹರಣದಂತಹ ಘೋರ ದುರಂತ ಎಲ್ಲೂ ನಡೆಯದೇ ಇರಲ್ಲಪ್ಪಾ ಎಂದು ಮನಸ್ಸು ಹಾರೈಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ