ಆ್ಯಪ್ನಗರ

ಗರ್ಭಿಣಿ ಕಾಡಾನೆಯ ಭೀಕರ ಹತ್ಯೆ : ರಕ್ಕಸ ಕೃತ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕಿಡಿ

ಗರ್ಭಿಣಿ ಕಾಡಾನೆಯನ್ನು ಭೀಕರವಾಗಿ ಕೊಂದ ಪ್ರಕರಣ ಈಗ ಎಲ್ಲೆಲ್ಲೂ ನೋವುಂಟು ಮಾಡಿದೆ. ಈ ರಾಕ್ಷಸ ಕೃತ್ಯವನ್ನು ಎಲ್ಲರೂ ಖಂಡಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಜನ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka Web 3 Jun 2020, 2:29 pm
ಏನೂ ಅರಿಯದ ಮುಗ್ಧ ಕಾಡಾನೆ ಅವಳು... ಹೊಟ್ಟೆಯಲ್ಲಿ ಕಂದ ಉಸಿರು ಪಡೆದಿದ್ದ ಸಂಭ್ರಮದಲ್ಲಿದ್ದಳು... ಇದೇ ತಾಯ್ತನದ ಖುಷಿಯಲ್ಲಿ ಆಹಾರವನ್ನು ಹುಡುಕುತ್ತಾ ಊರಿನತ್ತ ಹೆಜ್ಜೆ ಇಟ್ಟಿದ್ದ ಆ ಅಮಾಯಕಿ ನರಳಿ ನರಳಿ ಜೀವ ಬಿಡಬೇಕಾಯಿತು...! ಕಾರಣ, ಕಲ್ಲು ಹೃದಯದ ರಕ್ಕಸರ ಪಾಪಕೃತ್ಯ...!
Vijaya Karnataka Web Pregnant Elephant Death
| Image Credit : Mohan Krishnan/Facebook


Also Read : ಕಾರು ಚಲಾಯಿಸ್ತಾರೆ, ಚಿತ್ರ ಬಿಡಿಸ್ತಾರೆ : ಕಾಲುಗಳನ್ನೇ ಕೈಗಳಂತೆ ಬಳಸುವ ಸಾಧಕಿಯ ಸ್ಫೂರ್ತಿಯ ಕತೆಯಿದು

ಕೇರಳದ ಮಲಪ್ಪುರಂನಲ್ಲಿ ಕಾಡಾನೆಯೊಂದನ್ನು ಭೀಕರವಾಗಿ ಕೊಲ್ಲಲಾಗಿದೆ. ಆಹಾರ ಹುಡುಕಿಕೊಂಡು ಬಂದಿದ್ದ ಈ ಗರ್ಭಿಣಿ ಕಾಡಾನೆಗೆ ಅನನಾಸು ಹಣ್ಣಿನಲ್ಲಿ ಸಿಡಿಮದ್ದು ಇಟ್ಟು ತಿನ್ನಲು ನೀಡಿದ ಜನ ಅದರ ಸಾವಿಗೆ ಕಾರಣರಾಗಿದ್ದಾರೆ. ಈ ಬರ್ಬರ ಹತ್ಯೆ ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಾಣಿಪ್ರಿಯರು ಈ ರಕ್ಕಸೀಕೃತ್ಯವನ್ನು ಖಂಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲೂ ಈಗ ಇದೇ ಚರ್ಚೆ ನಡೆಯುತ್ತಿದೆ. ಮಾನವೀಯತೆಯನ್ನೇ ಮರೆತ ಜನರ ಈ ಕೃತ್ಯವನ್ನು ವಿರೋಧಿಸಿದ ಎಲ್ಲರೂ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೂ ಒತ್ತಾಯಿಸಿದ್ದಾರೆ.

Also Read : ಹೆಬ್ಬಾವಿನ ಬಾಯಿಯಿಂದ ಜಿಂಕೆಯನ್ನು ರಕ್ಷಿಸಿದ ವ್ಯಕ್ತಿ : ಶುರುವಾಗಿದೆ ಸರಿ, ತಪ್ಪಿನ ಚರ್ಚೆ!

ಬಾಯಿಯಲ್ಲಿ ಪಟಾಕಿ ಸ್ಫೋಟಗೊಂಡ ಬಳಿಕ ಗಾಯಗೊಂಡಿದ್ದ ಆನೆ ವೆಲ್ಲಿಯೂರ್ ನದಿಯಲ್ಲಿ ಹೋಗಿ ನಿಂತಿತ್ತು. ಈ ವಿಷಯ ಅರಣ್ಯಾಧಿಕಾರಿಗಳಿಗೆ ತಿಳಿದಿತ್ತು. ಆದರೆ, ಆನೆಯನ್ನು ಉಳಿಸುವ ಸಾಕಷ್ಟು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗದೆ ಇವಳು ಅಲ್ಲೇ ಕೊನೆಯುಸಿರೆಳೆದಿದ್ದಳು. ಈ ರಕ್ಷಣಾ ತಂಡದಲ್ಲಿದ್ದ ಮೋಹನ್ ಕೃಷ್ಣನ್ ಎಂಬ ಅಧಿಕಾರಿ ನೋವಿನಿಂದ ಈ ಘಟನೆಯ ಬಗ್ಗೆ ವಿವರಿಸಿದ ಬಳಿಕವೇ ಈ ರಕ್ಕಸೀಕೃತ್ಯ ಬೆಳಕಿಗೆ ಬಂದಿದ್ದು.

Also Read : ಆಟೋದಲ್ಲಿ ಹ್ಯಾಂಡ್‌ ವಾಶ್, ಸ್ಯಾನಿಟೈಸರ್ ವ್ಯವಸ್ಥೆ: ಹೊಸ ಪ್ರಯತ್ನಕ್ಕೆ ನೆಟ್ಟಿಗರು ಫಿದಾ


ನಿಜ... ಕಾಡಾನೆಗಳು ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುವಾಗ ನೋವಾಗುತ್ತದೆ. ಹಾಗಂತ, ಅವುಗಳನ್ನು ಕೊಂದು ಗಹಗಹಿಸುವುದು ಮನುಷ್ಯರು ಮಾಡುವ ಕೆಲಸವಲ್ಲ... ಅದಕ್ಕೆಂದು ಅರಣ್ಯ ಇಲಾಖೆ ಇದೆ. ಅವರಿಗೆ ಮಾಹಿತಿ ಕೊಟ್ಟು ಆನೆಗಳನ್ನು ಕಾಡಿಗಟ್ಟುವ ಕೆಲಸ ಮಾಡಬಹುದಾಗಿತ್ತು. ಅದಕ್ಕಿಂತ ಹೆಚ್ಚಾಗಿ ಬಹುತೇಕ ಕಡೆಗಳಲ್ಲಿ ಆನೆಗಳು ಸೇರಿದಂತೆ ವನ್ಯಜೀವಿಗಳು ವಾಸಿಸುವ ಜಾಗವನ್ನು ಆಕ್ರಮಿಸಿ ನಾವು ಬದುಕುತ್ತಿದ್ದೇವೆ ಎಂಬುದು ಕೂಡಾ ಅಷ್ಟೇ ಸತ್ಯ... ಪಾಪ... ಅವುಗಳು ಪ್ರಾಣಿಗಳು, ಅವುಗಳಿಗೂ ಬದುಕು ಎಂಬುದಿರುತ್ತದೆ. ನಮ್ಮಂತೆ ಪ್ರಾಣಿಗಳಿಗೂ ಭೂಮಿ ಮೇಲೆ ಬದುಕುವ ಹಕ್ಕು ಇರುತ್ತದೆ... ಇದನ್ನು ಅರಿಯದೆ ಹೀಗೆ ಆಹಾರದ ಆಸೆ ತೋರಿಸಿ ನರಳಿ ನರಳಿ ಸಾಯುವಂತೆ ಮಾಡುವುದು ಎಷ್ಟು ಸರಿ...? ಖಂಡಿತಾ ಇದು ಅಕ್ಷಮ್ಯ ಅಪರಾಧ... ಇದೇ ಕಾರಣಕ್ಕೆ ಈಗ ಜನ ಒಕ್ಕೊರಳಿನಿಂದ ಆನೆ ಹಂತಕರ ವಿರುದ್ಧ ಸಿಡಿದೆದ್ದಿರುವುದು...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ