ಆ್ಯಪ್ನಗರ

Constitution Day 2021: ಭಾರತದ ಪಾಲಿನ ಮಹತ್ವದ ದಿನ : ಇಲ್ಲಿದೆ ಸಂವಿಧಾನ ಶಿಲ್ಪಿಯ ಅದ್ಭುತ ಮಾತುಗಳು

ನವೆಂಬರ್ 26, ಭಾರತದ ಪಾಲಿನ ಮಹತ್ವದ ದಿನ. ನವ ಭಾರತಕ್ಕೊಂದು ಬಲ ತಂದ ದಿನ ಇದು. ಇಂತಹ ಮಹತ್ವ ದಿನಕ್ಕಾಗಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರಮುಖ ಸಂದೇಶಗಳು ಇಲ್ಲಿವೆ.

Vijaya Karnataka Web 25 Nov 2021, 4:24 pm
ನವೆಂಬರ್ 26. ಪ್ರತಿಯೊಬ್ಬ ಭಾರತೀಯರ ಪಾಲಿಗೂ ಅತ್ಯಂತ ಮಹತ್ವದ ದಿನ. ಪವಿತ್ರ ಸಂವಿಧಾನದ ಮೂಲಕ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದ ದಿನವಿದು. ಪ್ರತಿಯೊಬ್ಬ ಭಾರತೀಯರ ಶಕ್ತಿಯಾದ, ಎಲ್ಲರ ಪಾಲಿಗೂ ಪವಿತ್ರ ಗ್ರಂಥವಾದ ನಮ್ಮ ಸಂವಿಧಾನವನ್ನು 1949ರ ನವೆಂಬರ್ 26ರಂದು ಅಂಗೀಕರಿಸಲಾಗಿತ್ತು. ಹೀಗಾಗಿ, ಈ ದಿನವನ್ನು ದೇಶಾದ್ಯಂತ ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ.
Vijaya Karnataka Web Constitution_of_India
| Image Credit : wikipedia


ಡಾ. ಬಿ.ಆರ್‌.ಅಂಬೇಡ್ಕರ್‌ ನೇತೃತ್ವದ ಸಂವಿಧಾನ ಕರಡು ರಚನಾ ಸಮಿತಿಯ 2 ವರ್ಷ 11 ತಿಂಗಳ ಕಾಲ ಸತತ ಅಧ್ಯಯನ, ಪರಿಶ್ರಮದ ಫಲವೇ ನಮ್ಮ ಬಲಶಾಲಿ ಸಂವಿಧಾನ. 1949ರ ನವೆಂಬರ್ 26ರಂದು ಎಲ್ಲಾ ಸಂಸತ್ ಸದಸ್ಯರು ಸರ್ವಾನುಮತದಿಂದ ಭಾರತದ ಸಂವಿಧಾನವನ್ನು ಅಂಗೀಕರಿಸಿದರು. ಬಳಿಕ 1950ರ ಜನವರಿ 26 ರಂದು ನಮ್ಮ ಸಂವಿಧಾನವನ್ನು ಅನುಷ್ಠಾನಕ್ಕೆ ತರಲಾಗಿತ್ತು.

ಸಂವಿಧಾನ ಭಾರತದ ದೊಡ್ಡ ಬಲ. ಈ ಮಹಾನ್ ಗ್ರಂಥ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆಯೊದಗಿದೆ. ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ಇದರ ದ್ಯೋತಕವಾಗಿಯೇ ಸಂವಿಧಾನ ದಿನವನ್ನೂ ಆಚರಿಸಲಾಗುತ್ತಿದೆ. ಇದು ನಮ್ಮೆಲರ ಪಾಲಿನ ಹೆಮ್ಮೆಯ ದಿನ ಕೂಡಾ ಹೌದು. ಇಂತಹ ಮಹತ್ವದ ದಿನದಂದು ನಮ್ಮ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಸ್ಫೂರ್ತಿದಾಯಕ ಮಾತುಗಳು ಇಲ್ಲಿವೆ.

| Image Credit :

wikipedia" />
ಅಂಬೇಡ್ಕರ್ ಅವರ ಸಂದೇಶಗಳು

* ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಅನುಷ್ಠಾನಕ್ಕೆ ತರುವವರು ಒಳ್ಳೆಯವರಲ್ಲದಿದ್ದರೆ ಪ್ರಬಲ ಸಂವಿಧಾನವೂ ದುರ್ಬಲ ಎನಿಸಿಕೊಳ್ಳುತ್ತದೆ. ಸಂವಿಧಾನವನ್ನು ಜಾರಿಗೆ ತರುವವರು ಉತ್ತಮರಾಗಿದ್ದರೆ ದುರ್ಬಲ ಸಂವಿಧಾನವೂ ಒಳ್ಳೆಯ ಸಂವಿಧಾನ ಎನಿಸಿಕೊಳ್ಳುತ್ತದೆ.

* ಸಮುದಾಯದ ಪ್ರಗತಿಯನ್ನು ನಾನು ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ಅಳೆಯುತ್ತೇನೆ

* ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು

* ಎಲ್ಲಿಯ ತನಕ ನೀವು ಸಾಮಾಜಿಕ ಸ್ವಾತಂತ್ರ್ಯವನ್ನು ಸಾಧಿಸುವುದಿಲ್ಲವೋ, ಅಲ್ಲಿಯ ತನಕ ಕಾನೂನು ಒದಗಿಸುವ ಯಾವುದೇ ಸ್ವಾತಂತ್ರ್ಯವನ್ನು ಪಡೆದರೂ ಅದರ ಪ್ರಯೋಜನ ಬರುವುದಿಲ್ಲ

* ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸುವ ಧರ್ಮವನ್ನು ನಾನು ಇಷ್ಟಪಡುತ್ತೇನೆ

* ಕಾನೂನು ಮತ್ತು ಸುವ್ಯವಸ್ಥೆ ರಾಜಕೀಯ ದೇಹಕ್ಕೆ ಔಷಧಿ ಇದ್ದಂತೆ. ರಾಜಕೀಯ ದೇಹ ಅನಾರೋಗ್ಯಕ್ಕೊಳಗಾದರೆ ಖಂಡಿತವಾಗಿಯೂ ಔಷಧಿ ನೀಡಬೇಕಾಗುತ್ತದೆ

* ನಾವು ಮೊದಲನೆಯದಾಗಿ ಮತ್ತು ಕೊನೆಯದಾಗಿ ಭಾರತೀಯರೇ ಆಗಿದ್ದೇವೆ

* ಒಬ್ಬ ಮಹಾನ್ ವ್ಯಕ್ತಿ ಒಬ್ಬ ಪ್ರಸಿದ್ಧ ವ್ಯಕ್ತಿಯಿಂದ ಭಿನ್ನವಾಗಿರುತ್ತಾನೆ. ಯಾಕೆಂದರೆ, ಅವನು ಸಮಾಜದ ಸೇವಕನಾಗಲು ಸಿದ್ಧನಾಗಿರುತ್ತಾನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ