ಆ್ಯಪ್ನಗರ

ವಿಶ್ವದಲ್ಲೇ ಮೊದಲ ಬಾರಿಗೆ ಪುರುಷರ ಗರ್ಭನಿರೋಧಕ ಚುಚ್ಚುಮದ್ದಿನ ಅಭಿವೃದ್ಧಿ : ಇದು ಭಾರತೀಯ ವಿಜ್ಞಾನಿಗಳ ಸಾಧನೆ

ಪುರುಷರ ಗರ್ಭನಿರೋಧಕ ಚುಚ್ಚುಮದ್ದಿನ ಅಭಿವೃದ್ಧಿಯಲ್ಲಿ ಭಾರತೀಯ ವಿಜ್ಞಾನಿಗಳು ಸಾಧನೆ ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಇದು ವಿಶ್ವದಲ್ಲಿಯೇ ಮೊದಲ ಪುರುಷರ ಗರ್ಭನಿರೋಧಕ ಚುಚ್ಚು ಮದ್ದಾಗಲಿದೆ.

Vijaya Karnataka Web 19 Nov 2019, 1:35 pm
ಭಾರತದ ಜನಸಂಖ್ಯೆ ಮಿತಿಮೀರಿ ಹೋಗುತ್ತಿದೆ. ಜನಸಂಖ್ಯೆ ನಿಯಂತ್ರಣದ ಬಗ್ಗೆ ಜಾಗೃತಿಯೂ ನಡೆಯುತ್ತಿದೆ. ಇದರ ನಡುವೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ - ಐಸಿಎಂಆರ್) ಮತ್ತೊಂದು ಸಾಧನೆ ಮಾಡುವತ್ತ ಮುಂದಡಿ ಇಟ್ಟಿದೆ. ವಿಶ್ವದ ಪ್ರಥಮ ಪುರುಷರ ಗರ್ಭ ನಿರೋಧಕ ಚುಚ್ಚುಮದ್ದು ಅಭಿವೃದ್ಧಿಪಡಿಸಿರುವ ಐಸಿಎಂಆರ್ ವೈದ್ಯಕೀಯ ಪ್ರಯೋಗಗಳನ್ನೆಲ್ಲಾ ಯಶಸ್ವಿಯಾಗಿ ಮುಗಿಸಿದೆ. ಜೊತೆಗೆ, ಈ ಪರೀಕ್ಷೆಯ ಅನುಮೋದನೆಗಾಗಿ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಕ್ಕೆ ಕಳುಹಿಸಿಕೊಡಲಾಗಿದೆ ಎಂದು ಈ ಪ್ರಾಜೆಕ್ಟಿನಲ್ಲಿ ತೊಡಗಿಸಿಕೊಂಡಿದ್ದ ಸಂಶೋಧಕರು ತಿಳಿಸಿದ್ದಾರೆ.
Vijaya Karnataka Web contraceptive
ಸಾಂದರ್ಭಿಕ ಚಿತ್ರ


Also Read : ಹೆಲ್ಮೆಟ್ ಧರಿಸಿಯೆಂದು ಬೈಕ್ ಸವಾರರಿಗೆ ಡಿಫ್ರೆಂಟ್ ಸ್ಟೈಲಿನಲ್ಲಿ ಯುವತಿಯ ಮನವಿ : ಇಲ್ಲಿದೆ ವಿಡಿಯೋ

13 ವರ್ಷ ಶಕ್ತಿ, ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ...
ಈ ಗರ್ಭನಿರೋಧಕ ಚುಚ್ಚುಮದ್ದು 13 ವರ್ಷಗಳವರೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಬಳಿಕ ಇದರ ಶಕ್ತಿ ಕುಂದುತ್ತದೆ. ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಯ ಬದಲಿಗೆ ಈ ಚುಚ್ಚುಮದ್ದನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಈ ಮಾದರಿಯ ವಿಶ್ವದ ಏಕೈಕ ಪುರುಷ ಗರ್ಭನಿರೋಧಕ ವ್ಯವಸ್ಥೆಯಾಗಿದೆ.

Also Read : ನಮ್ಮ ದೇಶವನ್ನು ಇನ್ನಷ್ಟು ಸಿರಿವಂತ ಮಾಡುವಷ್ಟು ಸಂಪತ್ತು ಈ ಕೋಟೆಯಲ್ಲಡಗಿದೆಯಂತೆ...!

`ಅಭಿವೃದ್ಧಿ ಪಡಿಸಲಾಗಿರುವ ಚುಚ್ಚುಮದ್ದು ಎಲ್ಲಾ ರೀತಿಯಲ್ಲೂ ಸಿದ್ಧವಾಗಿದೆ. ಆದರೆ, ಡಿಸಿಜಿಐ ಅನುಮೋದನೆ ಸಿಗುವುದೊಂದೇ ಬಾಕಿ ಉಳಿದಿದೆ. ಈ ಚುಚ್ಚುಮದ್ದಿನ ಪರೀಕ್ಷಾರ್ಥ ಪ್ರಯೋಗಗಳು ಮುಗಿದಿದ್ದು, ಶೇ 97.3ರಷ್ಟು ಯಶಸ್ಸು ಲಭಿಸಿದೆ. ಜೊತೆಗೆ, ಇದರಿಂದ ಯಾವುದೇ ಅಡ್ಡ ಪರಿಣಾಮಗಳೂ ಆಗಿಲ್ಲ. ಹೀಗಾಗಿ, ಇದು ವಿಶ್ವದ ಅತ್ಯಂತ ಸುರಕ್ಷಿತ ಪುರುಷ ಗರ್ಭನಿರೋಧಕ ಎಂದು ಹೆಮ್ಮೆಯಿಂದ ಹೇಳಬಹುದು' ಎಂದು ಈ ಆವಿಷ್ಕಾರದ ನೇತೃತ್ವ ವಹಿಸಿರುವ ಐಸಿಎಂಆರ್ ಹಿರಿಯ ವಿಜ್ಞಾನಿ ಡಾ ಆರ್ ಎಸ್ ಶರ್ಮಾ ಹೇಳಿದ್ದಾರೆ.

Also Read : ಮೀಸೆ ಇಟ್ಟುಕೊಂಡು ಓಡಾಡುತ್ತಿದ್ದಾಳೆ ಈ ಮಹಿಳೆ : ಕಾರಣ ಏನೆಂಬುದು ಸಖತ್ ಇಂಟ್ರೆಸ್ಟಿಂಗ್...!

ಐಸಿಎಂಆರ್ ಭಾರತದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯಾಗಿದೆ. ಇನ್ನೊಂದೆಡೆ, ಅಮೇರಿಕಾದ ವಿಜ್ಞಾನಿಗಳೂ ಇದೇ ರೀತಿಯ ಚುಚ್ಚುಮದ್ದಿನ ಆವಿಷ್ಕಾರದಲ್ಲಿ ತೊಡಗಿದ್ದಾರೆ. ಆದರೆ, ಈ ಸಂಶೋಧನೆ ಇನ್ನೂ ನಡೆಯುತ್ತಿದೆಯಷ್ಟೇ. ಹೀಗಾಗಿ, ಭಾರತದ ವಿಜ್ಞಾನಿಗಳ ಸಾಧನೆ ಈಗ ಎಲ್ಲರ ಗಮನ ಸೆಳೆದಿದೆ... ವಿಶ್ವದಲ್ಲೇ ಇದು ಮೊದಲ ಚುಚ್ಚುಮದ್ದು ಆಗಿರುವುದರಿಂದ ತುಂಬಾ ಪರಿಶೀಲನೆ ನಡೆಸಿ, ತುಂಬಾ ಎಚ್ಚರಿಕೆಯಿಂದ ಅನುಮೋದನೆ ನೀಡುವತ್ತ ಡಿಸಿಜಿಐ ತಜ್ಞರು ಕಾರ್ಯಪ್ರವೃತ್ತರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ