ಆ ಶ್ವಾನ ಸಮಯಪ್ರಜ್ಞೆ ತೋರದೇ ಇರುತ್ತಿದ್ದರೆ ಇಂದು ಏನಾಗುತ್ತಿತ್ತೋ ಊಹಿಸಲು ಸಾಧ್ಯವಿಲ್ಲ. ಆದರೆ, ಸಕಾಲದಲ್ಲಿ ಈ ಮುದ್ದು ಶ್ವಾನ ಬುದ್ಧಿವಂತಿಕೆ ಪ್ರದರ್ಶಿಸಿದ್ದರಿಂದ ಇದರ ಮಾಲಿಕರು ಈಗ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ... ಶ್ವಾನಗಳು ಒಂದೊಂದು ಸಲ ತೋರಿಸುವ ಸಮಯಪ್ರಜ್ಞೆ, ಜಾಣತನ ನಿಜಕ್ಕೂ ಹೃದಯ ತುಂಬಿ ಬರುವಂತೆ ಮಾಡುತ್ತದೆ. ಜೊತೆಗೆ, ಇವುಗಳ ಸಮಯಪ್ರಜ್ಞೆಯಿಂದಲೇ ಮಾಲಿಕರ ಜೀವ ಉಳಿದ ಅದೆಷ್ಟೋ ಉದಾಹರಣೆಗಳಿವೆ. ನಿಯತ್ತಿಗೆ ಹೆಸರಾಗಿರುವ ಈ ಮುದ್ದು ಪ್ರಾಣಿಗಳು ಯಾವತ್ತೂ ತುತ್ತಿನ ಋಣವನ್ನು ಮರೆಯುವುದಿಲ್ಲ. ಮಾಲಿಕರನ್ನು ಉಳಿಸಲು ತನ್ನ ಜೀವವನ್ನೇ ಕೊಟ್ಟ ಅದೆಷ್ಟೋ ಶ್ವಾನಗಳಿವೆ. ಇಂತಹ ಕತೆಗಳು ನಮ್ಮನ್ನು ಭಾವುಕರನ್ನಾಗಿಸುತ್ತವೆ. ಇದು ಕೂಡಾ ಅಂತಹದ್ದೇ ಒಂದು ಘಟನೆ. ಈ ಕತೆಯನ್ನು ಕೇಳಿದಾಗಲೂ ಎದೆ ಭಾರವಾಗುತ್ತದೆ.
Also Read : ಒಬ್ಬಳಿಗೇ 3 ಬಾರಿ ವಿಚ್ಛೇದನ ನೀಡಿ 4ನೇ ಬಾರಿ ಆಕೆಯನ್ನೇ ಮದುವೆಯಾದ ಭೂಪ! : ಯಾಕೆ ಗೊತ್ತಾ?
ಕಾನ್ಸಾಸ್ ನಗರ ಪೊಲೀಸರು ಇತ್ತೀಚಿಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಒಂದು ಹೃದಯಸ್ಪರ್ಶಿ ಕತೆಯನ್ನು ಹಂಚಿಕೊಂಡಿದ್ದರು. ಈ ಕತೆಯನ್ನು ಕೇಳಿದಾಗ ನಿಜಕ್ಕೂ ಮೊಗದಲ್ಲೊಂದು ಖುಷಿಯ ನಗುವರಳುತ್ತದೆ. ಜೊತೆಗೆ, ಜಾಣ ಶ್ವಾನದ ಬಗೆಗಿನ ಅಭಿಮಾನವೂ ಇಮ್ಮಡಿಯಾಗುತ್ತದೆ. ಇದು ನಿಷ್ಠಾವಂತ ಮತ್ತು ಚುರುಕುಬುದ್ಧಿಯ ಶ್ವಾನ ತನ್ನ ಮಾಲಿಕರ ಜೀವ ಉಳಿಸಿದ ಕತೆ. ವಾಕಿಂಗ್ ಹೋಗಿದ್ದಾಗ ಕುಸಿದು ಬಿದ್ದ ಮಾಲಿಕರನ್ನು ಕಂಡು ವೈದ್ಯಕೀಯ ತುರ್ತು ಪರಿಸ್ಥಿತಿಯ ಬಗ್ಗೆ ಅರಿತುಕೊಂಡ ಈ ಶ್ವಾನ ಸಮಯೋಚಿತವಾಗಿ ನೆರೆಮನೆಯವರನ್ನು ಎಚ್ಚರಿಸಿದ ಕಾರಣದಿಂದ ಈ ವ್ಯಕ್ತಿ ಇದು ಬದುಕುಳಿದಿದ್ದಾರೆ.
Also Read : ಕ್ಯಾನ್ಸರ್ನಿಂದ ಬಳಲುತ್ತಿರುವ ಗೆಳೆಯನೊಂದಿಗೆ ತಾನೂ ಹೇರ್ಕಟ್ ಮಾಡಿ ಧೈರ್ಯ ತುಂಬಿದ ಹೃದಯವಂತ
ಎನ್ 10 ಮತ್ತು ಲಾರೆಲ್ ಅವೆನ್ಯೂ ಪ್ರದೇಶದಲ್ಲಿ ತಮ್ಮ ಶ್ವಾನದೊಂದಿಗೆ ಈ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಇದ್ದಕ್ಕಿದ್ದಂತೆ ಈ ವ್ಯಕ್ತಿ ಅಸ್ವಸ್ಥರಾಗಿದ್ದರು. ಈ ವೇಳೆ, ತುರ್ತು ವೈದ್ಯಕೀಯ ಅಗತ್ಯತೆಯನ್ನು ಮನಗಂಡ ಶ್ವಾನ ಓಡಿ ಹೋಗಿ ನೆರೆಮನೆಯವರನ್ನು ಎಚ್ಚರಿಸಿತ್ತು. ಶ್ವಾನದ ಆತಂಕವನ್ನು ಗಮನಿಸಿದ ಈ ನೆರೆಮನೆಯವರು ತಕ್ಷಣ 911ಗೆ ಕರೆ ಮಾಡಿ ಸಹಾಯಯಾಚಿಸಿದ್ದರು. ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿಗಳು ಈ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಜೊತೆಗೆ, ಸಮಯಪ್ರಜ್ಞೆ ತೋರಿದ ಶ್ವಾನಕ್ಕೂ ಆಹಾರ ನೀಡಿ ಖುಷಿ ವ್ಯಕ್ತಪಡಿಸಿದ್ದರು.
Also Read : ಕಾರಿನ ಬಾಗಿಲು ತೆರೆದು ತಿಂಡಿಗಾಗಿ ಹುಡುಕಾಡಿದ ಕರಡಿ! : ಮುಂದೇನಾಯ್ತು ಗೊತ್ತಾ?
ಏಪ್ರಿಲ್ 12ರಂದು ಪೊಲೀಸ್ ಇಲಾಖೆ ಈ ಪೋಸ್ಟನ್ನು ಹಂಚಿಕೊಂಡಿತ್ತು. ಇದೀಗ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಜೊತೆಗೆ, ಎಲ್ಲರೂ ಈ ಶ್ವಾನದ ಬುದ್ಧಿವಂತಿಕೆಯನ್ನು ಮನಸಾರೆ ಕೊಂಡಾಡುತ್ತಿದ್ದಾರೆ. ಅಲ್ಲದೆ, ಈ ಶ್ವಾನದ ಮಾಲಿಕರು ಶೀಘ್ರ ಆರೋಗ್ಯವಂತರಾಗಲಿ ಎಂದು ಹಾರೈಸಿದ್ದಾರೆ.
Also Read : ಒಬ್ಬಳಿಗೇ 3 ಬಾರಿ ವಿಚ್ಛೇದನ ನೀಡಿ 4ನೇ ಬಾರಿ ಆಕೆಯನ್ನೇ ಮದುವೆಯಾದ ಭೂಪ! : ಯಾಕೆ ಗೊತ್ತಾ?
ಕಾನ್ಸಾಸ್ ನಗರ ಪೊಲೀಸರು ಇತ್ತೀಚಿಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಒಂದು ಹೃದಯಸ್ಪರ್ಶಿ ಕತೆಯನ್ನು ಹಂಚಿಕೊಂಡಿದ್ದರು. ಈ ಕತೆಯನ್ನು ಕೇಳಿದಾಗ ನಿಜಕ್ಕೂ ಮೊಗದಲ್ಲೊಂದು ಖುಷಿಯ ನಗುವರಳುತ್ತದೆ. ಜೊತೆಗೆ, ಜಾಣ ಶ್ವಾನದ ಬಗೆಗಿನ ಅಭಿಮಾನವೂ ಇಮ್ಮಡಿಯಾಗುತ್ತದೆ. ಇದು ನಿಷ್ಠಾವಂತ ಮತ್ತು ಚುರುಕುಬುದ್ಧಿಯ ಶ್ವಾನ ತನ್ನ ಮಾಲಿಕರ ಜೀವ ಉಳಿಸಿದ ಕತೆ. ವಾಕಿಂಗ್ ಹೋಗಿದ್ದಾಗ ಕುಸಿದು ಬಿದ್ದ ಮಾಲಿಕರನ್ನು ಕಂಡು ವೈದ್ಯಕೀಯ ತುರ್ತು ಪರಿಸ್ಥಿತಿಯ ಬಗ್ಗೆ ಅರಿತುಕೊಂಡ ಈ ಶ್ವಾನ ಸಮಯೋಚಿತವಾಗಿ ನೆರೆಮನೆಯವರನ್ನು ಎಚ್ಚರಿಸಿದ ಕಾರಣದಿಂದ ಈ ವ್ಯಕ್ತಿ ಇದು ಬದುಕುಳಿದಿದ್ದಾರೆ.
Also Read : ಕ್ಯಾನ್ಸರ್ನಿಂದ ಬಳಲುತ್ತಿರುವ ಗೆಳೆಯನೊಂದಿಗೆ ತಾನೂ ಹೇರ್ಕಟ್ ಮಾಡಿ ಧೈರ್ಯ ತುಂಬಿದ ಹೃದಯವಂತ
ಎನ್ 10 ಮತ್ತು ಲಾರೆಲ್ ಅವೆನ್ಯೂ ಪ್ರದೇಶದಲ್ಲಿ ತಮ್ಮ ಶ್ವಾನದೊಂದಿಗೆ ಈ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಇದ್ದಕ್ಕಿದ್ದಂತೆ ಈ ವ್ಯಕ್ತಿ ಅಸ್ವಸ್ಥರಾಗಿದ್ದರು. ಈ ವೇಳೆ, ತುರ್ತು ವೈದ್ಯಕೀಯ ಅಗತ್ಯತೆಯನ್ನು ಮನಗಂಡ ಶ್ವಾನ ಓಡಿ ಹೋಗಿ ನೆರೆಮನೆಯವರನ್ನು ಎಚ್ಚರಿಸಿತ್ತು. ಶ್ವಾನದ ಆತಂಕವನ್ನು ಗಮನಿಸಿದ ಈ ನೆರೆಮನೆಯವರು ತಕ್ಷಣ 911ಗೆ ಕರೆ ಮಾಡಿ ಸಹಾಯಯಾಚಿಸಿದ್ದರು. ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿಗಳು ಈ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಜೊತೆಗೆ, ಸಮಯಪ್ರಜ್ಞೆ ತೋರಿದ ಶ್ವಾನಕ್ಕೂ ಆಹಾರ ನೀಡಿ ಖುಷಿ ವ್ಯಕ್ತಪಡಿಸಿದ್ದರು.
Also Read : ಕಾರಿನ ಬಾಗಿಲು ತೆರೆದು ತಿಂಡಿಗಾಗಿ ಹುಡುಕಾಡಿದ ಕರಡಿ! : ಮುಂದೇನಾಯ್ತು ಗೊತ್ತಾ?
ಏಪ್ರಿಲ್ 12ರಂದು ಪೊಲೀಸ್ ಇಲಾಖೆ ಈ ಪೋಸ್ಟನ್ನು ಹಂಚಿಕೊಂಡಿತ್ತು. ಇದೀಗ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಜೊತೆಗೆ, ಎಲ್ಲರೂ ಈ ಶ್ವಾನದ ಬುದ್ಧಿವಂತಿಕೆಯನ್ನು ಮನಸಾರೆ ಕೊಂಡಾಡುತ್ತಿದ್ದಾರೆ. ಅಲ್ಲದೆ, ಈ ಶ್ವಾನದ ಮಾಲಿಕರು ಶೀಘ್ರ ಆರೋಗ್ಯವಂತರಾಗಲಿ ಎಂದು ಹಾರೈಸಿದ್ದಾರೆ.