ಆ್ಯಪ್ನಗರ

ಎಲ್ಲಾ ಕಷ್ಟಗಳನ್ನೂ ದೂರ ಮಾಡಲಿ ನಾಗರಾಜ : ಸರ್ವರಿಗೂ ನಾಗರ ಪಂಚಮಿಯ ಶುಭಾಶಯಗಳು

ಹಿಂದೂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದಾದ ನಾಗರ ಪಂಚಮಿ ಬಂದಿದೆ. ಈ ಹಬ್ಬ ಸರ್ವರಿಗೂ ಶುಭವ ತರಲಿ. ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿಯನ್ನು ದೂರ ಮಾಡಲಿ...

Vijaya Karnataka Web 25 Jul 2020, 11:17 am
ನಾಗರ ಪಂಚಮಿ... ಹಿಂದೂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗರ ಪಂಚಮಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನ ಎಲ್ಲರೂ ಶೃದ್ಧಾ ಭಕ್ತಿಯಿಂದ ನಾಗರಾಜನಿಗೆ ಹಾಲೆರೆದು ನಮಿಸಿ ಕುಟುಂಬದ ಒಳಿತಿಗೆ, ಜಗತ್ತಿನ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುವಂತೆ ಪ್ರಾರ್ಥಿಸುತ್ತಾರೆ.
Vijaya Karnataka Web Nagara Panchami Wishes
ನಾಗ ದೇವರಿಗೆ ಭಕ್ತಿಯಿಂದ ಪೂಜೆ



ನಮ್ಮದು ಕೃಷಿ ಸಂಸ್ಕೃತಿಯ ನಾಡು. ಪ್ರಕೃತಿಯನ್ನು ಪೂಜಿಸುವವರು ನಾವು. ನಮಗೆ ಕೃಷಿಯೇ ಪ್ರಧಾನ. ನಮ್ಮಲ್ಲಿ ಪ್ರಕೃತಿಗೂ ದೇವರ ಸ್ಥಾನವಿದೆ. ನಾಗರ ಪಂಚಮಿ ಪ್ರಕೃತಿಯ ಆರಾಧನೆಯ ಭಾಗವೂ ಹೌದು. ಹೀಗಾಗಿ, ನಾಗರ ಹಾವಿಗೆ ನಮ್ಮಲ್ಲಿ ಭಾರೀ ಮಹತ್ವ ಹಾಗೂ ಅಷ್ಟೇ ಭಯ ಭಕ್ತಿ. ನಾಗ ದೇವರನ್ನು ಭಕ್ತಿಯಿಂದ ನಮಿಸಿದರೆ ಬದುಕಿನ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ, ಚರ್ಮ ರೋಗಾದಿಗಳು ಗುಣವಾಗುತ್ತದೆ, ಸಂತಾನ ಭಾಗ್ಯವಿಲ್ಲದ ಕೊರಗು ನೀಗುತ್ತದೆ ಎಂದೆಲ್ಲಾ ನಂಬಿಕೆಗಳಿಗೆ. ಹೀಗಾಗಿ, ಅನಾದಿಕಾಲದಿಂದಲೂ ನಮ್ಮಲ್ಲಿ ನಾಗ ದೇವರನ್ನು ಭಯ ಭಕ್ತಿಯಿಂದ ಪೂಜಿಸಿಕೊಂಡು ಬರಲಾಗುತ್ತಿದೆ. ಇಂತಹ ಮಹತ್ವದ ಹಬ್ಬ ಮತ್ತೆ ಬಂದಿದೆ. ಈ ಶುಭ ಸಂದರ್ಭದಲ್ಲಿ ನಿಮ್ಮ ಆಪ್ತರಿಗೆ, ಪ್ರೀತಿಪಾತ್ರರಿಗೆ ಕಳುಹಿಸಬೇಕಾದ ಶುಭ ಸಂದೇಶಗಳು ಇಲ್ಲಿವೆ.


ನಾಗರ ಪಂಚಮಿಯ ಶುಭಾಶಯಗಳು

* ನಿಮ್ಮ ಬದುಕಿನ ಎಲ್ಲಾ ಕಷ್ಟಗಳು ದೂರವಾಗಲಿ. ನಾಗದೇವರು ನಿಮ್ಮೆಲ್ಲಾ ಪ್ರಾರ್ಥನೆಗೆ ಅಸ್ತು ಎನ್ನಲಿ. ಎಲ್ಲರಿಗೂ ನಾಗರ ಪಂಚಮಿಯ ಶುಭಾಶಯಗಳು

* ನಾಗದೇವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಆಶೀರ್ವದಿಸಲಿ. ನಾಗನ ಕರುಣೆಯ ಕಿರಣದಲ್ಲಿ ನಿಮ್ಮ ಬದುಕಿನಲ್ಲಿ ಸಮೃದ್ಧಿಯ ಬೆಳಕು ಮೂಡಲಿ... ಸರ್ವರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು

* ಕರುಣಾನಿಧಿ ನಾಗ ನಿಮ್ಮ ಕನಸುಗಳನ್ನೆಲ್ಲಾ ನನಸು ಮಾಡಲಿ. ಕಷ್ಟಗಳನ್ನು ದೂರ ಮಾಡಲಿ. ಮನೆ, ಮನಗಳಲ್ಲಿ ಖುಷಿ ತುಂಬಲಿ. ಎಲ್ಲರಿಗೂ ನಾಗರ ಪಂಚಮಿಯ ಶುಭಾಶಯಗಳು

* ರೈತರಿಗೆ ಉತ್ತಮ ಫಸಲು ಸಿಗಲಿ, ಕೃಷಿಕರು ಎದುರಿಸುವ ಸಂಕಷ್ಟಗಳು ಪರಿಹಾರವಾಗಲಿ. ಸರ್ವರಿಗೂ ನಾಗರ ಪಂಚಮಿಯ ಶುಭಾಶಯಗಳು.

* ಪ್ರಕೃತಿಯನ್ನು, ಈ ಲೋಕದ ಸರ್ವ ಜೀವರಾಶಿಗಳನ್ನು ಗೌರವಿಸಬೇಕು ಎಂಬ ಪಾಠವನ್ನು ನಾಗರ ಪಂಚಮಿ ನಮಗೆ ಕಲಿಸುತ್ತದೆ. ಪ್ರಕೃತಿ ಇಲ್ಲದೆ ಏನೂ ಇಲ್ಲ. ಹೀಗಾಗಿ, ಪ್ರಕೃತಿಯನ್ನು ಆರಾಧಿಸುವ ಹಬ್ಬವೇ ನಾಗರ ಪಂಚಮಿ. ಈ ಹಬ್ಬ ಎಲ್ಲರಿಗೂ ಶುಭವ ತರಲಿ.

ಈ ಸಲ ಲೋಕವನ್ನು ಮಹಾಮಾರಿ ಕೊರೊನಾ ವೈರಸ್ ಕಾಡುತ್ತಿದೆ. ಇದು ನಮ್ಮ ನಾಗರ ಪಂಚಮಿ ಹಬ್ಬದ ಸಡಗರಕ್ಕೂ ಕೊಂಚ ಅಡ್ಡಿಯಾಗಿದೆ. ಈ ರಕ್ಕಸ ವೈರಸ್ ಕಾಟದಿಂದ ಬಹುತೇಕ ದೇಗುಲಗಳಲ್ಲಿ ಬಂದ್ ಆಗಿವೆ. ಹೀಗಾಗಿ, ಈ ಸಲ ಮನೆಯಲ್ಲಿಯೇ ದೇವರಿಗೆ ನಮಿಸಿ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಹಬ್ಬವನ್ನು ಆಚರಿಸಿ. ಈ ಎಲ್ಲಾ ಕಷ್ಟವನ್ನು ನಾಗ ದೇವರು ದೂರ ಮಾಡಲಿ. ಇಡೀ ಭೂಮಂಡಲಕ್ಕೆ ಸುಖವ ತರಲಿ. ಲೋಕದ ಕಲ್ಯಾಣಕ್ಕಾಗಿ ಎಲ್ಲರೂ ಭಕ್ತಿಯಿಂದ ದೇವರನ್ನು ಆರಾಧಿಸಿ ಮನೆ ಮಂದಿಯೊಂದಿಗೆ ಖುಷಿಯಿಂದ ಹಬ್ಬ ಆಚರಿಸಿ. ಎಲ್ಲರಿಗೂ ನಾಗರ ಪಂಚಮಿ ಒಳಿತು ಮಾಡಲಿ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ