ಆ್ಯಪ್ನಗರ

ಈ ರೀತಿಯ ಡ್ರೈವರ್ ಇರುವುದು ಬಹಳ ಅಪರೂಪ...! : ಯಾಕೆ ಗೊತ್ತಾ...?

ನಮ್ಮಲ್ಲಿ ಆಕ್ಸಿಡೆಂಟ್ ಮಾಡಿದರೆ ಸ್ಥಳದಿಂದ ಓಡುವ ಅವಕಾಶಕ್ಕೆ ಕಾಯುವವರೇ ಹೆಚ್ಚು. ಅದರಲ್ಲೂ ತಪ್ಪು ನಮ್ಮ ಕಡೆಗೇ ಇದ್ದರೂ ಹಣ ಕೊಡಲು ಬಹುತೇಕ ಸಂದರ್ಭದಲ್ಲಿ ನಾವು ಹಿಂದೇಟು ಹಾಕುತ್ತೇವೆ. ಆದರೆ, ಈ ಡ್ರೈವರ್ ಮಾತ್ರ ತುಂಬಾ ಡಿಫ್ರೆಂಟ್.

Vijaya Karnataka Web 21 Oct 2019, 5:59 pm
ಐಷಾರಾಮಿ ಕಾರೊಂದು ನಿಂತಿದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಇನ್ನೊಂದು ಕಾರು ಆ ಐಷಾರಾಮಿ ಕಾರಿಗೆ ಟಚ್ ಆಗಿ ಸ್ವಲ್ಪ ಗೆರೆ ಬಿದ್ದು ಬಣ್ಣ ಹೋಗಿತ್ತು. ಕಾರಿನ ಪಕ್ಕ ಯಾರೂ ಇರಲಿಲ್ಲ. ಕಾರಿಗೆ ಟಚ್ ಆಗಿದ್ದನ್ನೂ ಯಾರೂ ನೋಡಿಲ್ಲ. ಸಿಕ್ಕಿದ್ದೇ ಛಾನ್ಸ್‌ ಅಂತ ಆ ಡ್ರೈವರ್ ಅಲ್ಲಿಂದ ಓಡಬಹುದಿತ್ತು...! ಆದರೆ, ಈ ಡ್ರೈವರ್ ಹಾಗೆ ಮಾಡಿಲ್ಲ...! ಅದಕ್ಕೇ ಈ ಡ್ರೈವರ್ ಡಿಫ್ರೆಂಟ್...
Vijaya Karnataka Web Honest driver
ಕಾರು ಮತ್ತು ಡ್ರೈವರ್ ಇಟ್ಟಿದ್ದ ಕ್ಷಮಾಪಣಾ ಪತ್ರ


ಕಾರಲ್ಲಿತ್ತು ಹಣ, ಕ್ಷಮಾಪಣಾ ಪತ್ರ...!

ಇದು ನೀಜಮ್ ನಾಸಿಹಿನ್ ಎಂಬವರಿಗೆ ಆದ ಅನುಭವ. ತಮನ್ ಶ್ರೀಗೊಂಬಾಕ್‌ನಲ್ಲಿ ಬ್ಯಾಂಕ್ ಹೊರಗೆ ಕಾರು ನಿಲ್ಲಿಸಿ ನೀಜಮ್ ಹೋಗಿದ್ದರು. ಸ್ವಲ್ಪ ಹೊತ್ತಾದ ಬಳಿಕ ಕಾರಿನ ಬಳಿ ಬಂದಾಗ ವೈಪರ್‌ನಲ್ಲಿ ಆರ್‌ಎಂ 100 (ಮಲೇಷಿಯಾದ ರಿಂಗ್‌ಗಿಟ್ ಅಂದರೆ ಮಲೇಷಿಯಾದ ಕರೆನ್ಸಿ. ಇದರ ಭಾರತದ ಮೌಲ್ಯ ಸುಮಾರು 1,700 ರೂ) ಹಾಗೂ ಒಂದು ಕ್ಷಮಾಪಣಾ ಪತ್ರವನ್ನು ಕಂಡರು.

Also Read : ಮಮತೆಯ ಮಡಿಲು : ಹುಲಿ ಮರಿಗಳ ಪಾಲಿಗೆ ತಾಯಿಯಾದ ಕೋತಿ : ಇಲ್ಲಿದೆ ವಿಡಿಯೋ

ಒಂದು ಕ್ಷಣ ನೀಜಮ್ ಅವರಿಗೆ ಆಶ್ಚರ್ಯ. ಈ ಹಣ ಮತ್ತು ಪತ್ರ ಯಾಕೆಂದು ಅವರಿಗೆ ಮೊದಲು ಗೊತ್ತಾಗಲಿಲ್ಲ. ನಂತರ ನೋಡಿದಾಗ ಕಾರಿನ ಮೇಲೆ ಸಣ್ಣ ತರಚಿದ ಗೆರೆ ಕಾಣಿಸಿದೆ. ತುಂಬಾ ಚಿಕ್ಕ ಅಪಘಾತವಿದು. ಆದರೆ, ಈ ಅಪಘಾತದ ನೋವಿಗಿಂತ ನೀಜಮ್ ಅವರಿಗೆ ಕಾರು ಡ್ರೈವರ್ ಪ್ರಾಮಾಣಿಕತೆ ತುಂಬಾ ಇಷ್ಟವಾಗಿತ್ತು. ಇಂತಹ ನಡೆ ತುಂಬಾ ಅಪರೂಪದ್ದು. ಇದೇ ಕಾರಣಕ್ಕೆ ನೀಜಮ್ ತಮ್ಮ ಅನುಭವವನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ, ಕ್ಷಮಾಪಣಾ ಪತ್ರವನ್ನೂ ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಎಲ್ಲರಿಗೂ ಇಷ್ಟವಾಗಿದ್ದು, ಎಲ್ಲರೂ ಡ್ರೈವರ್ ಪ್ರಾಮಾಣಿಕತೆಯನ್ನು ಕೊಂಡಾಡಿದ್ದಾರೆ.

Also Read : ವಾಹನದಲ್ಲೇ ವಾಸ... ಸಾಕಿರುವ 300 ಇಲಿಗಳೇ ಸಂಗಾತಿಗಳು...!


Also Read : ಅಯ್ಯೋ ದೇವರೇ...! ಈ ದೃಶ್ಯ ನೋಡಿದರೆ ಹೃದಯವೇ ನಿಂತಂತಾಗುತ್ತದೆ...!

ಆಕ್ಸಿಡೆಂಟ್ ಮಾಡಿದ್ದು ಚಾಲಕಿ...

ನೀಜಮ್ ಕೂಡಾ ಈ ಪ್ರಾಮಾಣಿಕ ಡ್ರೈವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದರು. ತುಂಬಾ ದಿನಗಳ ಬಳಿಕ ಆ ಡ್ರೈವರ್ ಫೇಸ್‌ಬುಕ್‌ನಲ್ಲಿ ಮೆಸೇಜ್ ಮಾಡುವ ಮೂಲಕ ನೀಜಮ್‌ಗೆ ಮಾತನಾಡಲು ಸಿಕ್ಕಿದ್ದರು. ಆಗ ನೀಜಮ್‌ಗೆ ಗೊತ್ತಾಗಿದ್ದು ಅಂದು ಈ ಪ್ರಾಮಾಣಿಕತೆ ಮೆರೆದದ್ದು ಒಬ್ಬರು ಚಾಲಕಿ ಎಂಬ ಸತ್ಯ. ಇದನ್ನು ಕೂಡಾ ನೀಜಮ್ ಬರೆದುಕೊಂಡಿದ್ದಾರೆ. ಆ ಚಾಲಕಿ ತನ್ನ ತಪ್ಪಿಗೆ ಹಣ ಸಾಕಾಗದೇ ಇದ್ದರೆ ಮತ್ತೆ ಹೆಚ್ಚುವರಿ ಹಣ ಕೊಡುತ್ತೇನೆ ಎಂದೂ ಹೇಳಿದ್ದರಂತೆ. ಆದರೆ, ನೀಜಮ್ ಮಾತ್ರ ಯಾವುದೇ ಹಣವನ್ನು ತೆಗೆದುಕೊಳ್ಳದೆ ಅವರ ಹಣವನ್ನು ಅವರಿಗೇ ಹಿಂತಿರುಗಿಸಿ ಅವರ ಪ್ರಾಮಾಣಿಕತೆಗೆ ಶಹಬ್ಬಾಸ್ ಹೇಳಿದ್ದಾರಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ