ಆ್ಯಪ್ನಗರ

ಹುಲಿಯಿಂದ ಮರಿಯನ್ನು ರಕ್ಷಿಸುವ ಆನೆಗಳ ಟೀಮ್ : ಕಾಡಿನ ಅದ್ಭುತ ಕ್ಷಣವಿದು

ಆನೆಗಳ ತಂಡವೊಂದು ಹುಲಿಯನ್ನೇ ಎದುರಿಸುವ ಅದ್ಭುತ ದೃಶ್ಯವೊಂದು ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಗಜಪಡೆಯ `ಭದ್ರತೆ'ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Vijaya Karnataka Web 28 Nov 2020, 3:06 pm
ಆನೆಗಳು ಬುದ್ಧಿವಂತ ಪ್ರಾಣಿಗಳು. ತಮ್ಮ ಬಳಗದೊಂದಿಗೇ ಇರುವ ಆನೆಗಳು ಸಮಸ್ಯೆ ಎದುರಾದಾಗ ತಕ್ಷಣ ಪರಸ್ಪರ ಸ್ಪಂದಿಸುತ್ತವೆ. ಅದರಲ್ಲೂ ತಮ್ಮ ತಂಡದಲ್ಲಿ ಮರಿಯಾನೆಗಳು ಇದ್ದರಂತೂ ಆನೆಗಳು ಇನ್ನಷ್ಟು ಜಾಗರೂಕತೆಯಿಂದ ಇರುತ್ತವೆ. ಮರಿಯಾನೆಗಳನ್ನು ತಮ್ಮ ಗುಂಪಿನ ನಡುವಿನಲ್ಲಿ ನಿಲ್ಲಿಸಿ ಈ ಗಜ ಪಡೆ ಹೆಜ್ಜೆ ಇಡುತ್ತವೆ. ಈ ರಕ್ಷಣಾ `ಬೇಲಿ'ಯನ್ನು ಬಲಶಾಲಿ ಹುಲಿ, ಸಿಂಹಗಳಿಗೂ ಭೇದಿಸಲು ಸಾಧ್ಯವಾಗುವುದೇ ಇಲ್ಲ. ಅದಕ್ಕೆ ಸಾಕ್ಷಿ ಇಲ್ಲಿದೆ.
Vijaya Karnataka Web Image by Barbara Fraatz from Pixabay
| Representative image | Image by Barbara Fraatz from Pixabay


Also Read : ಐಪ್ಯಾಡ್, ಸ್ನ್ಯಾಕ್ಸ್‌ನೊಂದಿಗೆ `ರಹಸ್ಯ ತಾಣ'ದಲ್ಲಿ ಕುಳಿತಿದ್ದ 2 ವರ್ಷದ ಮಗನನ್ನು ಕಂಡುಹಿಡಿದ ತಾಯಿ!

ಆನೆಗಳ ತಂಡ ಬಲಶಾಲಿ ಹುಲಿಯಿಂದ ಮರಿಯಾನೆಯನ್ನು ಹೇಗೆ ರಕ್ಷಿಸುತ್ತದೆ ಎಂಬುದನ್ನು ತೋರಿಸುವ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ. ಆನೆಗಳ ಈ ಒಗ್ಗಟ್ಟು ಮತ್ತು ಧೈರ್ಯಕ್ಕೆ ನೆಟ್ಟಿಗರು ಫುಲ್ ಮಾರ್ಕ್ಸ್‌ ಕೊಟ್ಟಿದ್ದಾರೆ.

Also Read : ನಿಂತಿದ್ದ ಕಾರು ನೋಡ ನೋಡುತ್ತಿದ್ದಂತೆಯೇ ಬೃಹತ್ ಗುಂಡಿಯೊಳಗೆ ಬಿದ್ದಿತ್ತು...!

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ @susantananda3 ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಆನೆಗಳ ತಂಡ ಮರಿಯಾನೆಯೊಂದಿಗೆ ಎಚ್ಚರಿಕೆಯಿಂದ ಕಾಡಿನಲ್ಲಿ ಸಾಗುತ್ತಿದ್ದಾಗ ಹುಲಿಯೊಂದು ದಾಳಿಗೆ ಹೊಂಚು ಹಾಕಿ ಬರುವ ದೃಶ್ಯವಿದು. ಹುಲಿಯ ಇರುವಿಕೆಯನ್ನು ಗಮನಿಸಿದ ಬಳಿಕ ಆನೆಗಳು ಇನ್ನಷ್ಟು ಎಚ್ಚರಿಕೆಯಿಂದ ಮುಂದೆ ಸಾಗುತ್ತಿದ್ದವು. ಆದರೆ, ಹುಲಿಯ ಗಮನ ಮಾತ್ರ ಆನೆಗಳ ತಂಡದ ಮಧ್ಯದಲ್ಲಿದ್ದ ಮರಿಯಾನೆಯ ಮೇಲೆಯೇ ಇತ್ತು. ಹೀಗಾಗಿ, ಇದು ಆನೆಗಳನ್ನು ಹಿಂಬಾಲಿಸಿಕೊಂಡೇ ಬರುತ್ತಿತ್ತು. ಆದರೆ, ಬಹುತೇಕ ಎಚ್ಚರಿಕೆ ಮತ್ತು ಶಾಂತವಾಗಿಯೇ ಇದ್ದ ಆನೆಗಳು ಒಂದು ಹಂತದಲ್ಲಿ ಹುಲಿ ಮೇಲೆ ತಿರುಗಿ ಬಿದ್ದಿತ್ತು. ಆಗ ಹುಲಿಯ ಎದೆಯಲ್ಲಿಯೇ ನಡುಕ ಉಂಟಾಗಿ ಅದು ಹಿಂದೆ ಸರಿದಿತ್ತು. ಮತ್ತೊಮ್ಮೆ ಹುಲಿ ಆನೆಗಳ ಹಿಂಡನ್ನು ಹಿಂಬಾಲಿಸುವ ಪ್ರಯತ್ನ ಮಾಡಿದಾಗ ಆನೆಯೊಂದು ಕೊಟ್ಟ ಹೊಡೆತಕ್ಕೆ ಹುಲಿ ಸಂಪೂರ್ಣ ಹಿಮ್ಮೆಟ್ಟಿತ್ತು...


Also Read : `ನನ್ನನ್ನು ದೇವರು ಈಗಲೂ ಇಷ್ಟಪಡುತ್ತೀರಾ?' : ಕಣ್ಣೀರು ತರಿಸುವಂತಿದೆ ಸಾಂತಾಗೆ ಸಲಿಂಗಿ ಬಾಲಕ ಬರೆದ ಪತ್ರ

ನಿರೀಕ್ಷೆಯಂತೆಯೇ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಆದಿತ್ಯ ಪಾಂಡ ಅವರು ಸೆರೆ ಹಿಡಿದ ದೃಶ್ಯ ಇದು ಎಂದು ಸುಸಂತ ನಂದ ಅವರು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ದೃಶ್ಯ ಕಂಡ ನೆಟ್ಟಿಗರು ಆನೆಗಳ ಶಾಂತಚಿತ್ತತೆ ಮತ್ತು ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿದ ಪರಿಯನ್ನು ಕೊಂಡಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ