ಆ್ಯಪ್ನಗರ

7 ಕೋಟಿ ರೂ. ಗೆದ್ದ ಮಹಾರಾಷ್ಟ್ರದ ಶಿಕ್ಷಕ : ಗೆಲುವಿನ ಅದ್ಭುತ ಕ್ಷಣದ ವಿಡಿಯೋ ವೈರಲ್

ಮಹಾರಾಷ್ಟ್ರದ ಶಿಕ್ಷಕರೊಬ್ಬರು ಜಾಗತಿಕ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದೆ. ಇವರ ಅಪ್ರತಿಮ ಕಾರ್ಯಕ್ಕೆ ಈ ಗೌರವ ಸಂದಿದ್ದು, ಸೋಶಿಯಲ್ ಮೀಡಿಯಾದಲ್ಲೂ ಇವರ ಯಶೋಗಾಥೆ ವೈರಲ್ ಆಗುತ್ತಿದೆ.

Vijaya Karnataka Web 4 Dec 2020, 4:07 pm
ಇದು ಭಾರತ ಹೆಮ್ಮೆ ಪಡುವ ಕ್ಷಣ... ಭಾರತದ ಹೆಮ್ಮೆಯ ಶಿಕ್ಷಕರೊಬ್ಬರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಜೊತೆಗೆ, ಏಳು ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನೂ ಗೆದ್ದಿದ್ದಾರೆ.
Vijaya Karnataka Web Ranjitsinh Disale
| Image Courtesy : @maha_governor/Twitter


ಮಹಾರಾಷ್ಟ್ರದ ಪ್ರಾಥಮಿಕ ಶಾಲಾ ಶಿಕ್ಷಕ ರಂಜಿತ್ ಸಿನ್ಹ್‌ ದಿಸಾಲೆ ಈ ಸಾಧನೆ ಮಾಡಿದವರು. ಗ್ಲೋಬಲ್ ಟೀಚರ್ ಪ್ರೈಜ್‌ 2020ರ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ. ಹುಡುಗಿಯರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಇವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಸಂದಿದೆ. ವಿಶ್ವದಾದ್ಯಂತ ಒಟ್ಟು ಹತ್ತು ಜನರು ಈ ಪ್ರಶಸ್ತಿಯ ಅಂತಿಮ ಕಣದಲ್ಲಿದ್ದರು. ಆದರೆ, ಇವರೆಲ್ಲರನ್ನೂ ಹಿಂದಿಕ್ಕಿ ರಂಜಿತ್ ಈ ಸಾಧನೆಯನ್ನು ಮಾಡಿದ್ದಾರೆ. ಒಂದು ಮಿಲಿಯನ್ ಯುಎಸ್‌ಡಿ ಎಂದರೆ ಭಾರತದ ಸುಮಾರು 7,37,85,000 ರೂಪಾಯಿಯನ್ನು ಇವರು ಗೆದ್ದಿದ್ದಾರೆ.

Also Read : ಬಾಹ್ಯಾಕಾಶದಲ್ಲಿ ಮೂಲಂಗಿ ಬೆಳೆದ ನಾಸಾ : ಗಿಡಗಳ ಬೆಳವಣಿಗೆಯ ಅದ್ಭುತ ವಿಡಿಯೋ ವೈರಲ್

32 ವರ್ಷದ ರಂಜಿತ್ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪರಿತೇವಾಡಿ ಗ್ರಾಮದವರಾಗಿದ್ದಾರೆ. ಸದ್ಯ ಇವರು ಜಯಗಳಿಸುವ ಅದ್ಭುತ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Also Read : ಈ ನೋವು ಶಾಶ್ವತ : ಎಂಟರೊಳಗೇ ತೋಳದ ಜೀವನ! : ಹೃದಯವನ್ನೇ ಭಾರವಾಗಿಸುವ ದೃಶ್ಯವಿದು

2014ರಲ್ಲಿ ವರ್ಕಿ ಫೌಂಡೇಶನ್ ಸ್ಥಾಪಿಸಿದ ವಾರ್ಷಿಕ ಬಹುಮಾನ ಇದಾಗಿದೆ. ತಮ್ಮ ವೃತ್ತಿಯಲ್ಲಿ ಮಹೋನ್ನತ ಕೊಡುಗೆ ನೀಡಿದ ಅಸಾಧಾರಣ ಶಿಕ್ಷಕರನ್ನು ಗುರುತಿಸುವ ಸಲುವಾಗಿ ಈ ಪ್ರಶಸ್ತಿಯನ್ನು ಆರಂಭಿಸಲಾಗಿತ್ತು. ಇನ್ನು, ಈ ಪ್ರಶಸ್ತಿ ಪಡೆದ ಬಳಿಕವೂ ರಂಜಿತ್ ಹೃದಯವಂತಿಕೆಯನ್ನು ಮೆರೆದಿದ್ದಾರೆ. ತನ್ನ ಜೊತೆಗೆ ಅಂತಿಮ ಹಂತದಲ್ಲಿದ್ದವರೊಂದಿಗೆ ತಮ್ಮ ಪ್ರಶಸ್ತಿಯ ಶೇ 50ರಷ್ಟು ಹಣವನ್ನು ಹಂಚಿಕೊಳ್ಳಲು ಇವರು ನಿರ್ಧರಿಸಿದ್ದಾರೆ. ಈ ಮೂಲಕ ಅವರ ಸೇವೆಯನ್ನೂ ಇವರು ಗುರುತಿಸುವ ಔದಾರ್ಯವನ್ನು ತೋರಿದ್ದಾರೆ. ಈ ಪ್ರಶಸ್ತಿ ಗೆದ್ದವರು ಇದೇ ಮೊದಲ ಬಾರಿಗೆ ಇಡುತ್ತಿರುವ ಮಾದರಿ ಹೆಜ್ಜೆ ಇದಾಗಿದೆ. ಈ ಮೂಲಕವೂ ರಂಜಿತ್ ಹಲವರಿಗೆ ಸ್ಫೂರ್ತಿಯಾಗಿದ್ದಾರೆ.


Also Read : ಹೈವೇಯಲ್ಲಿ ವಿಮಾನದ ತುರ್ತು ಭೂಸ್ಪರ್ಶ...! : ಭಯಾನಕ ವಿಡಿಯೋ ವೈರಲ್

ಸದ್ಯ ರಂಜಿತ್ ಅವರ ಸಾಧನೆಯ ಕತೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಎಲ್ಲರೂ ಇವರ ಅದ್ಭುತ ಸಾಧನೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಯನ್ನು ಕೊಂಡಾಡಿದ್ದಾರೆ. ನಿಜಕ್ಕೂ ಇದು ಭಾರತ ಹೆಮ್ಮೆ ಪಡುವ ಸುಂದರ ಕ್ಷಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ