ಆ್ಯಪ್ನಗರ

ಸ್ಮರಿಸೋಣ ಕೆಚ್ಚೆದೆಯ ಸ್ವಾತಂತ್ರ್ಯ ವೀರರ ಬಲಿದಾನದ ಕತೆಯನ್ನು...

ಕೆಚ್ಚೆದೆಯ ಸ್ವಾತಂತ್ರ್ಯ ವೀರರಾದ ಭಗತ್ ಸಿಂಗ್, ಸುಖ್‌ದೇವ್ ಮತ್ತು ರಾಜ್‌ಗುರು ಅವರು ಹುತಾತ್ಮರಾದ ದಿನವಿಂದು. ಬ್ರಿಟಿಷರ ವಿರುದ್ಧ ಸಿಂಹಧ್ವನಿ ಮೊಳಗಿಸಿದ್ದ ವೀರರ ಕತೆ ಎಂದೆಂದಿಗೂ ಅಜರಾಮರ...

Vijaya Karnataka Web 23 Mar 2020, 12:21 pm
ಮಾರ್ಚ್ 23... ಭಾರತದ ಪಾಲಿನ ಅತ್ಯಂತ ನೋವಿನ ದಿನ. ಯಾಕೆಂದರೆ, ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖ್‌ದೇವ್ ಮತ್ತು ರಾಜ್‌ಗುರು ಹುತಾತ್ಮರಾದ ದಿನವಿಂದು. ಹೀಗಾಗಿ, ಈ ದಿನವನ್ನು ಹುತಾತ್ಮ ದಿನ, ಬಲಿದಾನ ದಿನ ಅಥವಾ ಶಹೀದ್ ದಿವಸ್ ಎಂದು ಆಚರಿಸಲಾಗುತ್ತದೆ.
Vijaya Karnataka Web 800px-Bhagat_Singh_1929
| Image Credit : wikipedia


ಅದು ಬ್ರಿಟಿಷ್ ಆಡಳಿತದ ವಿರುದ್ಧ ಭಾರತದಲ್ಲಿ ಹೋರಾಟ ತೀವ್ರಗೊಂಡಿದ್ದ ಸಂದರ್ಭ. ಎಲ್ಲರೂ ಭಾರತ ಮಾತೆಯನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲು ಪಣತೊಟ್ಟಿದ್ದರು. ಅದರಲ್ಲಿ ಭಗತ್ ಸಿಂಗ್, ಸುಖ್‌ದೇವ್ ಮತ್ತು ರಾಜ್‌ಗುರು ಅವರೂ ಮುಂಚೂಣಿಯಲ್ಲಿದ್ದರು. ಬ್ರಿಟಿಷ್ ಆಡಳಿತಕ್ಕೇ ಇವರು ಬಿಸಿಮುಟ್ಟಿಸಿದ್ದರು. ಹೀಗಾಗಿ, 1931ರ ಮಾರ್ಚ್ 23ರಂದು ಲಾಹೋರ್‌ನ ಸೆಂಟ್ರಲ್ ಜೈಲಿನಲ್ಲಿ ಈ ಮೂವರನ್ನು ಗಲ್ಲಿಗೇರಿಸಲಾಗಿತ್ತು. ಆಗ ಭಗತ್‌ ಸಿಂಗ್ ವಯಸ್ಸು ಬರೀ 23...!

ಇಂದಿಗೂ ಭಾರತ ಈ ಹೆಮ್ಮೆಯ ಪುತ್ರರನ್ನು ಸ್ಮರಿಸುತ್ತದೆ. ಇವರ ತ್ಯಾಗ, ಬಲಿದಾನದ ಗುಣಗಾನ ಮಾಡಲಾಗುತ್ತದೆ.

ಭಗತ್ ಸಿಂಗ್ ಪ್ರಖರ ಚಿಂತನೆಗಳು...

* ಅವರು ನನ್ನನ್ನು ಕೊಲ್ಲಬಹುದು. ಆದರೆ, ನನ್ನ ಚಿಂತನೆಗಳನ್ನು ಕೊಲ್ಲಲು ಸಾಧ್ಯವಿಲ್ಲ

* ಕ್ರಾಂತಿಯ ಖಡ್ಗವು ಪ್ರಖರ ವಿಚಾರಧಾರೆಗಳಿಂದ ಹರಿತಗೊಂಡಿದೆ

* ವಿಮರ್ಶೆ ಮತ್ತು ಸ್ವತಂತ್ರ ಚಿಂತನೆಯು ಕ್ರಾಂತಿಕಾರಿಗಳಿಗೆ ಇರಬೇಕಾದ ಎರಡು ಅನಿವಾರ್ಯ ಗುಣಗಳಾಗಿವೆ

ಹೀಗೆ ತನ್ನ ಜೀವನವನ್ನೇ ಈ ದೇಶಕ್ಕೆ ಮುಡಿಪಾಗಿಟ್ಟವರು ಈ ಮೂವರು. ಚಿಕ್ಕವಯಸ್ಸಿನಲ್ಲೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದ ಇವರು ದೇಶ ದಾಸ್ಯದ ಸಂಕೋಲೆಯಿಂದ ಬಂಧ ಮುಕ್ತವಾಗಬೇಕೆಂದು ಪಣತೊಟ್ಟಿದ್ದರು. ತಮ್ಮ ಸ್ವಂತ ಜೀವನವನ್ನು ಮರೆತು ಅನುಕ್ಷಣವೂ ಇವರು ದೇಶದ ಒಳಿತಿಗಾಗಿಯೇ ಚಿಂತನೆ ನಡೆಸುತ್ತಿದ್ದರು. ಜನರಲ್ಲಿ ಸ್ವಾತಂತ್ರ್ಯದ ಚಿಂತನೆಯನ್ನು ಬಡಿದೆಬ್ಬಿಸುತ್ತಿದ್ದರು. ಬ್ರಿಟಿಷ್ ಆಡಳಿತವನ್ನೇ ಎದುರಿಸಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದ ಈ ಮೂವರ ಜೀವನ ನಿಜಕ್ಕೂ ಸ್ಫೂರ್ತಿ, ಆದರಣೀಯ, ಅನುಕರಣೀಯ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ