ಆ್ಯಪ್ನಗರ

ಬೆಂಕಿ ಬಿದ್ದಿದ್ದ ಮನೆ ಪಕ್ಕದಲ್ಲಿದ್ದ ಮುದ್ದು ಶ್ವಾನಗಳನ್ನು ರಕ್ಷಿಸಿದ ಪೊಲೀಸ್ : ವಿಡಿಯೋ ವೈರಲ್

ಪೊಲೀಸ್ ಅಧಿಕಾರಿಯೊಬ್ಬರು ಶ್ವಾನಗಳನ್ನು ರಕ್ಷಿಸುವ ವಿಡಿಯೋವೊಂದು ಈಗ ನೆಟ್ಟಿಗರ ಹೃದಯ ಗೆದ್ದಿದೆ. ಸಮಯಪ್ರಜ್ಞೆಯಿಂದ ಎರಡು ಜೀವ ಉಳಿಸಿದ ಈ ಅಧಿಕಾರಿಗೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.

Vijaya Karnataka Web 13 Jan 2021, 6:51 pm
ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆಯಿಂದ ಉಳಿಯಿತು ಎರಡು ಮುದ್ದು ಜೀವಿಗಳ ಪ್ರಾಣ. ಬೆಂಕಿ ಬಿದ್ದಿದ್ದ ಮನೆಯ ಬಳಿ ಓಡಾಡುತ್ತಿದ್ದ ಎರಡು ಶ್ವಾನಗಳಿಗೆ ಸಿಕ್ಕಿತು ಪುನರ್ಜನ್ಮ.
Vijaya Karnataka Web Image by Clker-Free-Vector-Images from Pixabay
| Representative image | Image From Pixabay


ಸಹಾಯ ಮಾಡುವಾಗ ಸಿಗುವ ಖುಷಿ, ನೆಮ್ಮದಿ ಅನನ್ಯ. ಮಾಡುವ ಚಿಕ್ಕ ಸಹಾಯವೂ ಮನಸ್ಸಿಗೆ ದೊಡ್ಡ ಸಂತೃಪ್ತಿಯನ್ನು ತರುತ್ತದೆ. ಹೀಗೆ ಸಮಯಪ್ರಜ್ಞೆ ತೋರಿ ಸಂಕಷ್ಟದಲ್ಲಿರುವ ಮನುಷ್ಯರು, ಪ್ರಾಣಿ, ಪಕ್ಷಿಗಳ ಪ್ರಾಣ ಉಳಿಸಿದ ಅದೆಷ್ಟೋ ಹೃದಯವಂತರಿದ್ದಾರೆ. ಇಂತಹ ದೃಶ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಕಂಡಾಗ ಮನಸ್ಸು ತುಂಬಿ ಬರುತ್ತದೆ. ಅಂತೆಯೇ, ಸದ್ಯ ಪೊಲೀಸ್ ಅಧಿಕಾರಿಯೊಬ್ಬರು ಸಮಯಪ್ರಜ್ಞೆ ತೋರಿ ಎರಡು ಮುದ್ದಾದ ಜೀವಗಳನ್ನು ರಕ್ಷಿಸಿದ ದೃಶ್ಯ ಎಲ್ಲರ ಹೃದಯ ಗೆದ್ದಿದೆ.

Also Read : ಮಗ ಪರೀಕ್ಷೆಯಲ್ಲಿ ಪಾಸ್ ಆದ ಖುಷಿ : ಈ ತಾಯಿಯ ಸಂಭ್ರಮಾಚರಣೆಯೇ ಅದ್ಭುತ

ಫ್ಲೋರಿಡಾದ ಪಾಸ್ಕೊ ಕೌಂಟಿ ಶೆರಿಫ್ ಕಚೇರಿಯ ಅಧಿಕಾರಿಯೊಬ್ಬರು ತೋರಿದ ಸಮಯಪ್ರಜ್ಞೆ ಇದು. ಇಲ್ಲಿನ ಮನೆಯೊಂದರಲ್ಲಿ ಆಗ್ನಿ ಆಕಸ್ಮಿಕ ಸಂಭವಿಸಿದರೆ ಬಗ್ಗೆ ಕೌಂಟಿ ಶೆರಿಫ್ ಕಚೇರಿಗೆ ಮಾಹಿತಿ ಬಂದಿತ್ತು. ಈ ಸುದ್ದಿ ತಿಳಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದರು. ಈ ವೇಳೆ, ಎರಡು ಮುದ್ದಾದ ಶ್ವಾನದ ಮರಿಗಳು ಮನೆಯ ಪಕ್ಕದಲ್ಲಿಯೇ ಆತಂಕದಿಂದ ಓಡಾಡುತ್ತಿದ್ದವು. ತಕ್ಷಣ ಅಧಿಕಾರಿಯೊಬ್ಬರು ಈ ಶ್ವಾನಗಳನ್ನು ರಕ್ಷಣೆ ಮಾಡಿದ್ದಾರೆ. ಈ ಕಾರ್ಯಾಚರಣೆಯ ದೃಶ್ಯ ಈ ಅಧಿಕಾರಿಯ ಬಾಡಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Also Read : ಅನಕೊಂಡವನ್ನು ನೀರಿನಿಂದ ಮೇಲಕ್ಕೆ ಎಳೆಯಲು ಕರಿಚಿರತೆಯ ಶತಪ್ರಯತ್ನ : ಭಯಾನಕ ವಿಡಿಯೋ ವೈರಲ್


Also Read : ಹಿಮದಲ್ಲಿ ವಾಹನ ಪಾರ್ಕ್‌ ಮಾಡುವುದೇ ಕಷ್ಟ : ಪ್ರವಾಸದ ಯೋಜನೆ ವೇಳೆ ಹವಾಮಾನದ ಬಗೆಗೂ ಇರಲಿ ಗಮನ


ಅಧಿಕಾರಿ ವೇಗವಾಗಿ ಹೋಗಿ ಶ್ವಾನಗಳನ್ನು ರಕ್ಷಿಸಿದ್ದರಿಂದ ಇವುಗಳಿಗೆ ಯಾವುದೇ ತೊಂದರೆ ಆಗಿರಲಿಲ್ಲ. ಹೀಗಾಗಿ, ಶ್ವಾನಗಳನ್ನು ಸುರಕ್ಷಿತವಾಗಿ ಮಾಲಿಕರಿಗೆ ಒಪ್ಪಿಸಲಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿಯೇ ವೈರಲ್ ಆಗುತ್ತಿದೆ. ಸಾವಿರಾರು ಜನ ಈ ವಿಡಿಯೋವನ್ನು ವೀಕ್ಷಿಸಿ ಖುಷಿಪಟ್ಟಿದ್ದಾರೆ. ಎಲ್ಲರೂ ಈ ಅಧಿಕಾರಿಯ ಮಾನವೀಯತೆಯನ್ನು ಕೊಂಡಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ