ಆ್ಯಪ್ನಗರ

ಬಾಲಕನನ್ನು ಶಾರ್ಕ್ ಬಾಯಿಯಿಂದ ರಕ್ಷಿಸಿದ ಸಾಹಸಿ ಅಧಿಕಾರಿ

ರಜೆಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಬಾಲಕನನ್ನು ರಕ್ಷಿಸಿದ್ದಾರೆ. ಸದ್ಯ ಇವರ ಸಾಹಸವನ್ನು ಕಂಡ ಜನ ಈ ಅಧಿಕಾರಿಯ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

Vijaya Karnataka Web 21 Jul 2020, 10:52 am
ಅಧಿಕಾರಿಯೊಬ್ಬರ ಸಮಯಪ್ರಜ್ಞೆಯಿಂದ ಬಾಲಕನೊಬ್ಬ ಅಪಾಯದಿಂದ ಪಾರಾಗಿದ್ದಾನೆ. ಬಾಲಕನತ್ತ ಸಾಗಿ ಬರುತ್ತಿದ್ದ ಶಾರ್ಕ್‌ಗೆ ಕೂದಲೆಳೆ ಅಂತರದಲ್ಲಿ ಅದರ ಬೇಟೆ ತಪ್ಪಿ ಹೋಗಿದೆ. ಹೀಗಾಗಿ, ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
Vijaya Karnataka Web Story Of Bravery
| Screengrab from video | Courtesy : Cocoa Beach Police & Fire/Facebook


ಆಡ್ರಿಯನ್ ಕೊಸಿಕಿ ಎಂಬ ಸಾಹಸಿ ಅಧಿಕಾರಿಯ ಕತೆ ಇದು. ಬಾಲಕನ ಪ್ರಾಣ ಉಳಿಸುವ ಮೂಲಕ ಆಡ್ರಿಯನ್ ಕೊಸಿಕಿ ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ. ಎಲ್ಲರೂ ಇವರ ಸಮಯಪ್ರಜ್ಞೆಯನ್ನು ಕೊಂಡಾಡಿದ್ದಾರೆ. ಅಧಿಕಾರಿಯ ಈ ಸಾಹಸ ಕತೆಯನ್ನು ಕೊಕೊ ಬೀಚ್ ಪೊಲೀಸ್ ಆಂಡ್ ಫೈರ್ ತನ್ನ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದೆ. ಸದ್ಯ ಈ ಪೋಸ್ಟ್‌ ಸಾಕಷ್ಟು ವೈರಲ್ ಆಗುತ್ತಿದೆ.

Also Read : ತಾಯಿಯನ್ನು ನೋಡಲು ಆಸ್ಪತ್ರೆ ಕಿಟಕಿಯೇರಿದ ಪುತ್ರ : ಅರೆಕ್ಷಣದಲ್ಲಿ ಕಣ್ಮುಚ್ಚಿದ ಅಮ್ಮ!


Also Read : ಬಟರ್ ಚಿಕನ್ ಆಸೆಗೆ 32 ಕಿ.ಮೀ ದೂರ ಬಂದು 1.23 ಲಕ್ಷ ರೂ. ದಂಡ ತೆತ್ತ ವ್ಯಕ್ತಿ...!

ರಜೆಯಲ್ಲಿದ್ದ ಕೊಸಿಕಿ ತನ್ನ ಪತ್ನಿಯೊಂದಿಗೆ ಅಮೇರಿಕಾದ ಕೊಕೊ ಬೀಚ್‌ಗೆ ಹೋಗಿದ್ದರು. ಇಲ್ಲಿ ಪತ್ನಿಯೊಂದಿಗೆ ಹೆಜ್ಜೆ ಹಾಕುತ್ತಿರುವಾಗ ಬೂಗಿ ಬೋರ್ಡ್‌ನಲ್ಲಿದ್ದ ಬಾಲಕನತ್ತ ಅಪಾಯಕಾರಿ ಶಾರ್ಕ್‌ ಬರುತ್ತಿರುವುದನ್ನು ಇವರು ಕಂಡಿದ್ದರು. ಈ ವೇಳೆ, ಮುಂದಿನ ಅಪಾಯವನ್ನು ತಕ್ಷಣ ಅರಿತುಕೊಂಡ ಆಡ್ರಿಯನ್ ಸ್ವಲ್ಪವೂ ತಡ ಮಾಡದೆ, ತನ್ನ ಬಗ್ಗೆಯೂ ಯೋಚಿಸದೆ ಓಡಿ ಹೋಗಿ ಹುಡುಗನನ್ನು ಸರ್ಫ್‌ನಿಂದ ಈಚೆ ಎಳೆದಿದ್ದಾರೆ. ಸ್ವಲ್ಪವೇ ಸ್ವಲ್ಪ ತಡವಾಗಿದ್ದರೂ ಅಲ್ಲಿನ ಪರಿಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಲು ಸಾಧ್ಯವೇ ಇರಲಿಲ್ಲ. ಯಾಕೆಂದರೆ, ಡೆಡ್ಲಿ ಶಾರ್ಕ್‌ ಬಹುತೇಕ ಬಾಲಕನ ಹತ್ತಿರವೇ ಬಂದಾಗಿತ್ತು...

Also Read : ಸ್ವತಃ ತಾನೇ ಬಂದು ಯುವತಿಯರೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟ ಕರಡಿ...!

ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಅಲ್ಲದೆ, ಪೊಲೀಸ್ ಇಲಾಖೆ ಕೂಡಾ ತನ್ನ ಅಧಿಕಾರಿಯ ಶೌರ್ಯವನ್ನು ಮೆಚ್ಚಿದೆ. ಜನ ಕೂಡಾ ಈ ವಿಡಿಯೋ ಕಂಡು ಒಂದು ಕ್ಷಣ ಭಯಭೀತರಾಗಿದ್ದರು. ಜೊತೆಗೆ, ಬಾಲಕನ ಪ್ರಾಣ ರಕ್ಷಿಸಿದ ಆಡ್ರಿಯನ್‌ಗೆ ಧನ್ಯವಾದ ಹೇಳಿದ್ದಾರೆ. ಎಲ್ಲರೂ ಆಡ್ರಿಯನ್ ಅವರನ್ನು ಹೀರೋ ಎಂದು ಬಣ್ಣಿಸಿದ್ದಾರೆ. `ಇನ್ನೊಬ್ಬರನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಕ್ಕಾಗಿ ನಮ್ಮ ಪೊಲೀಸ್ ಅಧಿಕಾರಿಯ ಬಗ್ಗೆ ತುಂಬಾ ಹೆಮ್ಮೆ ಇದೆ' ಎಂದೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ