ಆ್ಯಪ್ನಗರ

ಜ್ಞಾನದ ಬೆಳಕು ಚೆಲ್ಲಿದ ಗುರುದೇವ : ಜೀವನ ಮೌಲ್ಯ ಕಲಿಸಿದ ಠಾಗೋರರಿಗೆ ನಮನ

ಭಾರತದ ಹೆಮ್ಮೆಯ ಪುತ್ರ ರವೀಂದ್ರನಾಥ ಠಾಗೋರ್ ಅವರ ಜನ್ಮದಿನವಿಂದು. ರಾಷ್ಟ್ರಗೀತೆಯನ್ನು ನಮಗೆ ನೀಡಿದ ಈ ಮಹಾನ್ ತತ್ವಜ್ಞಾನಿಯ ಒಂದೊಂದು ಬರಹದಲ್ಲೂ ಜೀವನ ಮೌಲ್ಯವಡಗಿದೆ.

Vijaya Karnataka Web 7 May 2020, 11:07 am
ಜನಗಣ ಮನ ಅಧಿನಾಯಕ ಜಯ ಹೇ... ಈ ಸಾಲಿನ ಒಂದೊಂದು ಪದದಲ್ಲಿದೆ ರಾಷ್ಟ್ರಪ್ರೇಮ, ಸಮಬಾಳ್ವೆಯ ಸತ್ವ. ಇಂತಹ ಅದ್ಭುತ ಗೀತೆಯನ್ನು ನೀಡಿದವರು ಭಾರತದ ಹೆಮ್ಮೆಯ ಪುತ್ರ, ನೊಬೆಲ್ ಪುರಸ್ಕೃತ ಸಾಹಿತಿ ರವೀಂದ್ರನಾಥ್ ಠಾಗೋರ್. ಶಾಂತಿನಿಕೇತನದ ಈ ರೂವಾರಿ ತಮ್ಮ ಬರಹಗಳ ಮೂಲಕವೇ ಜೀವನ ಮೌಲ್ಯವನ್ನು ಸಾರಿದ್ದರು. ಜ್ಞಾನದ ಬೆಳಕನ್ನು ಹರಿಸಿದ್ದರು. ಬದುಕಿಗೊಂದು ಸನ್ಮಾರ್ಗವನ್ನು ತೋರಿಸಿದ್ದರು.
Vijaya Karnataka Web Rabindranath Tagore in 1909
| Image Credit : wikipedia


| Image Credit : wikipedia


ಇಂತಹ ಮಹಾನ್ ತತ್ವಜ್ಞಾನಿಯ ಜನ್ಮದಿನ ಇಂದು. 1861ರ ಮೇ 7ರಂದು ಕೊಲ್ಕತ್ತಾದ ಜೊರಸಂಕೊ ಭವನದಲ್ಲಿ ರವೀಂದ್ರನಾಥ್ ಠಾಗೋರರು ಜನಿಸಿದರು. ಇವರ ತಂದೆ ದೇವೇಂದ್ರನಾಥ ಠಾಗೋರ್‌, ತಾಯಿ ಶಾರದಾದೇವಿ. ದೇಶ ಕಂಡ ಅಪ್ರತಿಮ ಮಹಾವಿದ್ವಾಂಸರಲ್ಲಿ ಠಾಗೋರರೂ ಪ್ರಮುಖರು. ತಮ್ಮ ಆದರ್ಶಪೂರ್ಣ ಬದುಕಿನಿಂದಲೇ ಠಾಗೋರರು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆದಿದ್ದಾರೆ.

ರವೀಂದ್ರನಾಥ್ ಠಾಗೋರರ ಸಂದೇಶಗಳು

* ಸಂತೋಷವಾಗಿರುವುದು ತುಂಬಾ ಸರಳ. ಆದರೆ, ಸರಳವಾಗಿರುವುದು ಮಾತ್ರ ತುಂಬಾ ಕಷ್ಟ

* ನಿಮ್ಮ ಬದುಕಿನಿಂದ ಸೂರ್ಯ ಹೊರಟು ಹೋದನೆಂದು ನೀವು ಅಳುತ್ತಿದ್ದರೆ, ನಿಮ್ಮ ಕಣ್ಣೀರು ನಿಮ್ಮನ್ನು ನಕ್ಷತ್ರಗಳನ್ನು ನೋಡದಂತೆ ತಡೆಯುತ್ತದೆ.

* ಮೋಡಗಳು ಬಂದು ನನ್ನ ಜೀವನದಲ್ಲಿ ತೇಲುತ್ತದೆ. ಹಾಗಂತ, ಮಳೆ ಅಥವಾ ಚಂಡಮಾರುತವನ್ನು ತರಲು ಅಲ್ಲ, ಬದಲಾಗಿ, ನನ್ನ ಸೂರ್ಯಾಸ್ತದ ಬಾನಿಗೆ ಬಣ್ಣ ತುಂಬಲು...

* ಜಗತ್ತನ್ನು ನಾವು ತಪ್ಪಾಗಿ ಓದುತ್ತೇವೆ ಮತ್ತು ಅದು ನಮ್ಮನ್ನು ಮೋಸಗೊಳಿಸುತ್ತಿದೆ ಎಂದು ಹೇಳುತ್ತೇವೆ

ಹೀಗೆ ತಮ್ಮ ಒಂದೊಂದು ಬರಹಗಳ ಮೂಲಕವೂ ಜೀವನ ಮೌಲ್ಯವನ್ನು ಕಟ್ಟಿಕೊಟ್ಟಿದ್ದರು ರವೀಂದ್ರನಾಥ್ ಠಾಗೋರರು. ಇವರ ವಿಚಾರಧಾರೆಗಳು ಇಂದಿಗೂ ಎಲ್ಲರಿಗೂ ಸ್ಫೂರ್ತಿ. ತಮ್ಮ ಆಳವಾದ ಜ್ಞಾನದ ಮೂಲಕ ಅರಿವಿನ ಕಣ್ಣು ತೆರೆಸಿದ ಈ ಗುರುದೇವ, ರಾಷ್ಟ್ರಪ್ರೇಮವನ್ನೂ ಸಾರಿದ್ದರು. ಗಾಂಧೀಜಿ ಅವರೊಂದಿಗೆ ಅಹಿಂಸಾ ಹೋರಾಟದಲ್ಲೂ ಇವರು ಭಾಗಿಯಾಗಿ, ಸ್ವಾತಂತ್ರ್ಯ ಚಳವಳಿಯಲ್ಲೂ ಸಕ್ರಿಯರಾಗಿದ್ದರು. ಇದಲ್ಲದೆ, ಸಮಾಜದಲ್ಲಿನ ಅನಿಷ್ಟ ಪದ್ಧತಿಗಳ ವಿರುದ್ಧವೂ ಠಾಗೋರರು ಹೋರಾಟ ನಡೆಸಿದ್ದರು. ಧ್ಯೇಯಪರ ಶಿಕ್ಷಣಕ್ಕೆಂದು ಶಾಂತಿನಿಕೇತನವನ್ನು ಆರಂಭಿಸಿ ಎಲ್ಲರ ಜ್ಞಾನದಾಹವನ್ನೂ ತೀರಿಸಿದ್ದರು ನಮ್ಮ ಠಾಗೋರರು. ಇಂತಹ ಮಹಾನ್ ತತ್ವಜ್ಞಾನಿಗೆ ನಮ್ಮ ನಮನ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ