ಆ್ಯಪ್ನಗರ

`ನಮನ ವೀರರೇ... ಎಂದೂ ಮರೆಯಲ್ಲ ನಿಮ್ಮ ತ್ಯಾಗ, ಬಲಿದಾನ'

ಪುಲ್ವಾಮಾ ದಾಳಿಗೆ ಇಂದಿಗೆ ಒಂದು ವರ್ಷ. ಹೀಗಾಗಿ, ಅಂದು ಹುತಾತ್ಮರಾದ ವೀರ ಯೋಧರನ್ನು ಇವತ್ತು ಎಲ್ಲರೂ ಸ್ಮರಿಸುತ್ತಿದ್ದಾರೆ. ಹೃದಯಪೂರ್ವಕ ನಮನ ಅರ್ಪಿಸುತ್ತಿದ್ದಾರೆ.

Vijaya Karnataka Web 14 Feb 2020, 1:02 pm
ಫೆಬ್ರವರಿ 14... ಭಾರತದ ಪಾಲಿಗೆ ಎಂದೂ ಮರೆಯಲಾಗದ, ಪದೇ ಪದೇ ಘೋರ ನೆನಪಾಗಿ ಕಾಡುವ ದಿನ... ಯಾಕೆಂದರೆ, ಸರಿಯಾಗಿ ಒಂದು ವರ್ಷದ ಹಿಂದೆ ಇಡೀ ಭಾರತವೇ ಬೆಚ್ಚಿಬೀಳುವ ಘಟನೆಯೊಂದು ನಡೆದಿತ್ತು. ಅಂದು ರಕ್ತಪಿಪಾಸು ಜೈಶ್-ಎ-ಮೊಹಮ್ಮದ್ ಉಗ್ರರ ದಾಳಿಗೆ ಪುಲ್ವಾಮಾದಲ್ಲಿ ನಮ್ಮ 40ಕ್ಕೂ ಅಧಿಕ ವೀರ ಯೋಧರು ಹುತಾತ್ಮರಾಗಿದ್ದರು.
Vijaya Karnataka Web pulwama attack
ಪುಲ್ವಾಮಾ ದಾಳಿಯ ದೃಶ್ಯ


ಅಂದಿನ ಭೀಕರ ಘಟನೆ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಯೋಧರ ತ್ಯಾಗ, ಕುಟುಂಬದ ಕಣ್ಣೀರಿನ ದೃಶ್ಯವನ್ನು ನೆನೆದಾಗ ಹೃದಯ ಭಾರವಾಗುತ್ತದೆ. ನಮಗೇ ಗೊತ್ತಿಲ್ಲದಂತೆ ಕಣ್ಣೀರ ಹನಿ ಕೆನ್ನೆ ಸವರಿ ಜಾರಿರುತ್ತದೆ. ಅಷ್ಟು ಭೀಕರವಾಗಿತ್ತು ಅಂದಿನ ದೃಶ್ಯ... ಅಂದಿನ ಘಟನೆಯನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ. ಹೀಗಾಗಿ, ನೆಟ್ಟಿಗರು ಇಂದು ವೀರ ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸುತ್ತಿದ್ದಾರೆ.


* ನಿಮ್ಮ ತ್ಯಾಗವನ್ನು ಮರೆಯಲು ಸಾಧ್ಯವಿಲ್ಲ... ನಮ್ಮ ಹೃದಯದಲ್ಲಿ ನಿಮ್ಮ ನೆನಪು ಸದಾ ಶಾಶ್ವತ... ಕೆಚ್ಚೆದೆಯ ವೀರರಿಗೆ ನಮ್ಮ ನಮನ...

* ನಮಗಾಗಿ ಕಷ್ಟಪಟ್ಟಿರಿ... ನಮಗಾಗಿ ಹೋರಾಡಿದಿರಿ... ಓ... ಯೋಧರೆ, ನೀವು ಎಂದೆಂದಿಗೂ ಅಜರಾಮರ...

* ನಾವು ನೆಮ್ಮದಿಯಿಂದ ಸುರಕ್ಷಿತವಾಗಿ ಇದ್ದೇವೆ ಎಂದರೆ ಅದಕ್ಕೆ ಕಾರಣ ಗಡಿಯಲ್ಲಿ ನಮಗಾಗಿ ಕಷ್ಟಪಡುವ ಯೋಧರು. ಬಿಸಿಲು, ಮಳೆ, ಚಳಿ ಎನ್ನದೆ ಸದಾ ಕಾಲ ದೇಶಕ್ಕಾಗಿ ದುಡಿಯುವ ಈ ತ್ಯಾಗಮಯಿ ಯೋಧರನ್ನು ಎಷ್ಟು ಸ್ಮರಿಸಿದರೂ ಅದು ಕಡಿಮೆಯೇ.


ನಿಜ, ಯೋಧರನ್ನು ಎಷ್ಟು ನೆನೆದರೂ ಅದು ಕಡಿಮೆಯೇ.. ತಮ್ಮ ಮನೆಯವರು, ಪ್ರೀತಿಪಾತ್ರರನ್ನು ಬಿಟ್ಟು ದೂರದಲ್ಲೆಲ್ಲೋ ಗಡಿಯಲ್ಲಿ ಇವರು ನಮಗಾಗಿ ಹೋರಾಡುತ್ತಿರುತ್ತಾರೆ. ಹೀಗಾಗಿ, ನಾವೆಲ್ಲಾ ದೇಶವಾಸಿಗಳು ನೆಮ್ಮದಿಯಿಂದ ಬದುಕು ಕಾಣುತ್ತಿದ್ದೇವೆ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ