ಗುಂಪಿನಲ್ಲಿ ನೀರು ಕುಡಿಯುವ ಖುಷಿ...
| Screengrab from video | Courtesy : Sandeep Mall /Twitter
ದೂರದಲ್ಲಿ ಒಂದು ಸಿಂಹ ನಿಂತಿದ್ದರೆ ಅದನ್ನು ನೋಡುವುದೇ ಒಂದು ಚೆಂದ. ಸಿಂಹಗಳ ಸೊಬಗಿಗೆ ಮಾರು ಹೋಗದವರೇ ಇಲ್ಲ. ಅಂತಹದರಲ್ಲಿ ಸಿಂಹಗಳು ಗುಂಪು ಗುಂಪಾಗಿ ಬಂದರೆ ಖಂಡಿತಾ ನೋಡಲು ಖುಷಿಯಾಗುತ್ತದೆ. ಜೊತೆಗೆ, ಅಲ್ಲೊಂದು ಸುಂದರ ಲೋಕವೇ ತೆರೆದುಕೊಳ್ಳುತ್ತದೆ. ಒಂದೊಮ್ಮೆ ಇಂತಹ ದೃಶ್ಯ ಎದುರಾದರೆ ಎಲ್ಲರೂ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಾರೆ. ಇದು ಕೂಡಾ ಅಂತಹದ್ದೇ ಅದ್ಭುತ ಅನುಭವ ಕೊಡುವ ವಿಡಿಯೋ. ಸುಮಾರು ಇಪ್ಪತ್ತು ಸಿಂಹಗಳ ಗುಂಪೊಂದು ಬಂದು ಒಂದೇ ಕಡೆ ನೀರು ಕುಡಿಯುವ ಅಪೂರ್ವ ದೃಶ್ಯವಿದು. ಈ ದೃಶ್ಯವೇ ಕಣ್ಣಿಗೆ ಹಬ್ಬದಂತಿದೆ.
ವೈರಲ್ ಆಗುತ್ತಿರುವ ವಿಡಿಯೋ
ಸಿಂಹಗಳ ಈಜುವ ಸಡಗರ...
| Screengrab from video | Courtesy : GujaratForestDept/Twitter
ಸಿಂಹಗಳು ಬೇಟೆಯಾಡುವ, ಗಾಂಭೀರ್ಯದಿಂದ ಕುಳಿತು ದಿಟ್ಟಿಸಿ ನೋಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಗುಂಪು ಗುಂಪಾಗಿ ಸಾಗುವ ದೃಶ್ಯವೂ ಕ್ಯಾಮೆರಾಕ್ಕೆ ಸೆರೆಯಾಗುತ್ತವೆ. ಆದರೆ, ಇದೇ ಸಿಂಹಗಳು ಈಜುವ ದೃಶ್ಯಗಳು ಕಾಣಸಿಗುವುದು ಬಲು ಅಪರೂಪ. ಸದ್ಯ ಇಂತಹ ಅಪರೂಪದ ದೃಶ್ಯ ಗುಜರಾತಿನ ಗಿರ್ ಅರಣ್ಯದಲ್ಲಿ ಸೆರೆಯಾಗಿದೆ. ಮೂರು ಸಿಂಹಗಳು ಖುಷಿಯಿಂದ ಈಜಿ ಇನ್ನೊಂದು ದಡಕ್ಕೆ ಸೇರುವ ದೃಶ್ಯವನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ. ಸುಮಾರು ಇನ್ನೂರು ಮೀಟರ್ ದೂರ ಈ ಸಿಂಹಗಳು ಈಜಿದ್ದು, ನಾವೂ ಈಜುವುದರಲ್ಲಿ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿವೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಎಲ್ಲರೂ ಈ ವಿಡಿಯೋ ಕಂಡು ಖುಷಿಪಟ್ಟಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋ
ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ
| Screengrab from video | Courtesy : instagram/lazoo/
ಈ ಕೊರೊನಾ ವೈರಸ್ ಅಬ್ಬರ ಶುರುವಾದ ಬಳಿಕ ಜನರು ತಮ್ಮ ಕೈಗಳ ಸ್ವಚ್ಛತೆಯ ಬಗ್ಗೆ ಬಹುಮುಖ್ಯವಾಗಿ ಗಮನ ಹರಿಸುತ್ತಿದ್ದಾರೆ. ಸಾಧ್ಯವಾದಷ್ಟು ಹೆಚ್ಚು ಸಲ ಕೈಗಳನ್ನು ಸ್ವಚ್ಛಗೊಳಿಸುತ್ತಾರೆ. ಹಾಗಂತ, ಬರೀ ಮನುಷ್ಯರು ಮಾತ್ರವಲ್ಲ ವನ್ಯಜೀವಿಗಳೂ ಸದಾ ತಮ್ಮ ಸ್ವಚ್ಛತೆಯ ಬಗ್ಗೆ ಗಮನ ಹರಿಸುತ್ತವೆ. ಅದಕ್ಕೆ ಸಾಕ್ಷಿ ವನರಾಜನ ಗಾಂಭೀರ್ಯದ ಈ ದೃಶ್ಯ. ಇಲ್ಲೊಬ್ಬ ವನರಾಜ ಕುಳಿತಲ್ಲೇ ತನ್ನ ಎರಡು ಕಾಲುಗಳನ್ನು ನೆಕ್ಕಿ ಚೆನ್ನಾಗಿ ಸ್ವಚ್ಛಗೊಳಿಸುತ್ತಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಿಂಹ ಎಂದಲ್ಲಾ ಎಲ್ಲಾ ಪ್ರಾಣಿಗಳನ್ನು ತಮ್ಮ ಮೈಯ ಸ್ವಚ್ಛತೆಯನ್ನು ಇದೇ ರೀತಿ ಕಾಪಾಡುತ್ತವೆ. ಆದರೆ, ಸಿಂಹ ಇಷ್ಟು ತಾಳ್ಮೆಯಿಂದ ಕುಳಿತು ಇಷ್ಟು ಅಚ್ಚುಕಟ್ಟಾಗಿ ತನ್ನ ದೇಹದ ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿರುವ ಈ ವಿಡಿಯೋ ಈಗ ಎಲ್ಲರನ್ನೂ ಸೆಳೆದಿದೆ. ಯಾಕೆಂದರೆ, ಇಂತಹ ದೃಶ್ಯಗಳು ಸೆರೆಯಾಗುವುದು ಬಲು ಅಪರೂಪ. ಇದೇ ಕಾರಣಕ್ಕೆ ಲಾಸ್ ಏಂಜಲೀಸ್ ಮೃಗಾಲಯ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋ
ಮಳೆ ಎಂದರೆ ಭಯ...!
| Screengrab from video | Courtesy : Sudha Ramen IFS/Twitter
ಸಿಂಹಕ್ಕೆ ತನ್ನ ಕೇಸರವೇ ಭೂಷಣ. ಆದರೆ, ಮಳೆ ಬಂದಾಗ ಮಾತ್ರ ಇದೇ ಸಮಸ್ಯೆ. ಯಾಕೆಂದರೆ, ಅಲ್ಪ ಸ್ವಲ್ಪ ಮಳೆ ಬಂದರೂ ತಾನು ಒದ್ದೆಯಾಗದಂತೆ ನೋಡಿಕೊಳ್ಳುವುದು ಕಾಡಿನ ರಾಜನಿಗೆ ದೊಡ್ಡ ಸವಾಲಿನ ಕೆಲಸ. ಆದರೆ, ಸಿಂಹಿಣಿಯರಿಗೆ ಈ ಸಮಸ್ಯೆ ಇಲ್ಲ. ಸ್ವಲ್ಪ ಮಳೆಗೆ ಸಿಂಹಿಣಿಯರು ಕ್ಯಾರೇ ಎನ್ನುವುದಿಲ್ಲ. ಆದರೆ, ವನರಾಜ ಮಾತ್ರ ತನ್ನ ಮುಖದಲ್ಲಿರುವ ಕೇಸರ ಒದ್ದೆಯಾಗದಂತೆ ಮಳೆ ನಿಲ್ಲುವ ತನಕ ಕಾಯಬೇಕು. ಇದು ಕೂಡಾ ಅದೇ ರೀತಿಯ ವಿಡಿಯೋ. ಇಲ್ಲೊಂದು ಸಿಂಹ ಮಳೆಯಿಂದ ರಕ್ಷಿಸಲು ಮರದ ಬುಡದಲ್ಲಿ ಮುದುಡಿ ಕುಳಿತ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಧಾ ರಾಮನ್ ಈ ವಿಡಿಯೋವನ್ನು ಶೇರ್ ಮಾಡಿದ್ದು, ಇದು ಈಗ ವೈರಲ್ ಆಗುತ್ತಿದೆ. ಅಲ್ಲದೆ, ಈ ಬಗ್ಗೆ ಹಲವರು ಹಾಸ್ಯದ ದಾಟಿಯಲ್ಲಿಯೇ ಪ್ರತಿಕ್ರಿಯೆ ಕೂಡಾ ನೀಡಿದ್ದಾರೆ.