ಆ್ಯಪ್ನಗರ

ಹಣದಲ್ಲಿ ಬಡವ, ಹೃದಯವಂತಿಕೆಯಲ್ಲಿ ಸಿರಿವಂತ : ಇದು ಮನಸ್ಸು ಕರಗಿಸುವ ವಿಡಿಯೋ

ವೃದ್ಧ ಭಿಕ್ಷುಕರೊಬ್ಬರು ತಟ್ಟೆಯಲ್ಲಿ ಬೀದಿ ನಾಯಿಗಳಿಗೆ ಆಹಾರ ಕೊಡುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಇವರ ಈ ಪ್ರಾಣಿ ಪ್ರೀತಿಗೆ ಈಗ ಎಲ್ಲರೂ ಮನಸೋತಿದ್ದಾರೆ.

Vijaya Karnataka Web 16 Jul 2020, 5:38 pm
ದಯೆ ಎಂಬುದು ಬಹುದೊಡ್ಡ ಸಂಪತ್ತು. ದಯೆ, ಸಹಾನುಭೂತಿ ಮಾನವೀಯತೆಯ ಅತ್ಯುತ್ತಮ ರೂಪ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ವಿಡಿಯೋ ಇಂತಹ ಮಾನವೀಯ ಮೌಲ್ಯಕ್ಕೆ ಸಾಕ್ಷಿ. ಇದು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಬಹಳ ಸಣ್ಣ ವಿಡಿಯೋ. ಸುಮಾರು 17 ಸೆಕೆಂಡುಗಳ ವಿಡಿಯೋವಿದು. ಈ ವಿಡಿಯೋದ ಅವಧಿ ಸಣ್ಣದಿರಬಹುದು. ಆದರೆ, ಇದರ ಹಿಂದಿನ ಜೀವನ ಮೌಲ್ಯ ಬಲು ದೊಡ್ಡದು.
Vijaya Karnataka Web Kindness
| Screengrab from video | Courtesy : Susanta Nanda IFS/Twitter


Also Read : ಶ್ವಾನದ ದಾಳಿಯಿಂದ ಪುಟ್ಟ ತಂಗಿಯನ್ನು ರಕ್ಷಿಸಿದ 6 ವರ್ಷದ ಬಾಲಕ !: ದೇಹಕ್ಕೆ ಬಿದ್ದಿದೆ 90 ಸ್ಟಿಚ್!

ಬಹುತೇಕ ಸಂದಭದಲ್ಲಿ ವನ್ಯಜೀವಿಗಳ ಅಪರೂಪದ ವಿಡಿಯೋಗಳನ್ನು ಹಂಚಿಕೊಳ್ಳುವ ಸುಸಂತ ನಂದ ಅವರು ಈ ಸಲ ಮುಗ್ಧ ಭಿಕ್ಷುಕರೊಬ್ಬರ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಭಿಕ್ಷುಕ ಹಣದಲ್ಲಿ ಬಡವ ಇರಬಹುದು. ಆದರೆ, ಹೃದಯವಂತಿಕೆಯಲ್ಲಿ ಅತ್ಯಂತ ಸಿರಿವಂತ. ಇದಕ್ಕೆ ಸಾಕ್ಷಿ ಇವರು ಎರಡು ತಟ್ಟೆಯಲ್ಲಿ ಅತ್ಯಂತ ಪ್ರೀತಿಯಿಂದ ಬೀದಿ ನಾಯಿಗಳಿಗೆ ಆಹಾರ ಕೊಡುವ ಈ ದೃಶ್ಯ. ಒಂದು ಕ್ಷಣ ಎಲ್ಲರನ್ನೂ ಭಾವುಕರನ್ನಾಗಿಸುವ ದೃಶ್ಯವಿದು. `ಸಂಪತ್ತಿನಿಂದ ಬಡವ. ಹೃದಯವಂತಿಕೆಯಿಂದ ಶ್ರೀಮಂತ' ಎಂದು ಕ್ಯಾಪ್ಶನ್ ಬರೆದು ಸುಸಂತ ನಂದ ಅವರು ಈ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Also Read : ಮಳೆಯಲ್ಲಿ ಮುದುಡಿ ಕುಳಿತಿದ್ದ ಬೀದಿ ನಾಯಿಗೆ ಅಂಗಡಿಯೊಳಗೆ ಆಶ್ರಯ ನೀಡಿದ ಹೃದಯವಂತ

ಸದ್ಯ ಈ ವಿಡಿಯೋ ನೋಡಿದ ಎಲ್ಲರೂ ಈ ವೃದ್ಧರ ಬಗೆಗೂ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬಡವನಾದರೂ ಪ್ರಾಣಿಗಳ ಬಗ್ಗೆ ಇವರು ತೋರುವ ದಯೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

Also Read : ಪೆಟ್ರೋಲ್ ಬಂಕ್‌ಗೆ ಹಾವು ತಂದು ಬಿಟ್ಟ ಭೂಪ! : ವಿಡಿಯೋ ವೈರಲ್

ಸಹಾಯ ಮಾಡುವಾಗ ಸಿಗುವ ನೆಮ್ಮದಿಯನ್ನು ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅನೇಕ ಸಂದರ್ಭದಲ್ಲಿ ಇಂತಹ ವಿಡಿಯೋಗಳು ಮನಸ್ಸಿಗೆ ಹಿತ ನೀಡುತ್ತವೆ. ಇತ್ತೀಚೆಗೆ ಕೇರಳದಲ್ಲಿ ಮಹಿಳೆಯೊಬ್ಬರು ಓಡಿ ಬಂದು ಬಸ್ ನಿಲ್ಲಿಸಿ ಅಂಧ ವೃದ್ಧರೊಬ್ಬರಿಗೆ ನೆರವಾಗಿದ್ದರು. ಈ ವಿಡಿಯೋ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಹಲವು ವಿಡಿಯೋಗಳು ಕಾಣಸಿಗುತ್ತವೆ ಮತ್ತು ಇಂತಹ ವಿಡಿಯೋಗಳು ನಮ್ಮ ಬದುಕಿಗೂ ಸ್ಫೂರ್ತಿ ತುಂಬುತ್ತವೆ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ