ಆ್ಯಪ್ನಗರ

ವಿಶ್ವದ ಉದ್ಧಾರಕ್ಕಾಗಿ ಜನ್ಮತಳೆದ ಭಗವಂತ : ಎಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳು...

ಸರಳ ತತ್ವದ ಮೂಲಕ ಜೀವನ ಮೌಲ್ಯ ಸಾರಿದ ಶಾಂತಿದೂತ ಅವರು... ಸ್ನೇಹ, ಸಹಬಾಳ್ವೆಯೇ ಬದುಕಿನ ಉಸಿರು ಎಂದು ದಾರಿ ತೋರಿದ ದೇವರು ಅವರು... ಏಸುಕ್ರಿಸ್ತರ ಸಂದೇಶ ಅಳವಡಿಸಿಕೊಂಡರೆ ಜೀವನವೇ ನಂದನವನ...

Vijaya Karnataka Web 24 Dec 2020, 11:49 am
ಎಲ್ಲರಿಗೂ ಒಳಿತನ್ನು ಬಯಸು... ಶತ್ರುಗಳನ್ನು ಕ್ಷಮಿಸು... ಎಲ್ಲರನ್ನೂ ಪ್ರೀತಿಸು... ಇದು ಶಾಂತಿದೂತ ಏಸುಕ್ರಿಸ್ತರು ವಿಶ್ವಕ್ಕೆ ಸಾರಿದ ಸಂದೇಶ. ನೋಡಲು ಸರಳ ಎಂದೆನಿಸಬಹುದು, ಆದರೆ, ಈ ಸಾಲುಗಳ ಆಂತರ್ಯದಲ್ಲಿರುವ ಮೌಲ್ಯದ ವ್ಯಾಪ್ತಿ ಆಗಸಕ್ಕಿಂತಲೂ ಎತ್ತರ, ಭೂಮಿಗಿಂತಲೂ ಆಳ... ಇದೇ ಸಂದೇಶ ಮನುಷ್ಯನ ಬದುಕಿಗೆ ದಾರಿ ದೀಪ... ಈ ಸಂದೇಶವನ್ನು ಪ್ರತಿಯೊಬ್ಬ ಮನುಷ್ಯನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜ ಖಂಡಿತಾ ನಳನಳಿಸುವ ಉದ್ಯಾನವನವಾಗುತ್ತದೆ...
Vijaya Karnataka Web christmas wishes /pixabay





ಯಾವುದೇ ಜಾತಿ, ಮತ ಪಂಥದ ಭೇದವಿಲ್ಲದೆ ಕ್ರಿಸ್ತಜಯಂತಿ ಅಥವಾ ಕ್ರಿಸ್ಮಸ್ ಹಬ್ಬವನ್ನು ಎಲ್ಲರೂ ಆಚರಿಸುತ್ತಾರೆ. ಜಗತ್ತಿನ ಉದ್ಧಾರಕ್ಕೆ, ಮನುಷ್ಯರಿಗೆ ಮಾನವೀಯತೆಯ ಹಾದಿಯಲ್ಲಿ ಜೀವಿಸಲು ಪ್ರೇರಣೆ ನೀಡಲು ಸರ್ವಶಕ್ತನಾದ ಭಗವಂತ ಸಾಮಾನ್ಯ ಮಾನವನಾಗಿ ದನದ ಕೊಟ್ಟಿಗೆಯಲ್ಲಿ ಜನ್ಮ ತಳೆದರು. ಇದೇ ಮಹಾರಹಸ್ಯದ ಆಚರಣೆಯೇ ಕ್ರಿಸ್ಮಸ್.







ಜಗತ್ತಿನ ಒಳಿತಿಗಾಗಿಯೇ ಜನ್ಮತಳೆದ ಶಾಂತಿದೂತನ ಜನ್ಮದಿನದ ಹಬ್ಬವಾದ ಕ್ರಿಸ್ಮಸ್ ಸಂಭ್ರಮ ಮತ್ತೆ ಬಂದಿದೆ. ವಿಶ್ವದಾದ್ಯಂತ ಈ ಹಬ್ಬ ಸಂಭ್ರಮ ತಂದಿದೆ. ಜಗತ್ತಿನಾದ್ಯಂತ ಇರುವ ಪವಿತ್ರ ಚರ್ಚ್‌ಗಳು ಸಿಂಗಾರಗೊಂಡಿವೆ. ಕ್ರೈಸ್ತ ಧರ್ಮೀಯರ ಮನೆ ಎದುರು ಕ್ರಿಸ್ತನ ಹುಟ್ಟಿನ ಸಂದೇಶ ಸಾರುವ ನಕ್ಷತ್ರದ ದ್ಯೋತಕವಾಗಿ ಬಗೆಬಗೆ ಬಣ್ಣದ ನಕ್ಷತ್ರಗಳು ತೂಗುತ್ತಿವೆ. ಮನೆ ಮನಗಳಲ್ಲಿ ಸಡಗರ ತುಂಬಿದೆ.


ಕ್ರಿಸ್ಮಸ್ ಶುಭಾಶಯಗಳು...

ವಿಶ್ವಕ್ಕೆ ಶಾಂತಿ, ಸಹಬಾಳ್ವೆಯ ಮೌಲ್ಯಗಳನ್ನು ಸಾರಿದ ಏಸುಕ್ರಿಸ್ತರ ಜನ್ಮದಿನದ ಶುಭಾಶಯಗಳು

ಶಾಂತಿದೂತ ಏಸುಕ್ರಿಸ್ತರು ಜನಿಸಿದ ಶುಭದಿನ ಎಲ್ಲರಿಗೂ ಒಳಿತನ್ನೇ ತರಲಿ. ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು

ಕ್ಷಮೆ, ಪ್ರೀತಿ, ಸಹನೆ, ಸಹಬಾಳ್ವೆಯೇ ಜೀವನದ ಉಸಿರು ಎಂಬ ಸಂದೇಶ ನೀಡಿರುವ ಏಸುಕ್ರಿಸ್ತರ ಜನ್ಮದಿನದ ಶುಭ ಹಾರೈಕೆಗಳು

ಕ್ರಿಸ್ಮಸ್ ಹಬ್ಬದ ಈ ಶುಭ ಸಂದರ್ಭದಲ್ಲಿ ವಿಶ್ವದಲ್ಲಿ ಶಾಂತಿ ನೆಲೆಯಾಗಲಿ. ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು

ಬಾಳಿನ ಜ್ಯೋತಿ, ಬದುಕಿನ ದಾರಿ ಏಸುಕ್ರಿಸ್ತರ ಜನ್ಮ ದಿನಾಚರಣೆಯ ಶುಭಾಶಯಗಳು...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ