ಆ್ಯಪ್ನಗರ

ಯಪ್ಪಾ ದೇವರೇ...! ಹೊಟ್ಟೆ ನೋವೆಂದು ಹೋದ ಯುವಕರಿಬ್ಬರಿಗೆ ಪ್ರೆಗ್ನೆಂಸಿ ಟೆಸ್ಟ್ ಮಾಡಿಸಿ ಎಂದ ಡಾಕ್ಟರ್...!

ಕೆಲ ವೈದ್ಯರು ಮಾಡುವ ಯಡವಟ್ಟುಗಿಳಿವೆಯಲ್ವಾ. ಅದಕ್ಕೆ ನಗಬೇಕೋ ಅಳಬೇಕೋ ಅಂತ ಗೊತ್ತಾಗಲ್ಲ... ಕೆಲವೊಂದು ಸಲ ಇವರು ನಿಜವಾಗಿಯೂ ಡಾಕ್ಟರೇನಾ ಎಂದು ಪ್ರಶ್ನೆ ಮೂಡುವಷ್ಟು ಕೆಲ ವೈದ್ಯರು ನಗೆಪಾಟಲಿಗೀಡಾಗುತ್ತಾರೆ...!

Vijaya Karnataka Web 14 Oct 2019, 2:59 pm
ರಾಂಚಿ : ಆ ಇಬ್ಬರು ಯುವಕರು ಹೊಟ್ಟೆನೋವೆಂದು ವೈದ್ಯರ ಬಳಿ ಹೋಗಿದ್ದರು. ಆದರೆ, ಟ್ರೀಟ್ಮೆಂಟ್ ಕೊಡಬೇಕಾಗಿದ್ದ ಅಲ್ಲಿನ ಡಾಕ್ಟರ್ ಮಾಡಿದ್ದೇನು ಗೊತ್ತಾ...? `ನೀವಿಬ್ಬರು ಪ್ರೆಗ್ನಿಂಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ' ಎಂದು ಬರೆದು ಕಳಿಸಿದ್ದು...! ಇದನ್ನು ನೋಡಿ ಆ ಯುವಕರಿಬ್ಬರು ಫುಲ್ ತಬ್ಬಿಬ್ಬು...!
Vijaya Karnataka Web representative  image
ಸಾಂದರ್ಭಿಕ ಚಿತ್ರ


ಇಂತಹ ಯಡವಟ್ಟು ಮಾಡಿರುವುದು ಜಾರ್ಖಂಡಿನ ಸರ್ಕಾರಿ ಆಸ್ಪತ್ರೆಯ ವೈದ್ಯ...! ಇಲ್ಲಿನ ಚತ್ರ್‌ ಜಿಲ್ಲೆಯ ಸಿಮಾರಿಯಾದ ರೆಫರೆಲ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಮುಕೇಶ್ ವಿರುದ್ಧ ಇಂತಹದ್ದೊಂದು ಆರೋಪ ಕೇಳಿ ಬಂದಿದೆ.

Also Read : ಸೆಲೂನ್‌ಗೆ ನುಗ್ಗಿ ಗಾಜು ಪುಡಿಗೈದ ಜಿಂಕೆ...!

ಅಕ್ಟೋಬರ್ 1 ರಂದು ಈ ಇಬ್ಬರು ಯುವಕರನ್ನು ಕುಟುಂಬದ ಸದಸ್ಯರು ರೆಫರೆಲ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ, ಡ್ಯೂಟಿಯಲ್ಲಿದ್ದ ಮುಕೇಶ್, ಎಚ್‌ಐವಿ, ಎಚ್‌ಬಿಎ, ಎಚ್‌ಸಿವಿ, ಸಿಬಿಸಿ, ಎಚ್‌ಎಚ್‌2 ಮತ್ತು ಎಎನ್‌ಸಿ ಎಂಬೆಲ್ಲಾ ಟೆಸ್ಟ್ ಬರೆದುಕೊಟ್ಟಿದ್ದರು. ಇದರಲ್ಲಿ ಕೊನೆಗೆ ಇವರು ಬರೆದುಕೊಟ್ಟಿದ್ದು ಮಹಿಳೆ ಗರ್ಭಿಣಿಯಾ, ಇಲ್ಲವಾ ಎಂಬುದನ್ನು ತಿಳಿದುಕೊಳ್ಳಲು ಮಾಡಬೇಕಾದ ಪರೀಕ್ಷೆ. ಅದ್ಯಾವ ಅಗತ್ಯಕ್ಕೆ ಈ ಯುವಕರಿಗೆ ಮುಕೇಶ್ ಈ ಟೆಸ್ಟ್ ಮಾಡಿಸಿದ್ದಾರೋ ಆ ದೇವರಿಗೇ ಗೊತ್ತು...!

ಲ್ಯಾಬ್‌ನಲ್ಲಿ ಗೊತ್ತಾಯ್ತು ವಿಷಯ...!

22 ವರ್ಷದ ಗೋಪಾಲ್ ಗಂಜು ಮತ್ತು 26 ವರ್ಷದ ಕಾಮೇಶ್ವರ ಗಂಜು ಇಂತಹ ವಿಶಿಷ್ಟ ಸನ್ನಿವೇಶ ಎದುರಿಸಿದ್ದವರು. ಪಾಪ ಇವರಿಬ್ಬರು ವೈದ್ಯರು ಬರೆದುಕೊಟ್ಟಿದ್ದ ಚೀಟಿಯನ್ನು ಹಿಡಿದುಕೊಂಡು ಲ್ಯಾಬ್‌ಗೆ ಹೋಗಿದ್ದರು. ಅಲ್ಲಿ `ಅಯ್ಯೋ ಎಎನ್‌ಸಿ ಟೆಸ್ಟ್ ನಿಮಗಲ್ಲ. ಮಹಿಳೆಯರಿಗೆ ಮಾಡುವುದು' ಎಂದು ಲ್ಯಾಬಿನವರು ಹೇಳಿದಾಗಲೇ ಪಾಪ ಇವರಿಗೆ ಸತ್ಯ ಗೊತ್ತಾಗಿದ್ದು. ಜೊತೆಗೆ, ಲ್ಯಾಬಿನಲ್ಲಿದ್ದ ವೈದ್ಯ ಕೂಡಾ ಒಂದು ಕ್ಷಣ ವೈದ್ಯರ ಚೀಟಿ ನೋಡಿ ದಂಗಾಗಿ ಹೋಗಿದ್ದರು.

Also Read : ನಾಯಿಯನ್ನು ತಿನ್ನಲು ಮನೆಯಂಗಳಕ್ಕೆ ಬಂದ ಚಿರತೆ...!

ಇಲ್ಲಿಂದ ಗ್ರಾಮಕ್ಕೆ ಬಂದಿದ್ದ ಯುವಕರು ಕೆಲ ಗ್ರಾಮಸ್ಥರಿಗೆ ಈ ವಿಷಯ ತಿಳಿಸಿದ್ದರು. ಹೀಗಾಗಿ, ಈ ಸುದ್ದಿ ಈಗ ಒಬ್ಬರಿಂದ ಒಬ್ಬರಿಗಾಗಿ ಎಲ್ಲರಿಗೂ ಗೊತ್ತಾಗಿದೆ. ಆದರೆ, ಡಾಕ್ಟರ್ ಮುಕೇಶ್ ಮಾತ್ರ ನಾನು ಇವರಿಗೆ ಈ ಟೆಸ್ಟ್ ಬರೆದು ಕೊಟ್ಟೇ ಇಲ್ಲ ಅಂತ ಹೇಳುತ್ತಿದ್ದಾರೆ. `ಇದು ನನ್ನ ವಿರುದ್ಧದ ಷಡ್ಯಂತ್ರ ' ಎಂಬುದು ಮುಕೇಶ್ ವಾದ.

ಇನ್ನೊಂದೆಡೆ, ಜಿಲ್ಲಾ ಸರ್ಜನ್ ಅರುಣ್ ಕುಮಾರ್ ಪಾಸ್ವಾನ್, ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಆದರೂ ಸತ್ಯಾಸತ್ಯತೆ ತಿಳಿಯಲು ಈ ಪ್ರಕರಣದ ತನಿಖೆಗೂ ಆದೇಶಿಸಿದ್ದಾರೆ.

Also Read : ಹೆಗಲಿಗೆ ಹೆಗಲು ಕೊಟ್ಟು ನಡೆದ ಸಂಭ್ರಮ... ಸೆಲ್ಫಿ ಕ್ಲಿಕ್ಕಿಸಿ ಖುಷಿ ಪಟ್ಟ ಕ್ಷಣ ...

ವೈದ್ಯ ವೃತ್ತಿ ಎಂಬುದು ತುಂಬಾ ಪವಿತ್ರವಾದುದು. ಹೀಗಾಗಿ, ಇಲ್ಲಿ ಅಸಡ್ಡೆ ಖಂಡಿತಾ ತಪ್ಪು. ಇಂತಹ ಕೆಲ ಘಟನೆಗಳಿಂದಾಗಿ ಒಳ್ಳೆಯ ಸರ್ಕಾರಿ ಆಸ್ಪತ್ರೆಗಳ ಹೆಸರೂ ಕೆಟ್ಟು ಹೋಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರೇ ಇದ್ದರೂ ಅನುಮಾನದಿಂದ ನೋಡಬೇಕಾದ ಪರಿಸ್ಥಿತಿ ಬರುತ್ತದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ