ಆ್ಯಪ್ನಗರ

ಮತ್ತೆ ಇಂಟರ್ನೆಟ್‌ನಲ್ಲಿ ಹವಾ ಎಬ್ಬಿಸಿದ ರಾನು ಮಂಡಲ್

ರೈಲ್ವೇ ಸ್ಟೇಷನ್ ಬಳಿ ಹಾಡು ಹಾಡುತ್ತಾ ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದ್ದ ರಾನು ಮಂಡಲ್ ಮತ್ತೆ ಇಂಟರ್ನೆಟ್‌ನಲ್ಲಿ ಹವಾ ಎಬ್ಬಿಸಿದ್ದಾರೆ. ಇವರು ಹಾಡಿದ ಅದೊಂದು ಹಾಡಿಗೆ ಮತ್ತೆ ಎಲ್ಲರೂ ಫಿದಾ ಆಗಿದ್ದಾರೆ.

Vijaya Karnataka Web 30 Oct 2019, 2:24 pm
ಮಕ್ಕಳನ್ನು ರಸ್ತೆಯಲ್ಲಿ ಕರೆದುಕೊಂಡು ಹೋಗುವಾಗ ಎಚ್ಚರ : ಇಲ್ಲಿದೆ ಭಯಾನಕ ವಿಡಿಯೋರಾನು ಮಂಡಲ್... ಕೆಲವೇ ಕೆಲವು ತಿಂಗಳ ಹಿಂದೆ ರೈಲು ನಿಲ್ದಾಣದಲ್ಲಿ ಹಾಡು ಹೇಳುತ್ತಿದ್ದ ಗಾಯಕಿ. ಅನಾಥೆಯಂತೆ ಬದುಕುತ್ತಿದ್ದ ರಾನುಗೆ ರೈಲು ನಿಲ್ದಾಣವೇ ಮನೆಯಂತಿತ್ತು. ಆದರೆ, ಇವರ ಸುಶ್ರಾವ್ಯ ಕಂಠ ಇವರ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಟ್ಟಿತ್ತು. ಇದೀಗ ಇವರು ಸ್ಟಾರ್ ಸಿಂಗರ್ ಆಗಿದ್ದಾರೆ. ಇಂತಹ ರಾನು ಈಗ ಮತ್ತೆ ಇಂಟರ್ನೆಟ್‌ನಲ್ಲಿ ಹವಾ ಎಬ್ಬಿಸಿದ್ದಾರೆ.
Vijaya Karnataka Web Ranu Mondal


Also Read : ಈಕೆ ಲಾಸ್ ಏಂಜಲೀಸ್‌ನ ರಾನು ಮಂಡಲ್ : ರಸ್ತೆ ಬದಿಯಲ್ಲಿ ಹಾಡಿದ್ದ ಗಾಯಕಿಗೆ ಸಿಕ್ತು ಅವಕಾಶ...

ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಾನು 1995ರ ಶಾರೂಖ್ ಅಭಿನಯದ `ದಿಲ್ ವಾಲೇ ದುಲ್ಹಾನಿಯಾ ಲೇಜಾಯೆಂಗೇ' ಚಿತ್ರದ `ತುಜೆ ದೇಖಾ ತೋ ಯೆ ಜಾನಾ ಸನಂ' ಹಾಡನ್ನು ಸುಶ್ರಾವ್ಯ ಕಂಠದಿಂದ ಹಾಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲರೂ ಈ ಹಾಡಿಗೆ ಫಿದಾ ಆಗಿದ್ದಾರೆ. 20,000 ಕ್ಕೂ ಅಧಿಕ ಬಾರಿ ಈ ವಿಡಿಯೋ ವೀಕ್ಷಣೆಯಾಗಿದೆ.

View this post on Instagram guys follow @teampriyapunia official for more amazing update . . #dcvideoz #dytto #dancedeewane2 #dancedeewane #superdancerchapter3 #superdancer3 #danceplus4 #jhalakdikhlajaa #highfever #swagpack #romantic #raghavjuyal #birradhasherpa #sushantkhatri #piyushbhagat #aryanpatra #faisalkhan #vaishnavi #danceindiadance #dancelovers❤ #shaktimohan #remodsouza #dharmesh #tiktokdance #bollywooddancer #dancebattles #fikshun #robogirldytto A post shared by daily hunt (@dailyhunt_official) on Oct 26, 2019 at 5:34am PDT

`ತುಜೆ ದೇಖಾ ತೋ ಯೆ ಜಾನಾ ಸನಂ' ಹಾಡಿಗೆ ಜತಿನ್ ಲಲಿತ್ ಸಂಗೀತ ನೀಡಿದ್ದು, ಕುಮಾರ್ ಸಾನು ಮತ್ತು ಲತಾ ಮಂಗೇಶ್ಕರ್ ಹಾಡಿದ್ದರು. ಇದು ಬಾಲಿವುಡ್‌ನ ಎವರ್‌ಗ್ರೀನ್ ಹಾಡುಗಳ ಸಾಲಿನಲ್ಲಿ ನಿಲ್ಲುವಂತಹ ಗೀತೆಯಾಗಿದೆ.

Also Read : ನರರಕ್ಕಸ ಬಾಗ್ದಾದಿಯನ್ನು ಹೆಡೆಮುರಿ ಕಟ್ಟಿದ ಜಾಗದಲ್ಲಿತ್ತು ಮುದ್ದು ಶ್ವಾನದ ಮರಿ...!

ಅದೊಂದು ದಿನ ಇವರು ರೈಲು ನಿಲ್ದಾಣದಲ್ಲಿ ಕುಳಿತು ಗಾನಕೋಗಿಲೆ ಲತಾ ಮಂಗೇಶ್ಕರ್ ಧ್ವನಿಯಲ್ಲಿ ಹಾಡಿದ್ದ ಒಂದು ಹಾಡು ಎಲ್ಲರ ಮನಗೆದ್ದಿತ್ತು. ಇದನ್ನು ರೈಲು ನಿಲ್ದಾಣದಲ್ಲಿದ್ದ ಇಂಜಿನಿಯರ್ ಆತೀಂದ್ರ ಚಕ್ರವರ್ತಿ ಎಂಬವರು ತಮ್ಮ ಮೊಬೈಲ್‌ನಲ್ಲಿ ಶೂಟ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದರು. ಅಲ್ಲಿಂದ ರಾನು ಜೀವನವೇ ಬದಲಾಯಿತು. ರಾತ್ರೋರಾತ್ರಿ ರಾನು ಸ್ಟಾರ್ ಸಿಂಗರ್ ಆಗಿ ಬಿಟ್ಟರು. ಗಾಯಕ, ಸಂಗೀತ ನಿರ್ದೇಶಕ ಹಿಮೇಶ್ ರೇಶ್ಮಿಯಾ ಕರೆದು ಚಿತ್ರದಲ್ಲಿ ಹಾಡಲು ಅವಕಾಶ ಕೊಟ್ಟರು. ಜೊತೆಗೆ, ಒಳ್ಳೆಯ ಸಂಭಾವನೆಯನ್ನೂ ನೀಡಿದ್ದರು. ಅಲ್ಲಿಂದ ರಾನು ಬದುಕಿನ ಕಷ್ಟ ದೂರವಾಯಿತು.

Also Read : ಮಕ್ಕಳನ್ನು ರಸ್ತೆಯಲ್ಲಿ ಕರೆದುಕೊಂಡು ಹೋಗುವಾಗ ಎಚ್ಚರ : ಇಲ್ಲಿದೆ ಭಯಾನಕ ವಿಡಿಯೋ

ಬಳಿಕ ಸಾಕಷ್ಟು ಹೆಸರು ಮಾಡಿದ್ದ ರಾನು ಹಲವಾರು ರಿಯಾಲಿಟಿ ಶೋಗಳಲ್ಲಿ, ದೊಡ್ಡ ಸಮಾರಂಭದಲ್ಲಿ ಭಾಗವಹಿಸಿ ಎಲ್ಲರ ಮನಗೆಲ್ಲುತ್ತಿದ್ದಾರೆ. ಅಪಾರ ಅಭಿಮಾನಿ ಬಳಗವನ್ನೂ ಇವರೀಗ ಸಂಪಾದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ