ಇದೊಂದು ಅದ್ಭುತ ಪುನರ್ಮಿಲನದ ಕತೆ... ತನ್ನ ಕರುಳಬಳ್ಳಿಯಿಂದ ದೂರವಾಗಿದ್ದ ತಾಯಿ ಕೊನೆಗೂ ಖುಷಿಯಾಗಿದ್ದಾಳೆ. ಕಳೆದುಕೊಂಡಿದ್ದ ಸಂಪತ್ತು ಈ ತಾಯಿಗೆ ಮತ್ತೆ ಸಿಕ್ಕಿದೆ. ಈ ತಾಯಿಯ ಖುಷಿಗೆ ಕಾರಣ ಆ ಹಳ್ಳಿಯ ಅನ್ನದಾತರು... ಇದು ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ನಡೆದ ಘಟನೆ. ಜುನ್ನಾರ್ ಜಿಲ್ಲೆಯ ಓಜರ್ ಗ್ರಾಮದ ಅದೊಂದು ಹಳ್ಳಿಯಲ್ಲಿ ರೈತರು ಕಬ್ಬು ಕಟಾವು ಮಾಡಲು ಸಜ್ಜಾಗುತ್ತಿದ್ದರು. ಈ ವೇಳೆ, ತಮ್ಮ ಹೊಲದಲ್ಲಿ ಇವರು ವಿಶೇಷ ಅತಿಥಿಗಳನ್ನು ಕಂಡಿದ್ದರು. ಅವುಗಳೇ ಎರಡು ಮುದ್ದಾದ ಚಿರತೆ ಮರಿಗಳು... ಅಮ್ಮನಿಂದ ದೂರವಾಗಿದ್ದ ಕಂದಮ್ಮಗಳಿವು... ಹುಟ್ಟಿ ಕೆಲವೇ ದಿನಗಳಾಗಿತ್ತಷ್ಟೇ... ಖಂಡಿತಾ ಈ ಪುಟಾಣಿಗಳಿಗೆ ತಾಯಿ ಆಸರೆ ತುಂಬಾ ಅಗತ್ಯವಾಗಿತ್ತು. ಇದು ಮಾತೃಹೃದಯದ ರೈತರಿಗೂ ಗೊತ್ತಾಗಿತ್ತು. ಹೀಗಾಗಿ, ಹೇಗಾದರೂ ಈ ಪುಟಾಣಿಗಳನ್ನು ತಾಯಿ ಜೊತೆ ಸೇರಿಸಬೇಕೆಂದು ಇವರು ಪಣತೊಟ್ಟಿದ್ದರು.
Also Read : ಹಾಲುಗಲ್ಲದ ಕಂದಮ್ಮನೊಂದಿಗೆ ತಾಯಿಯ ಜುಗಲ್ಬಂದಿ : ಮನಸೆಳೆಯುವ ಅದ್ಭುತ ದೃಶ್ಯವಿದು
ಹೀಗೆ ಯಾವಾಗ ಈ ಪುಟಾಣಿಗಳನ್ನು ಅಮ್ಮನ ಮಡಿಲು ಸೇರಿಸಬೇಕೆಂದು ರೈತರು ನಿರ್ಧರಿಸಿದರೋ ಅಲ್ಲಿಂದ ಶುರುವಾಗಿದ್ದೇ ಹೃದಯಸ್ಪರ್ಶಿ ಕತೆ. ತಮ್ಮ ಈ ಮಹತ್ವಾರ್ಯಕ್ಕೆ ರೈತರು ವೈಲ್ಡ್ಲೈಫ್ ಎಸ್ಓಎಸ್ ಎಂಬ ಪ್ರಾಣಿ ರಕ್ಷಣಾ ತಂಡದ ಸಹಾಯ ಪಡೆದಿದ್ದರು. ಈ ಮರಿಗಳನ್ನು ಕಂಡ ತಕ್ಷಣ ಇವರು ಈ ಸಂಸ್ಥೆಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದು ತಕ್ಷಣಕ್ಕೆ ಸ್ಥಳಕ್ಕೆ ಬಂದ ರಕ್ಷಣಾ ತಂಡದ ಪಶುವೈದ್ಯಕೀಯ ಅಧಿಕಾರಿಗಳು ಹುಟ್ಟಿ ಸುಮಾರು 45 ದಿನಗಳಾಗಿದ್ದ ಈ ಪುಟಾಣಿಗಳನ್ನು ಪರಿಶೀಲಿಸಿದ್ದರು. ಇವುಗಳು ಆರೋಗ್ಯವಾಗಿವೆ ಎಂಬುದನ್ನೂ ಅರಿತುಕೊಂಡ ವೈದ್ಯರು ಇವುಗಳು ಅರಣ್ಯಕ್ಕೆ ಬಿಡುವುದಕ್ಕೆ ಸಮರ್ಥವಾಗಿವೆ ಎಂದು ಹೇಳಿದ್ದರು. ಇದಾದ ಬಳಿಕ ಇವರೆಲ್ಲರೂ ಒಟ್ಟಾಗಿ ಈ ಮರಿಯನ್ನು ತಾಯಿಯ ಬಳಿ ಸೇರಿಸಲು ಕ್ರಮ ಕೈಗೊಂಡರು.
Also Read : ಮೀನುಗಳಿಗೆ ಆಹಾರ ನೀಡುವ ಬಾತುಕೋಳಿ : ಅಪೂರ್ವ ದೃಶ್ಯವಿದು
ತನ್ನ ಕರುಳಬಳ್ಳಿಗಳನ್ನು ಕಳೆದುಕೊಂಡು ಈ ತಾಯಿಯೂ ಮರಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾಳೆ ಎಂಬುದು ಇವರಿಗೆ ಗೊತ್ತಾಗಿತ್ತು. ಹೀಗಾಗಿ, ಹೊಲದಲ್ಲಿ ಅತ್ಯಂತ ಜಾಗರೂಕತೆಯಿಂದ ಮತ್ತು ವ್ಯವಸ್ಥಿತವಾಗಿ ಮರಿಗಳನ್ನು ಇಟ್ಟ ಈ ಹೃದಯವಂತರು, ರಿಮೋರ್ಟ್ ಕಂಟ್ರೋಲ್ಡ್ ಕ್ಯಾಮೆರಾವನ್ನು ಅಳವಡಿಸಿ ಈ ಪುನರ್ಮಿಲನದ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು. ಸುರಕ್ಷಿತ ಅಂತರವನ್ನು ಕಾಯ್ದುಕೊಂಡು, ಪ್ರಾಣಿಗಳಿಗೂ ತೊಂದರೆ ಆಗದ ರೀತಿಯಲ್ಲಿ ಇವರು ಈ ಕಾರ್ಯಾಚರಣೆಯನ್ನು ನಡೆಸಿದ್ದರು.
Also Read : ಜ್ವಾಲಾಮುಖಿಯ ಲಾವಾದಲ್ಲಿ ಮೊಟ್ಟೆ, ಮಾಂಸ ಬೇಯಿಸಿದ ವ್ಯಕ್ತಿ! ಕುತೂಹಲಕಾರಿ ವಿಡಿಯೋ ವೈರಲ್
ಮರಿಗಳನ್ನು ಇಟ್ಟ ಸುಮಾರು ಇಪತ್ತು ನಿಮಿಷದಲ್ಲಿ ತಾಯಿ ಅಲ್ಲಿಗೆ ಬಂದಿದ್ದಳು. ಹೀಗೆ ಮರಿಗಳಿದ್ದ ಬುಟ್ಟಿಯ ಬಳಿ ಬಂದ ತಾಯಿ ತನ್ನ ಕಂದಮ್ಮಗಳನ್ನು ಕಂಡು ಖುಷಿಪಟ್ಟಿದ್ದಳು. ಪಾಪ... ಈ ತಾಯಿ ತನ್ನ ಮರಿಗಳು ಕಾಣದೆ ಅದೆಷ್ಟು ವೇದನೆಪಟ್ಟಿದ್ದಳೋ ಅವಳಿಗೇ ಗೊತ್ತು. ಸದ್ಯ ಈ ಕಾರ್ಯಾಚರಣೆ ಮತ್ತು ಪುನರ್ಮಿಲನದ ದೃಶ್ಯವನ್ನು ವೈಲ್ಡ್ ಲೈಫ್ ಎಸ್ಓಎಸ್ ತನ್ನ ಇನ್ಸ್ಟಾಗ್ರಾಂ ಮತ್ತು ಯುಟ್ಯೂಬ್ ಖಾತೆಯಲ್ಲಿ ಹಂಚಿಕೊಂಡಿದೆ.
ಸಹಜವಾಗಿಯೇ ಈ ಪೋಸ್ಟ್ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಈ ತಾಯಿ ಮತ್ತು ಮರಿಗಳ ಪುನರ್ಮಿಲನದ ದೃಶ್ಯಕ್ಕೆ ಮನಸೋತಿದ್ದಾರೆ. ಜೊತೆಗೆ, ರೈತರು ಮತ್ತು ಪ್ರಾಣಿ ರಕ್ಷಣಾ ತಂಡದ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Also Read : ಹಾಲುಗಲ್ಲದ ಕಂದಮ್ಮನೊಂದಿಗೆ ತಾಯಿಯ ಜುಗಲ್ಬಂದಿ : ಮನಸೆಳೆಯುವ ಅದ್ಭುತ ದೃಶ್ಯವಿದು
ಹೀಗೆ ಯಾವಾಗ ಈ ಪುಟಾಣಿಗಳನ್ನು ಅಮ್ಮನ ಮಡಿಲು ಸೇರಿಸಬೇಕೆಂದು ರೈತರು ನಿರ್ಧರಿಸಿದರೋ ಅಲ್ಲಿಂದ ಶುರುವಾಗಿದ್ದೇ ಹೃದಯಸ್ಪರ್ಶಿ ಕತೆ. ತಮ್ಮ ಈ ಮಹತ್ವಾರ್ಯಕ್ಕೆ ರೈತರು ವೈಲ್ಡ್ಲೈಫ್ ಎಸ್ಓಎಸ್ ಎಂಬ ಪ್ರಾಣಿ ರಕ್ಷಣಾ ತಂಡದ ಸಹಾಯ ಪಡೆದಿದ್ದರು. ಈ ಮರಿಗಳನ್ನು ಕಂಡ ತಕ್ಷಣ ಇವರು ಈ ಸಂಸ್ಥೆಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದು ತಕ್ಷಣಕ್ಕೆ ಸ್ಥಳಕ್ಕೆ ಬಂದ ರಕ್ಷಣಾ ತಂಡದ ಪಶುವೈದ್ಯಕೀಯ ಅಧಿಕಾರಿಗಳು ಹುಟ್ಟಿ ಸುಮಾರು 45 ದಿನಗಳಾಗಿದ್ದ ಈ ಪುಟಾಣಿಗಳನ್ನು ಪರಿಶೀಲಿಸಿದ್ದರು. ಇವುಗಳು ಆರೋಗ್ಯವಾಗಿವೆ ಎಂಬುದನ್ನೂ ಅರಿತುಕೊಂಡ ವೈದ್ಯರು ಇವುಗಳು ಅರಣ್ಯಕ್ಕೆ ಬಿಡುವುದಕ್ಕೆ ಸಮರ್ಥವಾಗಿವೆ ಎಂದು ಹೇಳಿದ್ದರು. ಇದಾದ ಬಳಿಕ ಇವರೆಲ್ಲರೂ ಒಟ್ಟಾಗಿ ಈ ಮರಿಯನ್ನು ತಾಯಿಯ ಬಳಿ ಸೇರಿಸಲು ಕ್ರಮ ಕೈಗೊಂಡರು.
Also Read : ಮೀನುಗಳಿಗೆ ಆಹಾರ ನೀಡುವ ಬಾತುಕೋಳಿ : ಅಪೂರ್ವ ದೃಶ್ಯವಿದು
ತನ್ನ ಕರುಳಬಳ್ಳಿಗಳನ್ನು ಕಳೆದುಕೊಂಡು ಈ ತಾಯಿಯೂ ಮರಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾಳೆ ಎಂಬುದು ಇವರಿಗೆ ಗೊತ್ತಾಗಿತ್ತು. ಹೀಗಾಗಿ, ಹೊಲದಲ್ಲಿ ಅತ್ಯಂತ ಜಾಗರೂಕತೆಯಿಂದ ಮತ್ತು ವ್ಯವಸ್ಥಿತವಾಗಿ ಮರಿಗಳನ್ನು ಇಟ್ಟ ಈ ಹೃದಯವಂತರು, ರಿಮೋರ್ಟ್ ಕಂಟ್ರೋಲ್ಡ್ ಕ್ಯಾಮೆರಾವನ್ನು ಅಳವಡಿಸಿ ಈ ಪುನರ್ಮಿಲನದ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು. ಸುರಕ್ಷಿತ ಅಂತರವನ್ನು ಕಾಯ್ದುಕೊಂಡು, ಪ್ರಾಣಿಗಳಿಗೂ ತೊಂದರೆ ಆಗದ ರೀತಿಯಲ್ಲಿ ಇವರು ಈ ಕಾರ್ಯಾಚರಣೆಯನ್ನು ನಡೆಸಿದ್ದರು.
Also Read : ಜ್ವಾಲಾಮುಖಿಯ ಲಾವಾದಲ್ಲಿ ಮೊಟ್ಟೆ, ಮಾಂಸ ಬೇಯಿಸಿದ ವ್ಯಕ್ತಿ! ಕುತೂಹಲಕಾರಿ ವಿಡಿಯೋ ವೈರಲ್
ಮರಿಗಳನ್ನು ಇಟ್ಟ ಸುಮಾರು ಇಪತ್ತು ನಿಮಿಷದಲ್ಲಿ ತಾಯಿ ಅಲ್ಲಿಗೆ ಬಂದಿದ್ದಳು. ಹೀಗೆ ಮರಿಗಳಿದ್ದ ಬುಟ್ಟಿಯ ಬಳಿ ಬಂದ ತಾಯಿ ತನ್ನ ಕಂದಮ್ಮಗಳನ್ನು ಕಂಡು ಖುಷಿಪಟ್ಟಿದ್ದಳು. ಪಾಪ... ಈ ತಾಯಿ ತನ್ನ ಮರಿಗಳು ಕಾಣದೆ ಅದೆಷ್ಟು ವೇದನೆಪಟ್ಟಿದ್ದಳೋ ಅವಳಿಗೇ ಗೊತ್ತು. ಸದ್ಯ ಈ ಕಾರ್ಯಾಚರಣೆ ಮತ್ತು ಪುನರ್ಮಿಲನದ ದೃಶ್ಯವನ್ನು ವೈಲ್ಡ್ ಲೈಫ್ ಎಸ್ಓಎಸ್ ತನ್ನ ಇನ್ಸ್ಟಾಗ್ರಾಂ ಮತ್ತು ಯುಟ್ಯೂಬ್ ಖಾತೆಯಲ್ಲಿ ಹಂಚಿಕೊಂಡಿದೆ.
ಸಹಜವಾಗಿಯೇ ಈ ಪೋಸ್ಟ್ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಈ ತಾಯಿ ಮತ್ತು ಮರಿಗಳ ಪುನರ್ಮಿಲನದ ದೃಶ್ಯಕ್ಕೆ ಮನಸೋತಿದ್ದಾರೆ. ಜೊತೆಗೆ, ರೈತರು ಮತ್ತು ಪ್ರಾಣಿ ರಕ್ಷಣಾ ತಂಡದ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.