ಆ್ಯಪ್ನಗರ

ಪೈರು ನಾಟಿಗೆ ಅದೆಂಥಾ ಐಡಿಯಾ : ಅನ್ನದಾತನ ಉಪಾಯಕ್ಕೆ ನೆಟ್ಟಿಗರು ಫಿದಾ

ಪೈರು ನಾಟಿ ಮಾಡುವುದಕ್ಕೆ ಅನ್ನದಾತರು ಅದ್ಭುತ ಉಪಾಯ ಮಾಡಿರುವ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Vijaya Karnataka Web 19 Sep 2020, 11:01 am
ಕೃಷಿ ಎಂಬುದು ಅತ್ಯಂತ ಖುಷಿ ಕೊಡುವ ಕೆಲಸ. ಮಣ್ಣಿನ ಜೊತೆಗಿನ ಬದುಕು ಅದು ನಿಜಕ್ಕೂ ಅಪ್ಯಾಯಮಾನ. ಹಣ ಗಳಿಕೆಯ ವಿಷಯದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಇರಬಹುದು. ಆದರೆ, ಈ ಕೃಷಿಯಿಂದ ನೆಮ್ಮದಿಯಂತೂ ಖಂಡಿತಾ ಸಿಗುತ್ತದೆ. ಭೂತಾಯಿಯ ಮಡಿಲಿನಲ್ಲಿ ಸಲ್ಲಿಸುವ ಈ ಕೃಷಿ ಕೈಂಕರ್ಯ ದೇಶವನ್ನೇ ಕಟ್ಟುತ್ತದೆ. ರೈತರೇ ದೇಶದ ಬೆನ್ನೆಲುಬು ಎಂಬ ಮಾತು ಹಳೆಯದ್ದೇ ಇರಬಹುದು. ಆದರೆ, ಅದರ ಸತ್ವ ಸದಾ ನವನವೀನ. ನಿಜವಾಗಿಯೂ ರೈತರೇ ದೇಶದ ಆಸ್ತಿ. ರೈತರಿಂದಾಗಿಯೇ ನಾವು ಊಟ ಮಾಡುತ್ತಿರುವುದು.
Vijaya Karnataka Web Farmers
| Screengrab from video | Courtesy : @ArshadWarsi/Twitter


ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ಜಮೀನಿನಲ್ಲಿ ದುಡಿದರೆ ಜೀವನಕ್ಕೇನು ತೊಂದರೆಯಾಗದು. ಹೊಟ್ಟೆಗೇನು ಕಷ್ಟವಾಗದು. ಹೀಗಾಗಿ, ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನವರು ಇಷ್ಟಪಡುತ್ತಾರೆ. ಅದೂ ಅಲ್ಲದೆ, ಈ ಕೆಲಸವೂ ಮನಸ್ಸಿಗೆ ಖುಷಿ ನೀಡುತ್ತದೆ.

Also Read : 32 ವರ್ಷವಾದರೂ 14 ವರ್ಷದ ಬಾಲಕನಂತೆ ಕಾಣುವ ಯುವಕ...!

ಯಾವುದೇ ಉದ್ಯೋಗದಲ್ಲಿ ಮೇಲು ಕೀಳೆಂಬುದು ಇಲ್ಲ. ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಮತ್ತು ಇಷ್ಟಪಟ್ಟು ಮಾಡಬೇಕು. ಇಷ್ಟವಿಲ್ಲದೆ ಮಾಡಿದ ಯಾವ ಕೆಲಸವೂ ಫಲಕೊಡಲು. ಇಷ್ಟಪಟ್ಟು ಪ್ರಾಮಾಣಿಕವಾಗಿ ದುಡಿದರೆ ಖಂಡಿತಾ ಮಾನಸಿಕ ನೆಮ್ಮದಿ ಮತ್ತು ಯಶಸ್ಸು ಸಿಗುತ್ತದೆ. ಜೊತೆಗೆ, ಕೆಲಸ ಮೇಲೆ ಪ್ರೀತಿ ಇದ್ದಾಗ ಕಷ್ಟದಲ್ಲಿಯೂ ಹೊಸ ಹೊಸ ಆಲೋಚನೆಗಳು ಬರುತ್ತವೆ. ಮನಸ್ಸು ಕ್ರಿಯಾಶೀಲವಾಗಿ ಯೋಚಿಸಲು ಆರಂಭಿಸುತ್ತದೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ. ಸದ್ಯ ಈ ವಿಡಿಯೋ ಎಲ್ಲರಿಗೂ ಸಖತ್ ಇಷ್ಟವಾಗಿದೆ.

Also Read : ಒಂದು ಕಾಲು ಇಲ್ಲದಿದ್ದರೂ ಬತ್ತದ ಉತ್ಸಾಹ : ಎಲ್ಲರಿಗೂ ಮಾದರಿ ಹೊಲದ ಶ್ರಮದಿಂದ ದುಡಿಯುವ ಈ ಅನ್ನದಾತ

ಬಾಲಿವುಡ್ ನಟ ಅರ್ಷದ್ ವಾರ್ಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಇದು. ಈ ವಿಡಿಯೋದಲ್ಲಿ ಕೆಸರು ಗದ್ದೆಯಲ್ಲಿ ವ್ಯಕ್ತಿಯೊಬ್ಬರನ್ನು ಇಬ್ಬರು ಎಳೆಯುತ್ತಾ ಮುಂದೆ ಸಾಗುತ್ತಿದ್ದಾರೆ. ಇತ್ತ, ಇಬ್ಬರಿಂದ ಎಳೆಯಲ್ವಡುವ ವ್ಯಕ್ತಿ ಅದೇ ವೇಗದಲ್ಲಿ ಪೈರುಗಳನ್ನು ನೆಡುತ್ತಾ ಬರುತ್ತಿದ್ದಾರೆ.


Also Read : ಚೀತಾಗಳಿಂದ ಮರಿಯನ್ನು ರಕ್ಷಿಸಿದ ತಾಯಿ ಜಿರಾಫೆ : ಮಾತೃಮಮತೆಯ ಈ ವಿಡಿಯೋಗೆ ನೆಟ್ಟಿಗರು ಫಿದಾ

ಅಂದರೆ, ತಾವು ಮಾಡುವ ಕೆಲಸದ ಮೇಲೆ ಶೃದ್ಧೆ, ಪ್ರೀತಿ ಇದ್ದಾಗ ಮಾತ್ರ ಈ ರೀತಿ ಖುಷಿಯಿಂದ ಕೆಲಸ ಮಾಡಲು ಸಾಧ್ಯ ಎಂಬುದು ಸ್ಪಷ್ಟ. ಇದೇ ಕಾರಣಕ್ಕೆ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಇದು ಕಷ್ಟಕರ ಕೆಲಸ. ಆದರೂ ಈ ನವೀನ ಪ್ರಯತ್ನಕ್ಕೆ ಎಲ್ಲರೂ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ರೈತರಿಗೆ ಸರಿಯಾದ ರೀತಿಯಲ್ಲಿ ನೆರವು ಸಿಗಬೇಕು ಎಂದು ಹಾರೈಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ