ಆ್ಯಪ್ನಗರ

ಕದ್ದ ಕಾರಿನೊಳಗೆ ಮಗುವನ್ನು ಕಂಡ ಕಳ್ಳ! : ಆ ನಂತರದೆಲ್ಲಾ ಅಚ್ಚರಿಯ ಘಟನೆ!

ಆ ಮಹಿಳೆ ಮಗುವನ್ನು ಕಾರಿನಲ್ಲಿ ಕುಳ್ಳಿರಿಸಿ ಲಾಕ್ ಮಾಡದೆ ಅಗತ್ಯ ವಸ್ತುಗಳ ಖರೀದಿಗೆಂದು ಮಳಿಗೆಯೊಳಗೆ ಹೋಗಿದ್ದರು. ಈ ವೇಳೆ, ಆ ಕಳ್ಳ ಕಾರು ಕದ್ದಿದ್ದ...!

Vijaya Karnataka Web 19 Jan 2021, 5:09 pm
ಆತ ಕಾರು ಕಳ್ಳ... ಆದರೆ, ಕಳ್ಳನಾದರೂ ಅವನೊಳಗೊಬ್ಬ `ಒಳ್ಳೆಯ' ಮನುಷ್ಯನಿದ್ದ. ಹೀಗಾಗಿಯೇ, ಆ ಮಹಿಳೆ ತನ್ನ ಮಗುವನ್ನು ಮತ್ತೆ ನೋಡುವಂತಾಗಿದೆ...!
Vijaya Karnataka Web Image by Andrew Martin from Pixabay
| Representative image | Image by Andrew Martin from Pixabay


ಇದು ಅಮೇರಿಕಾದ ಒರೆಗಾನ್‌ನಲ್ಲಿ ನಡೆದ ಘಟನೆ. ಕಾರು ಕದ್ದ ಕಳ್ಳನೊಬ್ಬ ಮಗುವನ್ನು ಕಂಡು ಮತ್ತೆ ಕಾರನ್ನು ಕದ್ದ ಜಾಗಕ್ಕೇ ತಂದು ನಿಲ್ಲಿಸಿದ್ದ. ಜೊತೆಗೆ, ಮಹಿಳೆಗೆ ಸರಿಯಾಗಿ ಬೈದು ಬುದ್ಧಿ ಹೇಳಿದ್ದ...!

Also Read : ಯುವತಿಯ ಸಂಗೀತದ ಮಾಧುರ್ಯ ಸವಿಯುತ್ತಲೇ ನಿದ್ರಿಸುವ ಹಸು: ಮನಸೆಳೆಯುವ ಅಪೂರ್ವ ದೃಶ್ಯವಿದು

ಪೋರ್ಟ್‌ಲ್ಯಾಂಡ್‌ ಉಪನಗರದ ಬೀವರ್ಟನ್‌ನ ಮಳಿಗೆಯೊಂದರ ಹೊರಗಡೆ ನಡೆದ ಘಟನೆ ಇದು. ಆ ತಾಯಿ ತನ್ನ ನಾಲ್ಕು ವರ್ಷದ ಮಗುವನ್ನು ಕಾರಿನಲ್ಲಿಯೇ ಕುಳ್ಳಿರಿಸಿ ಹಾಲು ಮತ್ತು ಮಾಂಸ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ಮಳಿಗೆಯೊಳಗೆ ಹೋಗಿದ್ದರು. ಆದರೆ, ಹೀಗೆ ಹೋಗುವಾಗ ಈಕೆ ಕಾರಿನ ಲಾಕ್ ಹಾಕಿರಲಿಲ್ಲ.

Also Read : ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಕ್ಯೂಆರ್ ಕೋಡ್ ಪ್ರಿಂಟ್ ಮಾಡಿಸಿದ ಮಧುರೈನ ಜೋಡಿ...!

ಇತ್ತ, ಕಾರು ಕದಿಯಲು ಹೊಂಚು ಹಾಕುತ್ತಿದ್ದ ಕಳ್ಳನೊಬ್ಬ ಮಹಿಳೆಯ ಕಾರನ್ನು ಕದ್ದು ಪರಾರಿಯಾಗಿದ್ದ. ಹೀಗೆ ಕಾರು ಕದ್ದು ಈತ ಸ್ವಲ್ಪ ದೂರವಷ್ಟೇ ಹೋಗಿದ್ದ. ಅಷ್ಟರಲ್ಲಿ ಹಿಂಬದಿ ಸೀಟ್‌ನಲ್ಲಿ ಈತ ಮಗುವನ್ನು ಕಂಡಿದ್ದ. ಈ ಮಗುವನ್ನು ನೋಡಿದ ತಕ್ಷಣ ಈ ಕಳ್ಳನೊಳಗಿನ `ಹೃದಯವಂತ' ಜಾಗೃತನಾದ. ಹೀಗಾಗಿ, ಹೋದಷ್ಟೇ ವೇಗದಲ್ಲಿ ವಾಪಸ್ ಬಂದ ಕಳ್ಳ ಕಾರನ್ನು ಕದ್ದ ಮಳಿಗೆಯ ಎದುರು ತಂದು ನಿಲ್ಲಿಸಿದ್ದ.

Also Read : ಸಫಾರಿ ವಾಹನವನ್ನೇ ಹಿಂದಕ್ಕೆ ಎಳೆಯಲು ಯತ್ನಿಸಿದ ಹುಲಿ! : ರಾಜ್ಯದಲ್ಲಿ ಸೆರೆಯಾದ ದೃಶ್ಯ ವೈರಲ್

ಅಷ್ಟರಲ್ಲಿ ಈ ಮಹಿಳೆ ಕೂಡಾ ಹೊರಗೆ ಬಂದು ತನ್ನ ಕಾರು ಕಾಣುತ್ತಿಲ್ಲ ಎಂದು ಚಡಪಡಿಸುತ್ತಿದ್ದರು. ಈಕೆಯನ್ನು ಕಂಡು ಕಾರಿನಲ್ಲಿದ್ದ ಮಗುವನ್ನು ಹಿಡಿದುಕೊಳ್ಳುವಂತೆ ಹೇಳಿ ಆಕೆಯ ನಿರ್ಲಕ್ಷ್ಯದ ಬಗ್ಗೆ ಕಿಡಿಕಾರಿದ್ದ. ಜೊತೆಗೆ, ಪೊಲೀಸರನ್ನು ಕರೆಸುವುದಾಗಿಯೂ ಹೆದರಿಸಿದ್ದನಂತೆ. ಮಗುವನ್ನು ಮತ್ತೆ ತಾಯಿಗೆ ಮರಳಿಸುವ ಮುನ್ನ ಈತ ಆ ತಾಯಿಗೆ ಶಾಂತವಾಗಿ ಒಂದಷ್ಟು ಬುದ್ಧಿವಾದವನ್ನೂ ಹೇಳಿದ್ದ. ಆದರೆ, ಹೀಗೆ ಬುದ್ಧಿವಾದ ಹೇಳಿದರೂ ಈತ ಕಾರನ್ನು ಹಿಡಿದುಕೊಂಡು ಮತ್ತೆ ಪರಾರಿಯಾಗಿದ್ದ ಎಂದು ಬೀವರ್ಟನ್ ಪೊಲೀಸ್ ಇಲಾಖೆಯ ಅಧಿಕಾರಿ ಮ್ಯಾಟ್ ಹೆಂಡರ್ಸನ್ ಹೇಳಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ