ಆ್ಯಪ್ನಗರ

ಮಧುರ ಹಾಡಿನ ಮೂಲಕ ಗಮನ ಸೆಳೆದ ಪ್ರತಿಭಾವಂತರು : ಸುಶ್ರಾವ್ಯ ಕಂಠಕ್ಕೆ ಖ್ಯಾತನಾಮರು ಫಿದಾ

ಎಲ್ಲರನ್ನೂ ಸೆಳೆದ ಅದ್ಭುತ ಹಾಡಿದು. ಬಾಲಿವುಡ್‌ನ ಈ ಸುಂದರ ಹಾಡಿನ ಮೂಲಕ ಈ ಇಬ್ಬರು ಗಾಯಕರು ಈಗ ಹೊಸ ಅಲೆ ಸೃಷ್ಟಿಸಿದ್ದಾರೆ.

Vijaya Karnataka Web 16 Jan 2021, 1:01 pm
ಗಾಯನ ಕೌಶಲ್ಯದ ಮೂಲಕವೇ ಗಮನ ಸೆಳೆದ ಪ್ರತಿಭಾವಂತರು... ಅದ್ಭುತ ಹಾಡಿಗೆ ಫಿದಾ ಆದ ನೆಟ್ಟಿಗರು... ಸೂಪರ್ ಹಿಟ್ ಬಾರ್ಡರ್ ಚಿತ್ರದ ಹಾಡಿನ ಮೂಲಕ ಎಲ್ಲರನ್ನೂ ಸೆಳೆದ ಗಾಯಕರು...
Vijaya Karnataka Web Image by agnessatalalaev0 from Pixabay
| Representative image | Image by agnessatalalaev0 from Pixabay


ಬಾಲಿವುಡ್‌ನ ಬಾರ್ಡರ್ ಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ...? ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ನಿರ್ಮಿಸಿದ್ದ ಸಿನೆಮಾ ಇದು. ಸೈನಿಕರ ತ್ಯಾಗ, ದೇಶಭಕ್ತಿಯನ್ನು ಸಾರುವ ಈ ಚಿತ್ರಕ್ಕೆ ಮನಸೋಲದವರೇ ಇಲ್ಲ. 1997ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರ ಅಪೂರ್ವ ಕಥಾ ಹಂದರದ ಜೊತೆಗೆ ಎವರ್‌ಗ್ರೀನ್ ಹಾಡುಗಳ ಮೂಲಕವೂ ಗಮನ ಸೆಳೆದಿತ್ತು. ಇದೀಗ ಇದೇ ಚಿತ್ರದ ಅದ್ಭುತ ಹಾಡಿನೊಂದಿಗೆ ಇಬ್ಬರು ಗಾಯಕರು ಸೋಶಿಯಲ್ ಮೀಡಿಯಾದಲ್ಲಿ ಕ್ರೇಜ್ ಸೃಷ್ಟಿಸಿದ್ದಾರೆ.

Also Read : ನೀರು ಕುಡಿಯುತ್ತಿದ್ದ ಆನೆ ಮೇಲೆ ಕ್ಷಣಾರ್ಧದಲ್ಲಿ ಮೊಸಳೆಯ ದಾಳಿ...! : ಭಯಾನಕ ವಿಡಿಯೋ ವೈರಲ್

ಇಬ್ಬರು ಪ್ರತಿಭಾವಂತ ಗಾಯಕರು ಈ ಚಿತ್ರದ `ಸಂದೇಸೆ ಆ ಥೇ ಹೇ' ಹಾಡನ್ನು ತಮ್ಮ ಸುಮಧುರ ಕಂಠದಲ್ಲಿ ಹಾಡಿ ಎಲ್ಲರ ಮನಗೆದ್ದಿದ್ದಾರೆ. @bhaiyyajispeaks ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ. `ಮೇರಾ ಭಾರತ್' ಎಂದು ಕ್ಯಾಪ್ಶನ್ ಬರೆದು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಪರ್ವತಗಳ ಪ್ರದೇಶದಲ್ಲಿ ಗಿಟಾರ್ ಹಿಡಿದು ಈ ಯುವಕ ಮೈಮರೆತು ಈ ಹಾಡನ್ನು ಹಾಡಿದ್ದಾರೆ. ಸ್ವಲ್ಪ ಸಮಯದಲ್ಲಿ ಗಾಯಕಿಯೊಬ್ಬರು ಕೂಡಾ ಸೇರಿಕೊಳ್ಳುತ್ತಾರೆ. ನಂತರ ಈ ಇಬ್ಬರು ತಮ್ಮ ಗಾಯನ ಕೌಶಲ್ಯದಿಂದಲೇ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತಾರೆ.


Also Read : ಇಂಜೆಕ್ಷನ್ ನೀಡುವಾಗ ಭಯದಲ್ಲಿ ಕಿರುಚಾಡುವ ಯುವಕ! : ತಮಾಷೆಯ ವಿಡಿಯೋ ವೈರಲ್


ಇದೇ ವಿಡಿಯೋವನ್ನು ಬಾಲಿವುಡ್ ನಟ ರವೀನಾ ಟಂಡನ್ ಕೂಡಾ ಇಷ್ಟಪಟ್ಟಿದ್ದು, ಇವರೂ ಈ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಸೇನೆಯ ವೀರಯೋಧರ ನಿಸ್ವಾರ್ಥ ಸೇವೆ ಮತ್ತು ಶೌರ್ಯವನ್ನು ಗೌರವಿಸುವ ಸಲುವಾಗಿ ಪ್ರತಿವರ್ಷ ಜನವರಿ 15ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.


Also Read : ಪಿಜ್ಜಾವನ್ನು ನಲ್ಲಿ ನೀರಿನಲ್ಲಿ ಅದ್ದಿ ತಣ್ಣಗೆ ಮಾಡಿ ತಿಂದ ವ್ಯಕ್ತಿ!: ವಿಲಕ್ಷಣ ವಿಡಿಯೋ ವೈರಲ್

ಸದ್ಯ ಈ ವಿಡಿಯೋ ನೆಟ್ಟಿಗರನ್ನು ಬಹುವಾಗಿ ಸೆಳೆದಿದೆ. ಸಾವಿರಾರು ವೀಕ್ಷಣೆ, ಮೆಚ್ಚುಗೆ ಪ್ರತಿಕ್ರಿಯೆ ಗಳಿಸುವಲ್ಲಿ ಈ ಇಬ್ಬರು ಗಾಯಕರು ಯಶಸ್ವಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ