ಆ್ಯಪ್ನಗರ

ಯುವ ಜನರ ಯಶಸ್ಸಿಗೆ ನೆರವಾಗುತ್ತವೆ ಈ 6 ಸೂತ್ರಗಳು : ವೈರಲ್ ಆಯ್ತು ಉದ್ಯಮಿಯೊಬ್ಬರ ಟ್ವೀಟ್

ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ಅವರು ಮಾಡಿರುವ ಟ್ವೀಟ್ ಈಗ ಸಖತ್ ವೈರಲ್ ಆಗುತ್ತಿದೆ. ಯುವಕರಿಗೆ ಇವರು ನೀಡಿರುವ ಸೂತ್ರ ಎಲ್ಲರಿಗೂ ತುಂಬಾ ಇಷ್ಟವಾಗಿದೆ.

Vijaya Karnataka Web 30 Nov 2020, 9:49 am
ಯುವ ಜನರೇ ಈ ದೇಶದ ಬೆನ್ನೆಲುಬು... ದೇಶವನ್ನು ಸೃದೃಢವಾಗಿ ಕಟ್ಟುವಲ್ಲಿ ಯುವ ಜನರ ಪಾತ್ರವೂ ದೊಡ್ಡದಿರುತ್ತದೆ. ಆದರೆ, ಕೆಲವೊಂದು ಸಲ ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಯುವಕರು ಹಾದಿ ತಪ್ಪುವುದೂ ಇದೆ. ತಮ್ಮ ಬದುಕನ್ನು ಚೆನ್ನಾಗಿ ರೂಪಿಸಿಕೊಳ್ಳಲು ಅಡಿಪಾಯ ಹಾಕಿಕೊಳ್ಳಬೇಕಾದ ಸಮಯದಲ್ಲಿಯೇ ದಾರಿ ತಪ್ಪಿ ಕೆಲವರು ಬದುಕಿನುದ್ದಕ್ಕೂ ಕಷ್ಟ ಅನುಭವಿಸುತ್ತಾರೆ. ಸೂಕ್ತ ಮಾರ್ಗದರ್ಶನ ಮತ್ತು ಬದುಕಿನ ಗುರಿಯ ಬಗ್ಗೆ ಸ್ಪಷ್ಟತೆ ಇದ್ದಾಗ ಮಾತ್ರ ಯಶಸ್ಸು, ಖುಷಿ ಅನುಭವಿಸಲು ಸಾಧ್ಯ. ಸದ್ಯ ಇಂತಹ ಯಶಸ್ಸಿನ ಸೂತ್ರವನ್ನು ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ನೀಡಿದ್ದಾರೆ.
Vijaya Karnataka Web Image by Shahid Abdullah from Pixabay
| Representative image | Image by Shahid Abdullah from Pixabay


Also Read : `ಪ್ಲೀಸ್, ಇವನನ್ನು ಮನೆಗೆ ಕರೆದೊಯ್ದು ಸಾಕಿ' : ಶ್ವಾನದ ಪಕ್ಕದಲ್ಲಿತ್ತು ಬಾಲಕ ಬರೆದಿದ್ದ ಭಾವನಾತ್ಮಕ ಪತ್ರ!

ಉದ್ಯಮಿ ಹರ್ಷ ಗೋಯೆಂಕಾ ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಕೆಲವೊಂದು ಆಸಕ್ತಿಕರ ಟ್ವೀಟ್‌ಗಳನ್ನು ಇವರು ಮಾಡುತ್ತಿರುತ್ತಾರೆ. ಇವರ ಒಂದೊಂದು ಟ್ವೀಟ್‌ಗಳನ್ನು ಸಖತ್ ಗಮನ ಸೆಳೆಯುತ್ತವೆ. ಇದೀಗ ಯುವ ಜನರ ಬದುಕಿಗೆ ಸ್ಫೂರ್ತಿ ತುಂಬಬಲ್ಲ ಟ್ವೀಟ್ ಮಾಡಿರುವ ಹರ್ಷ ಈ ಮೂಲಕ ಬದುಕಿಗೆ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.

Also Read : ಐಪ್ಯಾಡ್, ಸ್ನ್ಯಾಕ್ಸ್‌ನೊಂದಿಗೆ `ರಹಸ್ಯ ತಾಣ'ದಲ್ಲಿ ಕುಳಿತಿದ್ದ 2 ವರ್ಷದ ಮಗನನ್ನು ಕಂಡುಹಿಡಿದ ತಾಯಿ!

`ನೀವು ಯೌವನದಲ್ಲಿರುವಾಗ ಈ ನಿಯಮಗಳನ್ನು ಅನುಸರಿಸಿ ಮತ್ತು ನೀವು ವಿಷಾದಿಸುವುದಿಲ್ಲ' ಎಂದು ಕ್ಯಾಪ್ಶನ್ ಬರೆದು ಗೋಯೆಂಕಾ ಮಾಡಿರುವ ಟ್ವೀಟ್‌ನಲ್ಲಿ ಆರು ಸೂತ್ರಗಳಿವೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಹಣಕಾಸು ನಿರ್ವಹಣೆಗೆ ಬೇಕಾದ ಆರು ಸಲಹೆಗಳನ್ನು ಇವರು ನೀಡಿದ್ದಾರೆ. 1 ನೀವು ಸಾಲದಿಂದ ದೂರ ಇರಿ. 2 ನಿಮ್ಮನ್ನು ನೀವು ಹತೋಟಿಗೆ ತರುವಂತಹ ಕೌಶಲ್ಯಗಳನ್ನು ಕಲಿಯಿರಿ. 3 ನಿಮ್ಮ ಸಾಮಾಜಿಕ ಮಾಧ್ಯಮವನ್ನು ವಿವೇಕಯುತವಾಗಿ ಬಳಸಿ. 4 ಜಿಮ್‌ಗೆ ಹೋಗಿ 5 ಇತರರ ಅಭಿಪ್ರಾಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಮತ್ತು 6 ಕಲಿಕೆ ಮತ್ತು ಅನುಭವ ಗಳಿಸಲು ಖರ್ಚು ಮಾಡಿ, ವಸ್ತುಗಳಿಗಲ್ಲ' ಎಂದು ಹರ್ಷ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.


Also Read : ಪುಟ್ಟ ಮಗಳ `ಪ್ರಾಜೆಕ್ಟ್‌' ವಿಡಿಯೋದಲ್ಲಿ ತಂದೆಯ ಡಾನ್ಸ್‌: ಮುದ ನೀಡುವ ತಮಾಷೆಯ ದೃಶ್ಯವಿದು

ಸದ್ಯ ಈ ಪೋಸ್ಟ್‌ ಎಲ್ಲರಿಗೂ ಇಷ್ಟವಾಗಿದೆ. ಎಲ್ಲರೂ ಇದೊಂದು ಉಪಯುಕ್ತ ಸಲಹೆಯಾಗಿದೆ ಎಂದು ಕೊಂಡಾಡಿದ್ದಾರೆ. ಜೊತೆಗೆ, ಇಂತಹ ಸಲಹೆ ನೀಡಿರುವುದಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ