ಆ್ಯಪ್ನಗರ

ಮೀನುಗಾರನನ್ನು ರಾತ್ರೋರಾತ್ರಿ ಸಿರಿವಂತನನ್ನಾಗಿಸಿದ ತಿಮಿಂಗಿಲ ಹೊರಹಾಕಿದ್ದ ಮೇಣದಂತಹ ಉಂಡೆ...!

ತಿಮಿಂಗಿಲದ ವಾಂತಿ ಯುವ ಮೀನುಗಾರನನ್ನು ಕೋಟ್ಯಧಿಪತಿಯನ್ನಾಗಿಸಿದೆ. ತೀರದಲ್ಲಿ ಸಿಕ್ಕಿದ್ದ ಕಲ್ಲಿನಂತ ವಸ್ತು ಈ ಯುವಕನ ಜೀವನವನ್ನೇ ಬದಲಾಯಿಸಿದೆ.

Vijaya Karnataka Web 20 Jan 2021, 1:37 pm
ತೀರದಲ್ಲಿ ಸಿಕ್ಕಿದ್ದ ಆ ವಸ್ತು ತನ್ನನ್ನು ರಾತ್ರೋರಾತ್ರಿ ಸಿರಿವಂತನನ್ನಾಗಿಸುತ್ತದೆ ಎಂದು ಸ್ವತಃ ಆ ಯುವ ಮೀನುಗಾರ ಕೂಡಾ ಅಂದುಕೊಂಡಿರಲಿಲ್ಲ. ಆದರೆ, ಈ ವಸ್ತುವಿನ ಮೌಲ್ಯ ಗೊತ್ತಾಗುತ್ತಿದ್ದಂತೆಯೇ ಈ ಮೀನುಗಾರನ ಖುಷಿಗೆ ಪಾರವೇ ಇರಲಿಲ್ಲ...!
Vijaya Karnataka Web Image by shadowfaxone from Pixabay
| Representative image | Image by shadowfaxone from Pixabay


ಇದು ಥೈಲ್ಯಾಂಡಿನ 20 ವರ್ಷದ ಮೀನುಗಾರ ಚಲೆರ್ಮ್‌ಚೈ ಮಹಾಪನ್‌ನ ಕತೆ. ಈ ಮೀನುಗಾರ ಜನವರಿ 6ರಂದು ಸಾಂಗ್ಖ್ಲಾದ ಸಮಿಲಾ ಬೀಚ್‌ನಲ್ಲಿ ಮತ್ಸ್ಯ ಬೇಟೆಯಲ್ಲಿ ತೊಡಗಿದ್ದರು. ಈ ವೇಳೆ, ವಾತಾವರಣದಲ್ಲಿ ಏನೋ ಬದಲಾವಣೆ ಆದಂತಾಗಿತ್ತು. ಹೀಗಾಗಿ, ಇವರು ತಕ್ಷಣ ತೀರಕ್ಕೆ ಮರಳಿದ್ದರು.

Also Read : ಮೀನುಗಾರನ ಅದೃಷ್ಟ ಬದಲಾಯಿಸಿತು ತಿಮಿಂಗಿಲ ವಿಸರ್ಜಿಸಿದ್ದ ವಸ್ತು : ಇದರ ಮೌಲ್ಯ 24 ಕೋಟಿ ರೂ!

ಹೀಗೆ ತೀರಕ್ಕೆ ಬಂದ ಮಹಾಪನ್ ಅವರಿಗೆ ಇಲ್ಲಿ ಬಿಳಿಯ ವಿಶಿಷ್ಟ ಉಂಡೆಯೊಂದು ಕಾಣಿಸಿತ್ತು. ಅಲೆಗಳಿಗೆ ಸಿಲುಕಿ ಇದು ತೀರಕ್ಕೆ ಬಂದಿತ್ತು. ಇದನ್ನು ನೋಡಿದ ಮಹಾಪನ್ ಇದೊಂದು ಸಾಮಾನ್ಯ ಕಲ್ಲು ಎಂದುಕೊಂಡಿದ್ದರು. ಆದರೆ, ಇನ್ನೂ ಹತ್ತಿರಕ್ಕೆ ಹೋಗಿ ನೋಡಿದಾಗ ಇದ್ಯಾವುದೋ ಅಮೂಲ್ಯ ವಸ್ತು ಇದ್ದಂತಿದೆ ಎಂದು ಇವರಿಗೆ ಅನಿಸಿತ್ತು. ಹೀಗಾಗಿ, ಈ ಮೇಣದಂತಹ ಉಂಡೆಯನ್ನು ಮನೆಗೆ ತಂದಿದ್ದ ಇವರು ಪರೀಕ್ಷಿಸಿದ್ದರು. ಊರಿನ ಹಿರಿಯರೊಂದಿಗೆ ಈ ಬಗ್ಗೆ ಚರ್ಚಿಸಿದ್ದರು. ಊರಿನ ಹಿರಿಯರು ಹೇಳಿದ ಮೇಲೆಯೇ ಇವರಿಗೆ ಗೊತ್ತಾಗಿದ್ದು ಇದು ತಿಮಿಂಗಿಲ ಹೊರಹಾಕಿದ್ದ ಮೇಣದಂತಹ ವಸ್ತು ಮತ್ತು ಇದಕ್ಕೆ ಕೋಟ್ಯಂತರ ರೂಪಾಯಿ ಬೆಲೆ ಇದೆ ಎಂಬ ಸತ್ಯ...!

Also Read : ಅಧಿಪತ್ಯ ಸಾಧಿಸಲು ಎರಡು ಬಲಶಾಲಿ ಹುಲಿಗಳ ಘನಘೋರ ಕದನ!: ಇಲ್ಲಿದೆ ವಿಡಿಯೋ

ಇದನ್ನು ಅಂಬರ್ಗ್ರಿಸ್ ಎಂದು ಕರೆಯುತ್ತಾರೆ. ದುಬಾರಿ ಸುಗಂಧ ದ್ರವ್ಯ ತಯಾರಿಕೆಗೆ ಇದನ್ನು ಬಳಸಲಾಗುತ್ತದೆ. ಯಾಕೆಂದರೆ, ಪರಿಮಳ ಹೆಚ್ಚು ಕಾಲ ಉಳಿಯುವುದಕ್ಕೆ ಇದು ಸಹಕಾರಿ. ಇದೇ ಕಾರಣಕ್ಕೆ ಈ ಅಂಬರ್ಗ್ರಿಸ್‌ಗೆ ಭಾರೀ ಬೇಡಿಕೆ ಇದೆ. ಹೆಚ್ಚಿನ ಸಂದರ್ಭದಲ್ಲಿ ಇದನ್ನು ಸಂಗ್ರಹಿಸಲು ಸಾಧ್ಯವಾಗುವುದು ಅಪರೂಪ ಮತ್ತು ಕಷ್ಟಕರವಾಗಿದ್ದರಿಂದ ಇದಕ್ಕೆ ಈಗಲೂ ಎಲ್ಲೆಲ್ಲೂ ಭಾರೀ ಬೇಡಿಕೆ ಇದೆ.

Also Read : 12 ಬಗೆಯ ಖಾದ್ಯಗಳಿರುವ ಈ ನಾನ್‌ ವೆಜ್‌ ಥಾಲಿಯನ್ನು 1 ಗಂಟೆಯಲ್ಲಿ ತಿಂದರೆ ಬುಲೆಟ್ ಬೈಕ್ ಗಿಫ್ಟ್‌!

ಸುಮಾರು 7 ಕಿಲೋಗ್ರಾಂಗಳಷ್ಟು ಇದು ತೂಕವಿದ್ದು, ಇದರ ಬೆಲೆ ಸುಮಾರು 210,000 ಪೌಂಡ್ಸ್‌ ಎಂದು ಅಂದಾಜಿಸಲಾಗಿದೆ. ಅಂದರೆ, ಭಾರತದ ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಬೆಲೆಬಾಳುವ ವಸ್ತು ಇದಾಗಿದೆ. ಸದ್ಯ ಮಹಾಪನ್‌ ಈ ಮೇಣದಂತಹ ಉಂಡೆಯನ್ನು ಮಾರಾಟ ಮಾಡಲು ಆತುರ ಪಡುತ್ತಿಲ್ಲ. ಅಂತಾರಾಷ್ಟ್ರೀಯ ಖರೀದಿದಾರರು ಉತ್ತಮ ಬೆಲೆಗೆ ಇದನ್ನು ಕೊಳ್ಳುವ ತನಕ ಕಾಯಲು ಇವರು ನಿರ್ಧಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ