ಆ್ಯಪ್ನಗರ

ಕತ್ತಲಲ್ಲಿ ರಸ್ತೆ ಬದಿಯಲ್ಲಿ ನಿಂತ ಆನೆ! : ಶಾಂತ ಸ್ವಭಾವದಿಂದಲೇ ಹೃದಯಗೆದ್ದ ಗಜ

ಆನೆಯೊಂದು ರಸ್ತೆ ಬದಿಯಲ್ಲಿ ನಿಂತ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಈ ವಿಡಿಯೋ ಎಲ್ಲರ ಮನಗೆದ್ದಿದೆ.

Vijaya Karnataka Web 26 Nov 2020, 1:14 pm
ಆನೆಗಳು ಶಾಂತ ಸ್ವಭಾವದ ಪ್ರಾಣಿಗಳು... ಬಹುತೇಕ ಸಂದರ್ಭದಲ್ಲಿ ಇವುಗಳು ತುಂಬಾ ಶಾಂತರೂಪಿಯಾಗಿಯೇ ಇರುತ್ತವೆ. ಒಂದೊಮ್ಮೆ ಇವುಗಳು ರೊಚ್ಚಿಗೆದ್ದರೆ ಪರಿಸ್ಥಿತಿ ಊಹಿಸುವುದಕ್ಕೂ ಕಷ್ಟ ಎಂಬುದು ಬೇರೆ ವಿಷಯ. ಆನೆಗಳು ಹೀಗೆ ರೊಚ್ಚಿಗೇಳುವುದಕ್ಕೆ ಕಾರಣಗಳು ಹಲವು. ತಮಗೆ ಅಪಾಯ ಎದುರಾಗುತ್ತಿದೆ ಎಂದು ಗೊತ್ತಾಗ ಕೂಡಾ ಆನೆಗಳು ಸಿಟ್ಟಿಗೇಳುತ್ತವೆ. ಆದರೆ, ಇಷ್ಟು ಶಕ್ತಿಶಾಲಿಯಾಗಿರುವ ಆನೆಗಳು ಬಹುತೇಕ ಸಂದರ್ಭದಲ್ಲಿ ಸಂಯಮದಿಂದಲೇ ಇರುತ್ತವೆ ಎಂಬುದು ಕೂಡಾ ಸತ್ಯ. ಆನೆಗಳ ಇಂತಹ ಬುದ್ಧಿವಂತಿಕೆ, ಹೃದಯವಂತಿಕೆಯ ಅದೆಷ್ಟೋ ವಿಡಿಯೋಗಳು ಸದಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಇಂತಹದ್ದೇ ಮತ್ತೊಂದು ವಿಡಿಯೋ ಎಲ್ಲರ ಗಮನ ಸೆಳೆದಿದೆ.
Vijaya Karnataka Web Image by Tomáš Dohnal from Pixabay
| Representative image | Image by Tomáš Dohnal from Pixabay


Also Read : ನೀರಿನಲ್ಲೂ ಧಗಧಗಿಸುವ ಅಗ್ನಿ...! : ಅಚ್ಚರಿ ಮೂಡಿಸಿದೆ ಬೆಂಕಿಯುಗುಳುವ ನಲ್ಲಿ...!

ಇದು ಆನೆಯೊಂದು ಬಲು ಸಂಯಮದಿಂದ ವಾಹನ ಸವಾರರಿಗೆ ದಾರಿ ಬಿಡುವ ಅದ್ಭುತ ದೃಶ್ಯ. ಆನೆಗಳು ಎಷ್ಟು ಜಾಣ ಪ್ರಾಣಿಗಳು ಎಂಬುದಕ್ಕೆ ಇದು ಕೂಡಾ ಒಂದು ಅಪೂರ್ವ ಉದಾಹರಣೆ.

Also Read : ಐಷಾರಾಮಿ ಕಾರಿನಲ್ಲಿ ಮನೆಗೆ ಡಿಕ್ಕಿ ಹೊಡೆದು ಮುಂಬಾಗಿಲಿನ ಸಮೇತ ಹೊರ ಬಂದ 18ರ ಯುವಕ...!


ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ವೈಭವ್ ಸಿಂಗ್ ತಮ್ಮ @VaibhavSinghIFS ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ಇದು. ಕತ್ತಲೆಯಲ್ಲಿ ವಾಹನಗಳು ಕಾಡಿನ ಮೂಲಕ ಹಾದು ಹೋಗುವ ರಸ್ತೆಯಲ್ಲಿ ಸಾಗುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ಸಾಗುತ್ತಿದ್ದಾಗಲೇ ರಸ್ತೆಯ ಬದಿಯಲ್ಲಿ ಬೃಹತ್ ಆನೆಯೊಂದು ನಿಂತಿರುವ ದೃಶ್ಯ ಕಾಣಿಸುತ್ತದೆ. ತಕ್ಷಣಕ್ಕೆ ನೋಡಿದ ಯಾರಾದರೂ ಈ ಆನೆಯನ್ನು ಕಂಡು ಭಯಗೊಳ್ಳಲೇಬೇಕು. ಆದರೆ, ಆನೆ ಮಾತ್ರ ಶಾಂತವಾಗಿ ತನ್ನ ಪಾಡಿಗೆ ತಾನು ನಿಂತು ತಿನ್ನುತ್ತಿತ್ತು. ವಾಹನ ಚಾಲಕರು ಕೂಡಾ ಆನೆಯಿಂದ ಒಂದಷ್ಟು ಅಂತರವನ್ನು ಇಟ್ಟುಕೊಂಡು, ಅದಕ್ಕೂ ತೊಂದರೆಯಾಗದಂತೆ ವಾಹನ ಚಲಾಯಿಸಿದ್ದರು. ಎರಡು ವಾಹನಗಳು ಸಾಗುತ್ತಿದ್ದರೂ ಆನೆ ತಾನು ವಿಚಲಿತವಾಗಲಿಲ್ಲ. ವಾಹನ ಸವಾರಿಗರನ್ನೂ ಬೆದರಿಸಲಿಲ್ಲ.

Also Read : ಬಾಹ್ಯಾಕಾಶದಿಂದ ಭೂಮಿ ಹೇಗೆ ಕಾಣಿಸುತ್ತದೆ ಗೊತ್ತಾ?: ಗಗನಯಾತ್ರಿ ಹಂಚಿಕೊಂಡ ವಿಡಿಯೋ ವೈರಲ್

ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಈ ಅಪೂರ್ವ ದೃಶ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಎಲ್ಲರೂ ಈ ಆನೆಯನ್ನು ಕೊಂಡಾಡಿದ್ದಾರೆ. ಪ್ರಾಣಿಗಳೊಂದಿಗೆ ನಾವು ಹೇಗೆ ವರ್ತಿಸಬೇಕು ಎಂಬುದಕ್ಕೂ ಇದು ಸಾಕ್ಷಿಯಾಗಿದೆ. ನಾವು ಶಾಂತತೆಯಿಂದ ಇದ್ದರೆ, ಪ್ರಾಣಿಗಳಿಗೆ ತೊಂದರೆ ಕೊಡದೇ ಸುಮ್ಮನಿದ್ದರೆ ಅವುಗಳೂ ಹಾಗೆಯೇ ಶಾಂತವಾಗಿರುತ್ತವೆ ಎಂಬುದು ಸಾಕಷ್ಟು ಸಂದರ್ಭಗಳಲ್ಲಿ ಸಾಬೀತಾಗಿದೆ. ನಾವು ಪ್ರಾಣಿಗಳನ್ನೂ ಗೌರವಿಸಬೇಕಾಗುತ್ತದೆ... ಯಾಕೆಂದರೆ, ಅವುಗಳಿಗೂ ಈ ನೆಲದಲ್ಲಿ ಬದುಕುವ ಸಮಾನ ಹಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ