ಆ್ಯಪ್ನಗರ

ಬಸ್ ಚಾಲನೆ ವೇಳೆ ಡ್ರೈವರ್ ಹುಚ್ಚಾಟ : ಯುವತಿಯರು ಗೇರ್ ಚೇಂಚ್ ಮಾಡುತ್ತಿದ್ದ ವಿಡಿಯೋ ವೈರಲ್

ಕೇರಳದಲ್ಲೊಬ್ಬ ಬಸ್ ಚಾಲಕ ಮಾಡಿದ ತಪ್ಪಿಗೆ ತಲೆದಂಡ ಅನುಭವಿಸಿದ್ದಾನೆ. ಗೋವಾ ಟ್ರಿಪ್ ವೇಳೆ ಈತ ತೋರಿದ ಹುಚ್ಚಾಟಕ್ಕೆ ಆರ್‌ಟಿಓ ಅಧಿಕಾರಿಗಳು ಸರಿಯಾದ ಶಾಸ್ತಿ ಮಾಡಿದ್ದಾರೆ.

Vijaya Karnataka Web 20 Nov 2019, 12:32 pm
ಡ್ರೈವರ್ ಕೆಲಸ ತುಂಬಾ ಜವಾಬ್ದಾರಿಯುತವಾಗಿದ್ದು. ಯಾಕೆಂದರೆ, ಪ್ರಯಾಣಿಕರ ಜೀವದ ಹೊಣೆ ಚಾಲಕನ ಮೇಲಿರುತ್ತದೆ. ಚಾಲಕನ ಮೇಲೆ ನಂಬಿಕೆ ಇಟ್ಟೇ ಜನ ಬಸ್ಸಿಗೆ ಹತ್ತಿರುತ್ತಾರೆ. ಆದರೆ, ಕೆಲವೊಂದು ಸಲ ಕೆಲ ಚಾಲಕರು ತೋರುವ ನಿರ್ಲಕ್ಷ್ಯ ದೊಡ್ಡ ದುರಂತಕ್ಕೇ ಕಾರಣವಾಗುತ್ತದೆ. ಈ ಬಗ್ಗೆ ಅಧಿಕಾರಿಗಳೆಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕೆಲವು ಚಾಲಕರು ಸಂಚಾರಿ ನಿಯಮಗಳನ್ನು ಗಾಳಿಗೆ ತೂರುತ್ತಾರೆ. ಸದ್ಯ ಅಂತಹದ್ದೊಂದು ವಿಡಿಯೋ ವೈರಲ್ ಆಗಿದೆ.
Vijaya Karnataka Web bus driver Allows College Girls to Change Gear
ನಿರ್ಲಕ್ಷ್ಯ ತೋರಿರುವ ಚಾಲಕ


Also Read : ವ್ಯಕ್ತಿಯೊಬ್ಬರ ಕಣ್ಣಿನಲ್ಲಿತ್ತು 7 ಸೆಂ.ಮೀ ಉದ್ದದ ದಾರದಂತಹ ಹುಳು...!

ಈ ವಿಡಿಯೋದಲ್ಲಿ ಕೇರಳದ ಬಸ್ ಚಾಲಕನೊಬ್ಬ ಕ್ಯಾಬಿನ್‌ನಲ್ಲಿ ಕುಳಿತ ಯುವತಿಯರಿಗೆ ಗೇರ್ ಚೇಂಜ್ ಮಾಡಲು ಅವಕಾಶ ಕೊಟ್ಟಿದ್ದಾನೆ. ಬಸ್ ಚಾಲನೆಯಲ್ಲಿರುವಾಗಲೇ ಇವರೆಲ್ಲಾ ಈ ಹುಚ್ಚಾಟ ಮೆರೆದಿದ್ದು ಈ ವಿಡಿಯೋ ವೈರಲ್ ಆಗುತ್ತಿದೆ.


ಚಾಲಕ ಎಂಜಾಯ್ ಮಾಡಿಕೊಂಡು ಬಸ್ ಚಲಾಯಿಸುತ್ತಿದ್ದರೆ, ಯುವತಿಯರು ಆತ ಸೂಚಿಸಿದಂತೆ ಗೇರ್ ಚೇಂಜ್ ಮಾಡುತ್ತಿದ್ದರು. ತಮ್ಮ ಈ ಹುಚ್ಚಾಟದಿಂದ ಆಗಬಹುದಾದ ಅನಾಹುತದ ಬಗ್ಗೆ ಈ ಡ್ರೈವರ್ ಮತ್ತು ಯುವತಿಯರು ಒಂದು ಚೂರೂ ಯೋಚಿಸಿದಂತಿರಲಿಲ್ಲ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಇವರೆಲ್ಲಾ ಕಾಲೇಜು ವಿದ್ಯಾರ್ಥಿನಿಯರಾಗಿದ್ದು ಕೇರಳದಿಂದ ಗೋವಾಕ್ಕೆ ಟ್ರಿಪ್ ಹೋಗುತ್ತಿದ್ದರು. ಈ ವೇಳೆ, ಡ್ರೈವರ್ ಯಾವ ಸಂದರ್ಭದಲ್ಲಿ ಗೇರ್ ಶಿಫ್ಟ್‌ ಮಾಡಬೇಕು ಎಂದು ಯುವತಿಯರಿಗೆ ಪಾಠ ಮಾಡುತ್ತಿದ್ದ.

Also Read : Great Escape...! : ಕೆಲವೇ ಇಂಚುಗಳ ಅಂತರದಲ್ಲಿ ಚಿರತೆ ದಾಳಿಯಿಂದ ಪಾರು...!

ಆದರೆ, ಈತನ ಈ ನಿರ್ಲಕ್ಷ್ಯದ ಚಾಲನೆಯಿಂದ ಬಸ್ಸಿನಲ್ಲಿದ್ದವರು ಮಾತ್ರ ಅಪಾಯಕ್ಕೆ ಸಿಲುಕುತ್ತಿರಲಿಲ್ಲ. ಬದಲಾಗಿ ಎದುರಿಗೆ ಬರುತ್ತಿದ್ದ ವಾಹನ ಸವಾರರಿಗೂ ಇದರಿಂದ ಅಪಾಯ ಎದುರಾಗುವ ಎಲ್ಲಾ ಸಾಧ್ಯತೆಗಳಿದ್ದವು. ಒಂದು ಸಣ್ಣ ತಪ್ಪಿನಿಂದ ಬಸ್ ಸಂಪೂರ್ಣ ನಿಯಂತ್ರಣ ಕಳೆದುಕೊಳ್ಳುವ ಅಪಾಯವೂ ಇರುತ್ತದೆ. ಇಂತಹ ನಿರ್ಲಕ್ಷ್ಯದಿಂದ ಅದೆಷ್ಟೋ ಜೀವಗಳು ಹೋಗಿರುವ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ... ಆದರೆ, ಈ ಚಾಲಕ ಅದ್ಯಾವುದಕ್ಕೂ ತಲೆಕೆಡಿಸಿಕೊಂಡಂತೆ ಇರಲಿಲ್ಲ...

Also Read : ಹೆತ್ತವರ ಸಮಾಧಿ ಅಗೆದು ಮೂಳೆಗಳನ್ನು ಹೊರತೆಗೆದ ಪುತ್ರ...! : ಕಾರಣ ಗೊತ್ತಾದರೆ ಕೋಪ ನೆತ್ತಿಗೇರುತ್ತದೆ...!

ಹೀಗೆ ಈ ಚಾಲಕನ ಹುಚ್ಚಾಟ ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗಿತ್ತು. ಹಲವರು ಈತನ ಹುಚ್ಚಾಟ ಕಂಡು ಸಿಟ್ಟಾಗಿದ್ದರು. ಕೊನೆಗೆ ಈ ವಿಡಿಯೋ ಆರ್‌ಟಿಓ ಅಧಿಕಾರಿಗಳಿಗೂ ಮುಟ್ಟಿತ್ತು. ಇದನ್ನು ಕಂಡು ನಖಶಿಖಾಂತ ಉರಿದು ಹೋದ ಆರ್‌ಟಿಓ ಅಧಿಕಾರಿಗಳು ವಯನಾಡಿನ ಶಾಜಿ ಎಂಬ ಈ ಚಾಲಕನ ಚಾಲನಾ ಪರವಾನಗಿಯನ್ನೇ ಆರು ತಿಂಗಳ ಕಾಲ ರದ್ದು ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ