ಆ್ಯಪ್ನಗರ

ಮತ್ತೆ ನೆನಪಾದ ದೇವದಾಸ್ : ಮನಸ್ಸು ತಟ್ಟುತ್ತದೆ ಈ ಮುದ್ದು ಗೆಳೆತನ

ಈ ವಿಡಿಯೋವನ್ನು ಎಷ್ಟು ನೋಡಿದರೂ ಮನಸ್ಸು ತಣಿಯುವುದಿಲ್ಲ. ಮತ್ತೆ ಮತ್ತೆ ನೋಡಬೇಕಿಸುವ ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

Vijaya Karnataka Web 25 Mar 2020, 4:44 pm
ಮುಂಗಾರು ಮಳೆ ಚಿತ್ರ ನೆನಪಿದೆಯಾ...? ಈ ಚಿತ್ರದಲ್ಲಿ ಹೀರೋ ಗಣೇಶ್‌ ನಿರ್ವಹಿಸಿದ್ದ ಪಾತ್ರದಷ್ಟೇ ಗಮನ ಸೆಳೆದಿದ್ದ ಇನ್ನೊಂದು ಪಾತ್ರ ಎಂದರೆ ಅದು ದೇವದಾಸ್. ಆ ದೇವದಾಸ್ ಯಾರೂ ಅಲ್ಲ ಒಂದು ಮುದ್ದು ಮೊಲ. ಗಣೇಶ್ ಮತ್ತು ಮೊಲದ ನಡುವಣ ಸ್ನೇಹ ಅಂದು ಪ್ರೇಕ್ಷಕರಿಗೆ ಬಲು ಇಷ್ಟವಾಗಿತ್ತು. ಕ್ಲೈಮ್ಯಾಕ್ಸ್‌ ಸೀನ್‌ನಲ್ಲಂತೂ ಗಣೇಶ್ ಜೊತೆ ಪ್ರೇಕ್ಷಕರೂ ಕಣ್ಣೀರಿಟ್ಟಿದ್ದರು... ಕಾರಣ, ದೇವದಾಸ್‌ನ ಆಗಲಿಕೆಯ ದೃಶ್ಯ. ಅಷ್ಟರ ಮಟ್ಟಿಗೆ ದೇವದಾಸ್ ಈ ಚಿತ್ರವನ್ನು ಆವರಿಸಿಕೊಂಡಿದ್ದ.
Vijaya Karnataka Web rebbit
| Screengrab from video | Courtesy : reddit/unnaturalorder/


Also Read : ಮೊಬೈಲ್‌ ಫೋನ್‌ನಲ್ಲಿ ಆಟ ಆಡುತ್ತಾ ಹೋಗಿ ಅರೆಸ್ಟ್‌ ಆದ 77ರ ವೃದ್ಧ...!

ಸದ್ಯ ಇಂತಹದ್ದೇ ಅಪೂರ್ವ ಸ್ನೇಹದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದು ಕೂಡಾ ಮೊಲ ಮತ್ತು ಮನುಷ್ಯನ ನಡುವಣ ಸ್ನೇಹದ ದೃಶ್ಯ. ಮನುಷ್ಯರ ಪಾಲಿಗೆ ಕೆಲ ಪ್ರಾಣಿಗಳು ಬರೀ ಪ್ರಾಣಿಗಳಾಗಿ ಉಳಿದಿಲ್ಲ, ಬದಲಾಗಿ ಅವುಗಳು ಆಪ್ತ ಸ್ನೇಹಿತರಂತೆ, ಕುಟುಂಬದ ಸದಸ್ಯರಂತೆಯೂ ಸ್ಥಾನ ಪಡೆದಿವೆ.

Also Read : Viral Video : ಶಿವಮಂದಿರದೊಳಗೇ ಸ್ಕೂಟರ್ ನುಗ್ಗಿಸಿ ದೇವರಿಗೆ ಅಡ್ಡ ಬಿದ್ದ ಯುವತಿ!

A bun making sure to kiss their human goodnight from r/aww
ಅಂತೆಯೇ ಇಲ್ಲೊಂದು ಮೊಲವೂ ಈ ಕುಟುಂಬದ ಸದಸ್ಯನಂತೆಯೇ ಆಗಿ ಹೋಗಿದೆ. ಅದೂ ಅಲ್ಲದೆ ಪ್ರತಿದಿನ ರಾತ್ರಿ ಈ ಮೊಲ ತನ್ನ ಮಾಲಿಕನ ಮುಖವನ್ನು ಪ್ರೀತಿಯಿಂದ ನೆಕ್ಕಿ `ಶುಭರಾತ್ರಿ' ಅರ್ಥಾತ್ ಗುಡ್ ನೈಟ್ ಎಂದು ಹೇಳುತ್ತದೆಯಂತೆ. ಈ ಮಧುರ ಬಾಂಧವ್ಯದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

Also Read : ಸ್ವಲ್ಪದರಲ್ಲೇ ಉಳಿಯಿತು ಜೀವ...! : ಇದು ಎದೆನಡುಗಿಸುವಂತಹ ದೃಶ್ಯ...!

ಈ ದೃಶ್ಯ ಕಂಡು ನೆಟ್ಟಿಗರು `ಸೋ ಕ್ಯೂಟ್' ಎಂದು ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ತಮ್ಮ ಬಾಲ್ಯದ ದಿನಗಳನ್ನೂ ನೆನಪಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ